<p><strong>ಬೆಂಗಳೂರು: </strong>ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್ಪೋರ್ಟ್ಸ್, ಚಿನ್ನಾಭರಣ ವ್ಯಾಪಾರವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಬೆಂಗಳೂರಿನಲ್ಲಿ ‘ಶುಭ್ ಸರ್ವಿಸ್ ಸೆಂಟರ್’ (ಸೇವಾ ಕೇಂದ್ರ) ಆರಂಭಿಸಿದೆ.</p>.<p>ಚಿನ್ನಾಭರಣ ಖರೀದಿ- ಪರೀಕ್ಷೆ, ಹಳೆ ಚಿನ್ನದ ಆಭರಣಗಳ ಮಾರಾಟ, ವಿನಿಮಯ, ಆಭರಣಗಳ ದುರಸ್ತಿ ಹೀಗೆ ಚಿನ್ನದ ವಹಿವಾಟಿನ ಎಲ್ಲ ಸಂದರ್ಭಗಳಲ್ಲಿ ಅಸಮರ್ಪಕ ವಿಧಾನಗಳಿಗೆ ಮತ್ತು ಎಲ್ಲ ಬಗೆಯ ಅನಿಶ್ಚಿತತೆಗಳಿಗೆ ಈ ಸೇವಾ ಕೇಂದ್ರ ತೆರೆ ಎಳೆಯಲಿದೆ. ಗ್ರಾಹಕರ ಸಮ್ಮುಖದಲ್ಲಿಯೇ ಆಭರಣಗಳ ಮೌಲ್ಯಮಾಪನ, ಪರೀಕ್ಷೆ ನಡೆಸಲು ಈ ಸೇವಾ ಕೇಂದ್ರ ನೆರವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p> ಸಗಟು ವ್ಯಾಪಾರದಲ್ಲಿ ಬಳಕೆಯಾಗುವ ಚಿನ್ನದ ಶುದ್ಧತೆ ಪರಿಕಲ್ಪನೆಯನ್ನು ಈಗ ಚಿಲ್ಲರೆ ವಹಿವಾಟಿಗೂ ಪರಿಚಯಿಸಲಾಗಿದೆ. ಇದು ಅಂದಾಜು 90 ಲಕ್ಷ ವೆಚ್ಚದಲ್ಲಿ ಈ ಸೇವಾ ಕೇಂದ್ರದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ. </p>.<p>‘ಇಂಡೆಕ್ಷನ್ ಫರ್ನಸ್’ನಲ್ಲಿ ಗ್ರಾಹಕರು ಸ್ವತಃ ತಾವೇ ತಮ್ಮ ಚಿನ್ನಾಭರಣ ಹಾಕಿ ಕರಗಿಸಬಹುದು. ಈ ಎಲ್ಲ ಪ್ರಕ್ರಿಯೆಯ ವಿಡಿಯೊ ದಾಖಲೆಯೂ ಇರುತ್ತದೆ. ಗ್ರಾಹಕರು ಬೇರೆಡೆ ಖರೀದಿಸಿದ ಆಭರಣಗಳ ಶುದ್ಧತೆಯನ್ನೂ ಇಲ್ಲಿ ಪರೀಕ್ಷಿಸಬಹುದು ಎಂದು ಮೆಹ್ತಾ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್ಪೋರ್ಟ್ಸ್, ಚಿನ್ನಾಭರಣ ವ್ಯಾಪಾರವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಬೆಂಗಳೂರಿನಲ್ಲಿ ‘ಶುಭ್ ಸರ್ವಿಸ್ ಸೆಂಟರ್’ (ಸೇವಾ ಕೇಂದ್ರ) ಆರಂಭಿಸಿದೆ.</p>.<p>ಚಿನ್ನಾಭರಣ ಖರೀದಿ- ಪರೀಕ್ಷೆ, ಹಳೆ ಚಿನ್ನದ ಆಭರಣಗಳ ಮಾರಾಟ, ವಿನಿಮಯ, ಆಭರಣಗಳ ದುರಸ್ತಿ ಹೀಗೆ ಚಿನ್ನದ ವಹಿವಾಟಿನ ಎಲ್ಲ ಸಂದರ್ಭಗಳಲ್ಲಿ ಅಸಮರ್ಪಕ ವಿಧಾನಗಳಿಗೆ ಮತ್ತು ಎಲ್ಲ ಬಗೆಯ ಅನಿಶ್ಚಿತತೆಗಳಿಗೆ ಈ ಸೇವಾ ಕೇಂದ್ರ ತೆರೆ ಎಳೆಯಲಿದೆ. ಗ್ರಾಹಕರ ಸಮ್ಮುಖದಲ್ಲಿಯೇ ಆಭರಣಗಳ ಮೌಲ್ಯಮಾಪನ, ಪರೀಕ್ಷೆ ನಡೆಸಲು ಈ ಸೇವಾ ಕೇಂದ್ರ ನೆರವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p> ಸಗಟು ವ್ಯಾಪಾರದಲ್ಲಿ ಬಳಕೆಯಾಗುವ ಚಿನ್ನದ ಶುದ್ಧತೆ ಪರಿಕಲ್ಪನೆಯನ್ನು ಈಗ ಚಿಲ್ಲರೆ ವಹಿವಾಟಿಗೂ ಪರಿಚಯಿಸಲಾಗಿದೆ. ಇದು ಅಂದಾಜು 90 ಲಕ್ಷ ವೆಚ್ಚದಲ್ಲಿ ಈ ಸೇವಾ ಕೇಂದ್ರದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ. </p>.<p>‘ಇಂಡೆಕ್ಷನ್ ಫರ್ನಸ್’ನಲ್ಲಿ ಗ್ರಾಹಕರು ಸ್ವತಃ ತಾವೇ ತಮ್ಮ ಚಿನ್ನಾಭರಣ ಹಾಕಿ ಕರಗಿಸಬಹುದು. ಈ ಎಲ್ಲ ಪ್ರಕ್ರಿಯೆಯ ವಿಡಿಯೊ ದಾಖಲೆಯೂ ಇರುತ್ತದೆ. ಗ್ರಾಹಕರು ಬೇರೆಡೆ ಖರೀದಿಸಿದ ಆಭರಣಗಳ ಶುದ್ಧತೆಯನ್ನೂ ಇಲ್ಲಿ ಪರೀಕ್ಷಿಸಬಹುದು ಎಂದು ಮೆಹ್ತಾ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>