<p>ತಿರುವನಂತಪುರ (ಪಿಟಿಐ): ಶೌಚಾಲಯ ಪ್ರತಿ ಮಹಿಳೆಯ ಸಂವಿಧಾನಿಕ ಹಕ್ಕಾಗಬೇಕು ಎಂದು ಪ್ರತಿಪಾದಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್, ಬಹಿರ್ದೆಸೆಗೆ ಹೋಗುವುದು ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವ ಭಾರತೀಯರ ಮನೋಭಾ ವವನ್ನು ಕಟುವಾಗಿ ಖಂಡಿಸಿದ್ದಾರೆ.<br /> <br /> ಮಹಿಳೆಯ ಖಾಸಗಿತನ ಹಾಗೂ ಘನತೆಯ ದೃಷ್ಟಿಯಿಂದ ಶೌಚಾಲಯ ಆಕೆಯ ಮೂಲಭೂತ ಹಕ್ಕಾಗಬೇಕು. ಪ್ರತಿ ಶಾಲೆ, ಅಂಗನವಾಡಿ ಹಾಗೂ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ಇರಲೇಬೇಕು ಎಂದು ರಮೇಶ್ ಹೇಳಿದ್ದಾರೆ.<br /> <br /> `ಶೌಚಾಲಯ ನಿರ್ಮಿಸದ ಹೊರತೂ ಇಂದಿರಾ ಆವಾಸ್ ಯೋಜನೆ ಅಡಿ ನಾವು ಹಣ ನೀಡುವುದಿಲ್ಲ. ಶೌಚಾಲಯ ನಿರ್ಮಾಣವನ್ನು ನಾವು ಕಡ್ಡಾಯಗೊಳಿಸುತ್ತಿದ್ದೇವೆ. ಅದು ಮೂಲಭೂತ ಹಕ್ಕಾಗಬೇಕು~ ಎಂದು ರಮೇಶ್ ತಿಳಿಸಿದರು.<br /> <br /> ಶೌಚಾಲಯ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಯಲ್ಲಿ ಕೇರಳ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಅವರು ವರದಿಗಾರರ ಜತೆ ಮಾತನಾಡಿದರು. <br /> <br /> ಬಹಿರಂಗವಾಗಿ ಮಲ ವಿಸರ್ಜನೆ ಮಾಡುವುದು ಭಾರತೀಯರ ಮನೋ ಧರ್ಮವಾಗಿದೆ. ಅವು ಪ್ರಗತಿಪರ ರಾಜ್ಯಗಳೋ ಅಥವಾ ಬಿಮಾರು (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ) ರಾಜ್ಯಗಳೋ ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಈ ಮನೋಭಾವ ಹೊಂದಿದ್ದಾರೆ. ಅದು ಕರ್ನಾಟಕದಲ್ಲೂ ಇದೆ, ತಮಿಳುನಾಡಿನಲ್ಲೂ ಇದೆ ಎಂದು ಸಚಿವರು ಖಂಡಿಸಿದರು. <br /> <br /> ಬಹಿರಂಗವಾಗಿ ಮಲ ವಿಸರ್ಜನೆ ಮಾಡುವವರ ಪೈಕಿ ಶೇ 60ರಷ್ಟು ಜನ ಭಾರತದಲ್ಲೇ ಕಾಣುತ್ತಾರೆ. ಈ ನಿಟ್ಟಿನಲ್ಲಿ ಸುಧಾರಣೆ ತರಲು ರಾಜಕೀಯ ಪಕ್ಷಗಳು ಶೌಚಾಲಯ, ಒಳಚರಂಡಿ ಸಮಸ್ಯೆಗಳನ್ನು ತಮ್ಮ ಕಾರ್ಯ ಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಮೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿರುವನಂತಪುರ (ಪಿಟಿಐ): ಶೌಚಾಲಯ ಪ್ರತಿ ಮಹಿಳೆಯ ಸಂವಿಧಾನಿಕ ಹಕ್ಕಾಗಬೇಕು ಎಂದು ಪ್ರತಿಪಾದಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್, ಬಹಿರ್ದೆಸೆಗೆ ಹೋಗುವುದು ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವ ಭಾರತೀಯರ ಮನೋಭಾ ವವನ್ನು ಕಟುವಾಗಿ ಖಂಡಿಸಿದ್ದಾರೆ.<br /> <br /> ಮಹಿಳೆಯ ಖಾಸಗಿತನ ಹಾಗೂ ಘನತೆಯ ದೃಷ್ಟಿಯಿಂದ ಶೌಚಾಲಯ ಆಕೆಯ ಮೂಲಭೂತ ಹಕ್ಕಾಗಬೇಕು. ಪ್ರತಿ ಶಾಲೆ, ಅಂಗನವಾಡಿ ಹಾಗೂ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ಇರಲೇಬೇಕು ಎಂದು ರಮೇಶ್ ಹೇಳಿದ್ದಾರೆ.<br /> <br /> `ಶೌಚಾಲಯ ನಿರ್ಮಿಸದ ಹೊರತೂ ಇಂದಿರಾ ಆವಾಸ್ ಯೋಜನೆ ಅಡಿ ನಾವು ಹಣ ನೀಡುವುದಿಲ್ಲ. ಶೌಚಾಲಯ ನಿರ್ಮಾಣವನ್ನು ನಾವು ಕಡ್ಡಾಯಗೊಳಿಸುತ್ತಿದ್ದೇವೆ. ಅದು ಮೂಲಭೂತ ಹಕ್ಕಾಗಬೇಕು~ ಎಂದು ರಮೇಶ್ ತಿಳಿಸಿದರು.<br /> <br /> ಶೌಚಾಲಯ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಯಲ್ಲಿ ಕೇರಳ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಅವರು ವರದಿಗಾರರ ಜತೆ ಮಾತನಾಡಿದರು. <br /> <br /> ಬಹಿರಂಗವಾಗಿ ಮಲ ವಿಸರ್ಜನೆ ಮಾಡುವುದು ಭಾರತೀಯರ ಮನೋ ಧರ್ಮವಾಗಿದೆ. ಅವು ಪ್ರಗತಿಪರ ರಾಜ್ಯಗಳೋ ಅಥವಾ ಬಿಮಾರು (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ) ರಾಜ್ಯಗಳೋ ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಈ ಮನೋಭಾವ ಹೊಂದಿದ್ದಾರೆ. ಅದು ಕರ್ನಾಟಕದಲ್ಲೂ ಇದೆ, ತಮಿಳುನಾಡಿನಲ್ಲೂ ಇದೆ ಎಂದು ಸಚಿವರು ಖಂಡಿಸಿದರು. <br /> <br /> ಬಹಿರಂಗವಾಗಿ ಮಲ ವಿಸರ್ಜನೆ ಮಾಡುವವರ ಪೈಕಿ ಶೇ 60ರಷ್ಟು ಜನ ಭಾರತದಲ್ಲೇ ಕಾಣುತ್ತಾರೆ. ಈ ನಿಟ್ಟಿನಲ್ಲಿ ಸುಧಾರಣೆ ತರಲು ರಾಜಕೀಯ ಪಕ್ಷಗಳು ಶೌಚಾಲಯ, ಒಳಚರಂಡಿ ಸಮಸ್ಯೆಗಳನ್ನು ತಮ್ಮ ಕಾರ್ಯ ಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಮೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>