<p>ರಾಜಕೀಯ ಸಂಸ್ಕೃತಿ ಎಂದರೆ ಕೇವಲ ಮಾನವೀಯತೆಯ ವಿರುದ್ಧ ನಡೆಯುವುದೇ? ಒಂದು ವೇಳೆ ರಾಜಕೀಯ ವ್ಯಕ್ತಿ ಸಂಕಟದಲ್ಲಿ ಸಿಕ್ಕಿ ಬಿದ್ದಾಗ, ಮಾನವೀಯತೆಯನ್ನು ತ್ಯಜಿಸಿ ಸಂತೋಷ ಪಡುವುದು, ಕುಣಿದಾಡುವುದು, ಲಾಡು ಹಂಚುವುದು ಸರಿಯೇ?<br /> ಪ್ರವಾದಿ ಮಹ್ಮದ್ರವರು ಮಾನವ ಕೋಟಿಗೆ ಒಂದು ಸಂದೇಶ ಕೊಟ್ಟಿದ್ದಾರೆ. `ನಿಮ್ಮ ಸಹೋದರನ ಸಂಕಟಕಾಲದಲ್ಲಿ ಸಂತೋಷ ಪಡಬೇಡಿ. ದೇವರು ಇದನ್ನು ಒಪ್ಪುವುದಿಲ್ಲ. ದೇವರು ಸಂಕಟದಲ್ಲಿರುವ ವ್ಯಕ್ತಿಗೆ ಅನುಕಂಪ ತೋರಿಸಬಹುದು ಮತ್ತು ನಿಮ್ಮನ್ನು ಸಂಕಟದಲ್ಲಿ ಸಿಕ್ಕಿಸಬಹುದು.~ ಈ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು.<br /> <br /> ಮದರ್ ತೆರೇಸಾರವರು ಒಂದು ಮಾತು ಹೇಳಿದ್ದಾರೆ, `ನೀವು ನಿಮ್ಮ ಸಹೋದರನ ಸಂತೋಷದಲ್ಲಿ ಭಾಗಿಯಾದರೆ ಅವರ ಸಂತೋಷ ಇನ್ನೂ ಹೆಚ್ಚಾಗುವುದು. ಹಾಗೆಯೇ ಅವರ ಕಷ್ಟದಲ್ಲಿ ಭಾಗಿಯಾದರೆ ಅವರ ನೋವಿನಲ್ಲೂ ಭಾಗಿಯಾದರೆ, ಅವರ ಕಷ್ಟ ಮತ್ತು ನೋವು ಕಮ್ಮಿಯಾಗುವುದು.~<br /> <br /> ಹಿಂದು ಧರ್ಮ ಶಾಸ್ತ್ರಗಳಲ್ಲೂ ಈ ಮಾತು ಕಂಡು ಬರುವುದು. ಮಾನವೀಯತೆಗೆ ಮಾನ್ಯತೆ ಸಿಗುವುದು. <br /> <br /> ಇಂದಿನ ನಮ್ಮ ರಾಜಕಾರಣಿಗಳು ಈ ಧರ್ಮಶಾಸ್ತ್ರಗಳ ಕಡೆ ಗಮನ ಕೊಡಬೇಕು. ಅಧಿಕಾರದ ಗರ್ವ, ದರ್ಪ ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಮ್ಮ ವಿರೋಧಿಗಳ ಕಷ್ಟ, ನೋವು ತಮಗೂ ಒಂದು ದಿವಸ ಬರಬಹುದೆಂಬ ಭೀತಿ ಹೃದಯದಲ್ಲಿ ನಾಟಿರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜಕೀಯ ಸಂಸ್ಕೃತಿ ಎಂದರೆ ಕೇವಲ ಮಾನವೀಯತೆಯ ವಿರುದ್ಧ ನಡೆಯುವುದೇ? ಒಂದು ವೇಳೆ ರಾಜಕೀಯ ವ್ಯಕ್ತಿ ಸಂಕಟದಲ್ಲಿ ಸಿಕ್ಕಿ ಬಿದ್ದಾಗ, ಮಾನವೀಯತೆಯನ್ನು ತ್ಯಜಿಸಿ ಸಂತೋಷ ಪಡುವುದು, ಕುಣಿದಾಡುವುದು, ಲಾಡು ಹಂಚುವುದು ಸರಿಯೇ?<br /> ಪ್ರವಾದಿ ಮಹ್ಮದ್ರವರು ಮಾನವ ಕೋಟಿಗೆ ಒಂದು ಸಂದೇಶ ಕೊಟ್ಟಿದ್ದಾರೆ. `ನಿಮ್ಮ ಸಹೋದರನ ಸಂಕಟಕಾಲದಲ್ಲಿ ಸಂತೋಷ ಪಡಬೇಡಿ. ದೇವರು ಇದನ್ನು ಒಪ್ಪುವುದಿಲ್ಲ. ದೇವರು ಸಂಕಟದಲ್ಲಿರುವ ವ್ಯಕ್ತಿಗೆ ಅನುಕಂಪ ತೋರಿಸಬಹುದು ಮತ್ತು ನಿಮ್ಮನ್ನು ಸಂಕಟದಲ್ಲಿ ಸಿಕ್ಕಿಸಬಹುದು.~ ಈ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು.<br /> <br /> ಮದರ್ ತೆರೇಸಾರವರು ಒಂದು ಮಾತು ಹೇಳಿದ್ದಾರೆ, `ನೀವು ನಿಮ್ಮ ಸಹೋದರನ ಸಂತೋಷದಲ್ಲಿ ಭಾಗಿಯಾದರೆ ಅವರ ಸಂತೋಷ ಇನ್ನೂ ಹೆಚ್ಚಾಗುವುದು. ಹಾಗೆಯೇ ಅವರ ಕಷ್ಟದಲ್ಲಿ ಭಾಗಿಯಾದರೆ ಅವರ ನೋವಿನಲ್ಲೂ ಭಾಗಿಯಾದರೆ, ಅವರ ಕಷ್ಟ ಮತ್ತು ನೋವು ಕಮ್ಮಿಯಾಗುವುದು.~<br /> <br /> ಹಿಂದು ಧರ್ಮ ಶಾಸ್ತ್ರಗಳಲ್ಲೂ ಈ ಮಾತು ಕಂಡು ಬರುವುದು. ಮಾನವೀಯತೆಗೆ ಮಾನ್ಯತೆ ಸಿಗುವುದು. <br /> <br /> ಇಂದಿನ ನಮ್ಮ ರಾಜಕಾರಣಿಗಳು ಈ ಧರ್ಮಶಾಸ್ತ್ರಗಳ ಕಡೆ ಗಮನ ಕೊಡಬೇಕು. ಅಧಿಕಾರದ ಗರ್ವ, ದರ್ಪ ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಮ್ಮ ವಿರೋಧಿಗಳ ಕಷ್ಟ, ನೋವು ತಮಗೂ ಒಂದು ದಿವಸ ಬರಬಹುದೆಂಬ ಭೀತಿ ಹೃದಯದಲ್ಲಿ ನಾಟಿರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>