<p><strong>ಮೋದಿ, ರಾಜ್ನಾಥ್ಗೆ ಸುಧೀಂದ್ರ ಟೀಕೆ</strong><br /> ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರಂಕುಶವಾದಿ ಮತ್ತು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಕಪಟಿ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಬಣ್ಣಿಸಿದ್ದಾರೆ. `ಮೋದಿ ಅವರು ಪಕ್ಷಕ್ಕಾಗಿ ಇಬ್ಬಗೆಯ ಬೊಬ್ಬೆಯಿಡುವ ಸ್ವೇಚ್ಛಾವರ್ತಿಯಾಗಿದ್ದು, ಸಿಂಗ್ ಜ್ಯೋತಿಷವನ್ನು ನಂಬಿ ಪ್ರಧಾನಿಯಾಗುವ ಕನಸಿನಲ್ಲಿದ್ದಾರೆ' ಎಂದು ರೆಡಿಫ್.ಕಾಮ್ನಲ್ಲಿ ಬರೆದ ಲೇಖನದಲ್ಲಿ ಕುಲಕರ್ಣಿ ಟೀಕಿಸಿದ್ದಾರೆ.<br /> <br /> <strong>ಯಾತ್ರೆಗೆ ಉಗ್ರರ ದಾಳಿ ಬೆದರಿಕೆ</strong><br /> ಶ್ರೀನಗರ/ನವದೆಹಲಿ (ಪಿಟಿಐ): ಯಾತ್ರಿಗಳು ಸುಮಾರು ಎರಡು ತಿಂಗಳವರೆಗೆ ಕ್ರಮಿಸಬೇಕಾದ ಅಮರನಾಥ ಯಾತ್ರಾ ಮಾರ್ಗದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಂಭವ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಬುಧವಾರ ಹೇಳಿದೆ. ಈ ಮಾರ್ಗದಲ್ಲಿ ಉಗ್ರರ ದಾಳಿ ಬೆದರಿಕೆ ಇರುವುದಾಗಿ ಕೇಂದ್ರ ಸರ್ಕಾರವೂ ತಿಳಿಸಿದೆ.<br /> <br /> ಯಾತ್ರಿಕರಿಗೆ ಭದ್ರತೆ ಒದಗಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಯಾತ್ರಿಗಳ ಸುರಕ್ಷತೆಗಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳನ್ನು ಕಳುಹಿಸುತ್ತಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.<br /> <br /> <strong><span style="font-size: 26px;">ಸಂವಿಧಾನದ 21ನೇ ವಿಧಿ ಸರ್ವರ ಹಕ್ಕು</span></strong><br /> ನವದೆಹಲಿ (ಐಎಎನ್ಎಸ್): `ಜೀವಿಸಲು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸಲು ಸಂವಿಧಾನ ನೀಡಿರುವ ಹಕ್ಕು' ಭಾರತೀಯನಿಗೆ ಮಾತ್ರವಲ್ಲದೆ, ದೇಶದಲ್ಲಿ ನೆಲೆಸಿರುವ ಯಾವುದೇ ವಿದೇಶಿ ಪ್ರಜೆಗೂ ಲಭ್ಯವಿರುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.<br /> <br /> ಮೂವರು ಉಗಾಂಡ ರಾಷ್ಟ್ರೀಯರ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ, ಪಾಸ್ಪೋರ್ಟ್ ವಶಪಡಿಸಿಕೊಂಡು, ಪ್ರಯಾಣ ನಿರ್ಬಂಧಿಸಿದ ಆದೇಶವನ್ನು ರದ್ದುಪಡಿಸಿ, ಸಂವಿಧಾನದ 21ನೇ ವಿಧಿಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ರಂಜನ್ ಗೊಗೋಯ್ ಅವರನ್ನೊಳಗೊಂಡ ನ್ಯಾಯಪೀಠವು, `ಕಾನೂನಿನಲ್ಲಿ ತಿಳಿಸಿರುವ ಕೆಲವು ನಿಯಮಾವಳಿಗಳ ಹೊರತಾಗಿ ಯಾವುದೇ ವ್ಯಕ್ತಿಯಾದರೂ ದೇಶದಲ್ಲಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸುವ ಹಕ್ಕು ಹೊಂದಿರುತ್ತಾನೆ' ಎಂದು ತಿಳಿಸಿತು.<br /> <br /> <strong>ಸಿಪಿಎಂ ಹತ್ಯೆ ಸಂಚು: ಮಮತಾ</strong><br /> ಕೋಲ್ಕತ್ತ (ಪಿಟಿಐ, ಐಎಎನ್ಎಸ್): ರಾಜ್ಯದಲ್ಲಿ ಅಧಿಕಾರಕ್ಕೆ ಮರಳಲು ಬಯಸಿರುವ ಸಿಪಿಎಂ, ತಮ್ಮ ಹತ್ಯೆಗಾಗಿ ಮಾವೊವಾದಿಗಳೊಡನೆ ಕೈಜೋಡಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಇಲ್ಲಿ ಆರೋಪಿಸಿದರು.<br /> <br /> `ತಮ್ಮನ್ನು ಹತ್ಯೆ ಮಾಡುವ ಕುತಂತ್ರದಲ್ಲಿ ಯಶಸ್ಸು ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮಾರ್ಕ್ಸ್ವಾದಿಗಳೂ ಸ್ನೇಹ ಬೆಳೆಸಿದ್ದಾರೆ. ಸಿಪಿಎಂ, ಕಾಂಗ್ರೆಸ್ ಹಾಗೂ ಮಾವೊವಾದಿಗಳ ಈ ಸಂಚಿನಲ್ಲಿ ಮಾಧ್ಯಮ ಸಂಸ್ಥೆಯೊಂದರ ಕೈವಾಡವಿದೆ' ಎಂದೂ ಅವರು ಆಪಾದಿಸಿದರು.</p>.<p><strong>ಕಲ್ಲಿದ್ದಲು ಹಗರಣ: 13ನೇ ಎಫ್ಐಆರ್</strong><br /> ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಉಕ್ಕು ಕಂಪೆನಿಯೊಂದರ ವಿರುದ್ಧ ಹೊಸ ಮೊಕದ್ದಮೆ (ಎಫ್ಐಆರ್) ದಾಖಲಿಸಿಕೊಂಡಿರುವ ಸಿಬಿಐ, ಇಲ್ಲಿರುವ ಸಂಸ್ಥೆಯ ಕಟ್ಟಡಗಳ ಮೇಲೆ ಬುಧವಾರ ದಾಳಿ ನಡೆಸಿ ದಾಖಲುಪತ್ರಗಳಿಗಾಗಿ ಶೋಧ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೋದಿ, ರಾಜ್ನಾಥ್ಗೆ ಸುಧೀಂದ್ರ ಟೀಕೆ</strong><br /> ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರಂಕುಶವಾದಿ ಮತ್ತು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಕಪಟಿ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಬಣ್ಣಿಸಿದ್ದಾರೆ. `ಮೋದಿ ಅವರು ಪಕ್ಷಕ್ಕಾಗಿ ಇಬ್ಬಗೆಯ ಬೊಬ್ಬೆಯಿಡುವ ಸ್ವೇಚ್ಛಾವರ್ತಿಯಾಗಿದ್ದು, ಸಿಂಗ್ ಜ್ಯೋತಿಷವನ್ನು ನಂಬಿ ಪ್ರಧಾನಿಯಾಗುವ ಕನಸಿನಲ್ಲಿದ್ದಾರೆ' ಎಂದು ರೆಡಿಫ್.ಕಾಮ್ನಲ್ಲಿ ಬರೆದ ಲೇಖನದಲ್ಲಿ ಕುಲಕರ್ಣಿ ಟೀಕಿಸಿದ್ದಾರೆ.<br /> <br /> <strong>ಯಾತ್ರೆಗೆ ಉಗ್ರರ ದಾಳಿ ಬೆದರಿಕೆ</strong><br /> ಶ್ರೀನಗರ/ನವದೆಹಲಿ (ಪಿಟಿಐ): ಯಾತ್ರಿಗಳು ಸುಮಾರು ಎರಡು ತಿಂಗಳವರೆಗೆ ಕ್ರಮಿಸಬೇಕಾದ ಅಮರನಾಥ ಯಾತ್ರಾ ಮಾರ್ಗದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಂಭವ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಬುಧವಾರ ಹೇಳಿದೆ. ಈ ಮಾರ್ಗದಲ್ಲಿ ಉಗ್ರರ ದಾಳಿ ಬೆದರಿಕೆ ಇರುವುದಾಗಿ ಕೇಂದ್ರ ಸರ್ಕಾರವೂ ತಿಳಿಸಿದೆ.<br /> <br /> ಯಾತ್ರಿಕರಿಗೆ ಭದ್ರತೆ ಒದಗಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಯಾತ್ರಿಗಳ ಸುರಕ್ಷತೆಗಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳನ್ನು ಕಳುಹಿಸುತ್ತಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.<br /> <br /> <strong><span style="font-size: 26px;">ಸಂವಿಧಾನದ 21ನೇ ವಿಧಿ ಸರ್ವರ ಹಕ್ಕು</span></strong><br /> ನವದೆಹಲಿ (ಐಎಎನ್ಎಸ್): `ಜೀವಿಸಲು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸಲು ಸಂವಿಧಾನ ನೀಡಿರುವ ಹಕ್ಕು' ಭಾರತೀಯನಿಗೆ ಮಾತ್ರವಲ್ಲದೆ, ದೇಶದಲ್ಲಿ ನೆಲೆಸಿರುವ ಯಾವುದೇ ವಿದೇಶಿ ಪ್ರಜೆಗೂ ಲಭ್ಯವಿರುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.<br /> <br /> ಮೂವರು ಉಗಾಂಡ ರಾಷ್ಟ್ರೀಯರ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ, ಪಾಸ್ಪೋರ್ಟ್ ವಶಪಡಿಸಿಕೊಂಡು, ಪ್ರಯಾಣ ನಿರ್ಬಂಧಿಸಿದ ಆದೇಶವನ್ನು ರದ್ದುಪಡಿಸಿ, ಸಂವಿಧಾನದ 21ನೇ ವಿಧಿಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ರಂಜನ್ ಗೊಗೋಯ್ ಅವರನ್ನೊಳಗೊಂಡ ನ್ಯಾಯಪೀಠವು, `ಕಾನೂನಿನಲ್ಲಿ ತಿಳಿಸಿರುವ ಕೆಲವು ನಿಯಮಾವಳಿಗಳ ಹೊರತಾಗಿ ಯಾವುದೇ ವ್ಯಕ್ತಿಯಾದರೂ ದೇಶದಲ್ಲಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸುವ ಹಕ್ಕು ಹೊಂದಿರುತ್ತಾನೆ' ಎಂದು ತಿಳಿಸಿತು.<br /> <br /> <strong>ಸಿಪಿಎಂ ಹತ್ಯೆ ಸಂಚು: ಮಮತಾ</strong><br /> ಕೋಲ್ಕತ್ತ (ಪಿಟಿಐ, ಐಎಎನ್ಎಸ್): ರಾಜ್ಯದಲ್ಲಿ ಅಧಿಕಾರಕ್ಕೆ ಮರಳಲು ಬಯಸಿರುವ ಸಿಪಿಎಂ, ತಮ್ಮ ಹತ್ಯೆಗಾಗಿ ಮಾವೊವಾದಿಗಳೊಡನೆ ಕೈಜೋಡಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಇಲ್ಲಿ ಆರೋಪಿಸಿದರು.<br /> <br /> `ತಮ್ಮನ್ನು ಹತ್ಯೆ ಮಾಡುವ ಕುತಂತ್ರದಲ್ಲಿ ಯಶಸ್ಸು ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮಾರ್ಕ್ಸ್ವಾದಿಗಳೂ ಸ್ನೇಹ ಬೆಳೆಸಿದ್ದಾರೆ. ಸಿಪಿಎಂ, ಕಾಂಗ್ರೆಸ್ ಹಾಗೂ ಮಾವೊವಾದಿಗಳ ಈ ಸಂಚಿನಲ್ಲಿ ಮಾಧ್ಯಮ ಸಂಸ್ಥೆಯೊಂದರ ಕೈವಾಡವಿದೆ' ಎಂದೂ ಅವರು ಆಪಾದಿಸಿದರು.</p>.<p><strong>ಕಲ್ಲಿದ್ದಲು ಹಗರಣ: 13ನೇ ಎಫ್ಐಆರ್</strong><br /> ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಉಕ್ಕು ಕಂಪೆನಿಯೊಂದರ ವಿರುದ್ಧ ಹೊಸ ಮೊಕದ್ದಮೆ (ಎಫ್ಐಆರ್) ದಾಖಲಿಸಿಕೊಂಡಿರುವ ಸಿಬಿಐ, ಇಲ್ಲಿರುವ ಸಂಸ್ಥೆಯ ಕಟ್ಟಡಗಳ ಮೇಲೆ ಬುಧವಾರ ದಾಳಿ ನಡೆಸಿ ದಾಖಲುಪತ್ರಗಳಿಗಾಗಿ ಶೋಧ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>