<p><strong>ತುಮಕೂರು:</strong> ನಗರದ ಸಿದ್ದಗಂಗ ತಾಂತ್ರಿಕ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಉತ್ಸವ `ಹ್ಯಾಲ್ಸಿಯಾನ್~ಗೆ ಗುರುವಾರ ಚಿತ್ರನಟ ಸಿ.ಆರ್.ಸಿಂಹ ಚಾಲನೆ ನೀಡಿದರು.ಸಂಸ್ಕೃತಿ, ಸಾಹಿತ್ಯ, ಕಲೆ, ವಿನೋದವಿಲ್ಲದ ವಿದ್ಯಾರ್ಥಿ ಜೀವನವೇ ಅರ್ಥಹೀನ. <br /> <br /> ಯಾವುದೇ ವ್ಯಕ್ತಿ ತನ್ನ ಇಡೀ ಜೀವನದಲ್ಲಿ ವಿದ್ಯಾರ್ಥಿ ಬದುಕನ್ನು ನೆನಪಿಟ್ಟುಕೊಂಡಿರುತ್ತಾನೆ. ಸೆಮಿಸ್ಟರ್ ಪದ್ಧತಿ ಮತ್ತು ಓದಿನ ಹೊರೆ ವ್ಯಕ್ತಿತ್ವ ವಿಕಸನಕ್ಕೆ ಎಂದಿಗೂ ತೊಡಕಾಗಬಾರದು ಎಂದು ನುಡಿದರು.<br /> <br /> ಎಂಜಿನಿಯರಿಂಗ್, ವೈದ್ಯಕೀಯ ಓದುವುದು ಶ್ರೇಯಸ್ಕರ ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿದೆ. ಪೋಷಕರ ಹೊರೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಈ ಕೋರ್ಸ್ಗಳಿಗೆ ಸೇರಿಕೊಳ್ಳುತ್ತಾರೆ. ಮೊದಲನೇ ದರ್ಜೆ ಕಲಾವಿದನಾಗಬಹುದಾಗಿದ್ದ ವ್ಯಕ್ತಿ ಮೂರನೇ ದರ್ಜೆ ಎಂಜಿನಿಯರ್ ಆಗುತ್ತಿದ್ದಾನೆ. ಇಂಥ ವಿಪರ್ಯಾಸಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.<br /> <br /> ಪ್ರಸ್ತುತ ಯಶಸ್ಸನ್ನು ಹಣದಿಂದ ಅಳೆಯಲಾಗುತ್ತಿದೆ. ಹೆಚ್ಚು ಸಂಬಳ, ದೊಡ್ಡ ಕಾರು, ದೊಡ್ಡ ಮನೆ ಸೇರಿದಂತೆ ಭೌತಿಕ ಜಗತ್ತಿನಲ್ಲಿ ಆಸ್ತಿ ಸಂಪಾದಿಸುವ ಹಾಗೂ ಸಂಪತ್ತು ಕೂಡಿಡುವ ಹುಚ್ಚು ಸ್ಪರ್ಧೆ ಎಲ್ಲೆಡೆ ಕಂಡು ಬರುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. <br /> <br /> ಯಶಸ್ಸನ್ನು ಮನಃಶಾಂತಿಯಿಂದ ಅಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.<br /> ಎಸ್ಐಟಿ ಪ್ರಾಚಾರ್ಯ ಡಾ. ಶಿವಕುಮಾರಯ್ಯ ಮಾತನಾಡಿದರು. ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ, ಡೀನ್ ಪ್ರೊ. ಬಸವರಾಜಯ್ಯ, ವಿದ್ಯಾರ್ಥಿ ಪ್ರತಿನಿಧಿ ಗಳಾದ ಮಯೂರ್ ಅಗ್ನಿಹೋತ್ರಿ, ವೈಭವ್ ಜೈನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ನಗರದ ಸಿದ್ದಗಂಗ ತಾಂತ್ರಿಕ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಉತ್ಸವ `ಹ್ಯಾಲ್ಸಿಯಾನ್~ಗೆ ಗುರುವಾರ ಚಿತ್ರನಟ ಸಿ.ಆರ್.ಸಿಂಹ ಚಾಲನೆ ನೀಡಿದರು.ಸಂಸ್ಕೃತಿ, ಸಾಹಿತ್ಯ, ಕಲೆ, ವಿನೋದವಿಲ್ಲದ ವಿದ್ಯಾರ್ಥಿ ಜೀವನವೇ ಅರ್ಥಹೀನ. <br /> <br /> ಯಾವುದೇ ವ್ಯಕ್ತಿ ತನ್ನ ಇಡೀ ಜೀವನದಲ್ಲಿ ವಿದ್ಯಾರ್ಥಿ ಬದುಕನ್ನು ನೆನಪಿಟ್ಟುಕೊಂಡಿರುತ್ತಾನೆ. ಸೆಮಿಸ್ಟರ್ ಪದ್ಧತಿ ಮತ್ತು ಓದಿನ ಹೊರೆ ವ್ಯಕ್ತಿತ್ವ ವಿಕಸನಕ್ಕೆ ಎಂದಿಗೂ ತೊಡಕಾಗಬಾರದು ಎಂದು ನುಡಿದರು.<br /> <br /> ಎಂಜಿನಿಯರಿಂಗ್, ವೈದ್ಯಕೀಯ ಓದುವುದು ಶ್ರೇಯಸ್ಕರ ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿದೆ. ಪೋಷಕರ ಹೊರೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಈ ಕೋರ್ಸ್ಗಳಿಗೆ ಸೇರಿಕೊಳ್ಳುತ್ತಾರೆ. ಮೊದಲನೇ ದರ್ಜೆ ಕಲಾವಿದನಾಗಬಹುದಾಗಿದ್ದ ವ್ಯಕ್ತಿ ಮೂರನೇ ದರ್ಜೆ ಎಂಜಿನಿಯರ್ ಆಗುತ್ತಿದ್ದಾನೆ. ಇಂಥ ವಿಪರ್ಯಾಸಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.<br /> <br /> ಪ್ರಸ್ತುತ ಯಶಸ್ಸನ್ನು ಹಣದಿಂದ ಅಳೆಯಲಾಗುತ್ತಿದೆ. ಹೆಚ್ಚು ಸಂಬಳ, ದೊಡ್ಡ ಕಾರು, ದೊಡ್ಡ ಮನೆ ಸೇರಿದಂತೆ ಭೌತಿಕ ಜಗತ್ತಿನಲ್ಲಿ ಆಸ್ತಿ ಸಂಪಾದಿಸುವ ಹಾಗೂ ಸಂಪತ್ತು ಕೂಡಿಡುವ ಹುಚ್ಚು ಸ್ಪರ್ಧೆ ಎಲ್ಲೆಡೆ ಕಂಡು ಬರುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. <br /> <br /> ಯಶಸ್ಸನ್ನು ಮನಃಶಾಂತಿಯಿಂದ ಅಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.<br /> ಎಸ್ಐಟಿ ಪ್ರಾಚಾರ್ಯ ಡಾ. ಶಿವಕುಮಾರಯ್ಯ ಮಾತನಾಡಿದರು. ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ, ಡೀನ್ ಪ್ರೊ. ಬಸವರಾಜಯ್ಯ, ವಿದ್ಯಾರ್ಥಿ ಪ್ರತಿನಿಧಿ ಗಳಾದ ಮಯೂರ್ ಅಗ್ನಿಹೋತ್ರಿ, ವೈಭವ್ ಜೈನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>