<p><strong>ಬೆಂಗಳೂರು: </strong>`ತನ್ನ ಜಮೀನಿನಲ್ಲಿ ಮಂತ್ರಿ ಡೆವಲಪರ್ಸ್ ಸಂಸ್ಥೆಯು ಮತ್ತೆ ಬ್ಯಾರಿಕೇಡ್ಗಳನ್ನು ನಿರ್ಮಿಸುತ್ತಿದೆ~ ಎಂದು ರೈಲ್ವೆ ಇಲಾಖೆ ಆರೋಪಿಸಿರುವ ಹಿನ್ನೆಲೆಯಲ್ಲಿ `ನಮ್ಮ ಮೆಟ್ರೊ~ದ ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ವಿವಾದ ಮತ್ತಷ್ಟು ಕಗ್ಗಂಟಾಗಿದೆ.<br /> <br /> ರೈಲ್ವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಬಿಬಿಎಂಪಿ ವರದಿ ಆಧರಿಸಿ ನೈರುತ್ಯ ರೈಲ್ವೆ ಇತ್ತೀಚೆಗೆ ಆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹಾಗೂ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (ಬಿಎಂಆರ್ಸಿಎಲ್) ಹೈಕೋರ್ಟ್ ಮೊರೆ ಹೋಗಿದ್ದವು. ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು. <br /> <br /> ವಿವಾದಾತ್ಮಕ ಜಮೀನಿನಲ್ಲಿ ಇತ್ತೀಚೆಗೆ ಪುನಃ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ರೈಲ್ವೆ ಇಲಾಖೆ ಗಮನಕ್ಕೆ ಬಂದಿದ್ದು ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೌಖಿಕವಾಗಿ ಸೂಚಿಸಿದ್ದರು.<br /> <br /> ರೈಲ್ವೆ ಇಲಾಖೆ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿ ಬಿಎಂಆರ್ಸಿಎಲ್ ಹಾಗೂ ಸಂಸ್ಥೆ ಪುನಃ ಕೋರ್ಟ್ ಮೊರೆ ಹೋಗಿವೆ. ಉಭಯ ಬಣದವರು ಹೇಳಿಕೆ ನೀಡುವಂತೆ ಕೋರ್ಟ್ ಸೂಚಿಸಿರುವುದಾಗಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.<br /> <br /> `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸುಧಾಂಶು ಮಣಿ, `ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶ ಇರುವಾಗ ಅಲ್ಲಿ ಬ್ಯಾರಿಕೇಡ್ ನಿರ್ಮಿಸಲು ಸಂಸ್ಥೆ ಮುಂದಾಗಿದೆ. ಆ ಜಾಗ ರೈಲ್ವೆ ಇಲಾಖೆಗೆ ಸೇರಿದ್ದು ಯಾವುದೇ ರೀತಿಯ ಒತ್ತುವರಿಗೆ ಅವಕಾಶ ನೀಡುವುದಿಲ್ಲ~ ಎಂದು ತಿಳಿಸಿದರು.<br /> <br /> ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ಕಾಮಗಾರಿ ನಿಲ್ಲುವುದಿಲ್ಲ. ಕಾಮಗಾರಿ ತಡವಾಗುತ್ತಿರುವುದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರದ ಮೂಲಕ ತಿಳಿಸಲಾಗಿದೆ~ ಎಂದು ಹೇಳಿದರು.<br /> <br /> ಈ ಬಗ್ಗೆ ಪ್ರತಿಕ್ರಿಯಿಸಿದ ಮಂತ್ರಿ ಡೆವಲಪರ್ಸ್ ಸಂಸ್ಥೆಯ ಸಹ ಉಪಾಧ್ಯಕ್ಷ ವಿ.ಜಿ.ಕಿರಣ್ ಕುಮಾರ್, `ನಾವು ಬ್ಯಾರಿಕೇಡ್ ಹಾಕುತ್ತಿಲ್ಲ. ಮೆಟ್ರೊ ನಿಲ್ದಾಣದ ಕಾಮಗಾರಿಗಾಗಿ ಇಟ್ಟುಕೊಂಡಿರುವ ನಿರ್ಮಾಣ ಸಾಮಗ್ರಿಗಳು, ಯಂತ್ರೋಪಕರಣಗಳು ಕಳ್ಳತನವಾಗುವ ಸಾಧ್ಯತೆ ಇದೆ. ಹೀಗಾಗಿ ನಾವು ನಿರ್ಮಾಣ ಸ್ಥಳದಲ್ಲಿ 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ~ ಎಂದು ಹೇಳಿದರು.<br /> <br /> <strong>ರೈಲ್ವೆ ಮಂಡಳಿಯ ಹಸಿರು ನಿಶಾನೆ<br /> ಬೆಂಗಳೂರು:</strong> `ನಮ್ಮ ಮೆಟ್ರೊ~ದ ರೈಲುಗಳ ಓಡಾಟಕ್ಕೆ ರೈಲ್ವೆ ಮಂಡಳಿಯು ಹಸಿರು ನಿಶಾನೆ ತೋರಿಸಿದೆ. ಆದರೆ ಸಾರ್ವಜನಿಕ ಸಂಚಾರ ಪ್ರಾರಂಭಿಸಲು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ.<br /> <br /> ಬೆಂಗಳೂರು ಮೆಟ್ರೊ ರೈಲು ನಿಗಮವು ಸಂಚಾರಕ್ಕೆ ಬಿಡಲಿರುವ ರೈಲ್ವೆ ಗಾಡಿಗಳು (ರೋಲಿಂಗ್ ಸ್ಟಾಕ್) ಸಮರ್ಪಕವಾಗಿವೆ ಎಂದು ರೈಲ್ವೆ ಮಂಡಳಿ ಬುಧವಾರ ನೀಡಿರುವ ಪತ್ರದಲ್ಲಿ ಘೋಷಿಸಲಾಗಿದೆ.<br /> ರೈಲ್ವೆ ಮಂಡಳಿ ನೀಡಿರುವ ಪತ್ರವನ್ನು ನಿಗಮವು ರೈಲ್ವೆ ಸುರಕ್ಷತಾ ಆಯುಕ್ತರಿಗೆ (ಸಿಆರ್ಎಸ್) ಸಲ್ಲಿಸಲಿದೆ.<br /> <br /> ಜತೆಗೆ ಸಿಆರ್ಎಸ್ ತಜ್ಞರ ತಂಡದ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಿರುವ ಬಗ್ಗೆ ನಿಗಮವು ದಾಖಲಾತಿಗಳನ್ನು ಸಹ ಸಲ್ಲಿಸಲಿದೆ. ಈ ಎಲ್ಲದರ ಆಧಾರದಲ್ಲಿ ಸಿಆರ್ಎಸ್ ಸಲ್ಲಿಸುವ ವರದಿ ಆಧರಿಸಿ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮವಾಗಿ ಸುರಕ್ಷತಾ ಪ್ರಮಾಣ ಪತ್ರವನ್ನು ಮುಂದಿನ ವಾರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಸುರಕ್ಷತಾ ಪ್ರಮಾಣ ಪತ್ರ ಕೈ ಸೇರಿದ ಮೇಲೆ ನಿಗಮವು ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ತನ್ನ ಜಮೀನಿನಲ್ಲಿ ಮಂತ್ರಿ ಡೆವಲಪರ್ಸ್ ಸಂಸ್ಥೆಯು ಮತ್ತೆ ಬ್ಯಾರಿಕೇಡ್ಗಳನ್ನು ನಿರ್ಮಿಸುತ್ತಿದೆ~ ಎಂದು ರೈಲ್ವೆ ಇಲಾಖೆ ಆರೋಪಿಸಿರುವ ಹಿನ್ನೆಲೆಯಲ್ಲಿ `ನಮ್ಮ ಮೆಟ್ರೊ~ದ ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ವಿವಾದ ಮತ್ತಷ್ಟು ಕಗ್ಗಂಟಾಗಿದೆ.<br /> <br /> ರೈಲ್ವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಬಿಬಿಎಂಪಿ ವರದಿ ಆಧರಿಸಿ ನೈರುತ್ಯ ರೈಲ್ವೆ ಇತ್ತೀಚೆಗೆ ಆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹಾಗೂ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (ಬಿಎಂಆರ್ಸಿಎಲ್) ಹೈಕೋರ್ಟ್ ಮೊರೆ ಹೋಗಿದ್ದವು. ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು. <br /> <br /> ವಿವಾದಾತ್ಮಕ ಜಮೀನಿನಲ್ಲಿ ಇತ್ತೀಚೆಗೆ ಪುನಃ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ರೈಲ್ವೆ ಇಲಾಖೆ ಗಮನಕ್ಕೆ ಬಂದಿದ್ದು ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೌಖಿಕವಾಗಿ ಸೂಚಿಸಿದ್ದರು.<br /> <br /> ರೈಲ್ವೆ ಇಲಾಖೆ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿ ಬಿಎಂಆರ್ಸಿಎಲ್ ಹಾಗೂ ಸಂಸ್ಥೆ ಪುನಃ ಕೋರ್ಟ್ ಮೊರೆ ಹೋಗಿವೆ. ಉಭಯ ಬಣದವರು ಹೇಳಿಕೆ ನೀಡುವಂತೆ ಕೋರ್ಟ್ ಸೂಚಿಸಿರುವುದಾಗಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.<br /> <br /> `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸುಧಾಂಶು ಮಣಿ, `ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶ ಇರುವಾಗ ಅಲ್ಲಿ ಬ್ಯಾರಿಕೇಡ್ ನಿರ್ಮಿಸಲು ಸಂಸ್ಥೆ ಮುಂದಾಗಿದೆ. ಆ ಜಾಗ ರೈಲ್ವೆ ಇಲಾಖೆಗೆ ಸೇರಿದ್ದು ಯಾವುದೇ ರೀತಿಯ ಒತ್ತುವರಿಗೆ ಅವಕಾಶ ನೀಡುವುದಿಲ್ಲ~ ಎಂದು ತಿಳಿಸಿದರು.<br /> <br /> ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ಕಾಮಗಾರಿ ನಿಲ್ಲುವುದಿಲ್ಲ. ಕಾಮಗಾರಿ ತಡವಾಗುತ್ತಿರುವುದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರದ ಮೂಲಕ ತಿಳಿಸಲಾಗಿದೆ~ ಎಂದು ಹೇಳಿದರು.<br /> <br /> ಈ ಬಗ್ಗೆ ಪ್ರತಿಕ್ರಿಯಿಸಿದ ಮಂತ್ರಿ ಡೆವಲಪರ್ಸ್ ಸಂಸ್ಥೆಯ ಸಹ ಉಪಾಧ್ಯಕ್ಷ ವಿ.ಜಿ.ಕಿರಣ್ ಕುಮಾರ್, `ನಾವು ಬ್ಯಾರಿಕೇಡ್ ಹಾಕುತ್ತಿಲ್ಲ. ಮೆಟ್ರೊ ನಿಲ್ದಾಣದ ಕಾಮಗಾರಿಗಾಗಿ ಇಟ್ಟುಕೊಂಡಿರುವ ನಿರ್ಮಾಣ ಸಾಮಗ್ರಿಗಳು, ಯಂತ್ರೋಪಕರಣಗಳು ಕಳ್ಳತನವಾಗುವ ಸಾಧ್ಯತೆ ಇದೆ. ಹೀಗಾಗಿ ನಾವು ನಿರ್ಮಾಣ ಸ್ಥಳದಲ್ಲಿ 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ~ ಎಂದು ಹೇಳಿದರು.<br /> <br /> <strong>ರೈಲ್ವೆ ಮಂಡಳಿಯ ಹಸಿರು ನಿಶಾನೆ<br /> ಬೆಂಗಳೂರು:</strong> `ನಮ್ಮ ಮೆಟ್ರೊ~ದ ರೈಲುಗಳ ಓಡಾಟಕ್ಕೆ ರೈಲ್ವೆ ಮಂಡಳಿಯು ಹಸಿರು ನಿಶಾನೆ ತೋರಿಸಿದೆ. ಆದರೆ ಸಾರ್ವಜನಿಕ ಸಂಚಾರ ಪ್ರಾರಂಭಿಸಲು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ.<br /> <br /> ಬೆಂಗಳೂರು ಮೆಟ್ರೊ ರೈಲು ನಿಗಮವು ಸಂಚಾರಕ್ಕೆ ಬಿಡಲಿರುವ ರೈಲ್ವೆ ಗಾಡಿಗಳು (ರೋಲಿಂಗ್ ಸ್ಟಾಕ್) ಸಮರ್ಪಕವಾಗಿವೆ ಎಂದು ರೈಲ್ವೆ ಮಂಡಳಿ ಬುಧವಾರ ನೀಡಿರುವ ಪತ್ರದಲ್ಲಿ ಘೋಷಿಸಲಾಗಿದೆ.<br /> ರೈಲ್ವೆ ಮಂಡಳಿ ನೀಡಿರುವ ಪತ್ರವನ್ನು ನಿಗಮವು ರೈಲ್ವೆ ಸುರಕ್ಷತಾ ಆಯುಕ್ತರಿಗೆ (ಸಿಆರ್ಎಸ್) ಸಲ್ಲಿಸಲಿದೆ.<br /> <br /> ಜತೆಗೆ ಸಿಆರ್ಎಸ್ ತಜ್ಞರ ತಂಡದ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಿರುವ ಬಗ್ಗೆ ನಿಗಮವು ದಾಖಲಾತಿಗಳನ್ನು ಸಹ ಸಲ್ಲಿಸಲಿದೆ. ಈ ಎಲ್ಲದರ ಆಧಾರದಲ್ಲಿ ಸಿಆರ್ಎಸ್ ಸಲ್ಲಿಸುವ ವರದಿ ಆಧರಿಸಿ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮವಾಗಿ ಸುರಕ್ಷತಾ ಪ್ರಮಾಣ ಪತ್ರವನ್ನು ಮುಂದಿನ ವಾರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಸುರಕ್ಷತಾ ಪ್ರಮಾಣ ಪತ್ರ ಕೈ ಸೇರಿದ ಮೇಲೆ ನಿಗಮವು ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>