<p>ಆನೇಕಲ್: ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಂಭ್ರಮ ಸಡಗರಗಳಿಂದ ನೆರವೇರಿತು. <br /> <br /> ಮಧ್ಯಾಹ್ನದ ವೇಳೆಗೆ ಶ್ರೀ ಚಂಪಕಧಾಮ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ತಂದು ಕೂರಿಸಲಾಯಿತು. ಅಲಂಕೃತಗೊಂಡಿದ್ದ ರಥಕ್ಕೆ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. <br /> <br /> ರಥವು ದೇವಾಲಯದ ಆವರಣದಿಂದ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಜಯಘೋಷ ಮಾಡಿ ಸಂಭ್ರಮಿಸಿದರು. ದವನ ಚುಚ್ಚಿದ ಬಾಳೆಹಣ್ಣುಗಳನ್ನು ತೇರಿನೆಡೆಗೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.<br /> <br /> ಹಿನ್ನೆಲೆ: ಈ ಚಂಪಕಧಾಮ ಸ್ವಾಮಿಗೆ ಸುಮಾರು ಸಾವಿರ ವರ್ಷಗಳಿಗೂ ಪ್ರಾಚೀನ ಇತಿಹಾಸವಿದೆ. <br /> ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ವಹ್ನಿಗಿರಿಯ ಪಕ್ಕದಲ್ಲಿಯ ಈ ದೇವಾಲಯವನ್ನು ಕಟ್ಟಿದರೆಂದು ಪೌರಾಣಿಕ ಹಿನ್ನೆಲೆಯಿದೆ. ಬೆಟ್ಟದ ಮೇಲ್ಭಾಗದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವಿದೆ. <br /> <br /> ಕ್ರಿ.ಶ 1295ರ ತಮಿಳು ದಾಖಲೆಗಳಲ್ಲಿ ಬನ್ನೇರುಘಟ್ಟದ ಬಗ್ಗೆ ಉಲ್ಲೇಖವಿದೆ. ವರದರಾಜ ಪುರವೆಂದೂ ಸಹ ಬನ್ನೇರುಘಟ್ಟವನ್ನು ಈ ದಾಖಲೆಯಲ್ಲಿ ಕರೆಯಲಾಗಿದೆ. <br /> <br /> ದೇವಾಲಯದಲ್ಲಿ ಚಂಪಕಧಾಮ ಸ್ವಾಮಿಯು ಶ್ರೀದೇವಿ, ಭೂದೇವಿ ಸಮೇತರಾಗಿರುವ ಮೂಲ ಮೂರ್ತಿ ಇದೆ. ಈ ದೇವಾಲಯದ ಸುತ್ತಲೂ ಸಂಪಿಗೆ (ಚಂಪಕ) ಮರಗಳು ಹೆಚ್ಚಾಗಿದ್ದುದರಿಂದ ಈ ದೇವರನ್ನು ಚಂಪಕಧಾಮ ಸ್ವಾಮಿ ದೇವರೆಂದು ಕರೆಯಲಾಗಿದೆ.<br /> <br /> ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಮ್, ತಹಶೀಲ್ದಾರ್ ಎಚ್.ಎನ್.ಶಿವೇಗೌಡ, ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ಓಂಕಾರಪ್ಪ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಂಭ್ರಮ ಸಡಗರಗಳಿಂದ ನೆರವೇರಿತು. <br /> <br /> ಮಧ್ಯಾಹ್ನದ ವೇಳೆಗೆ ಶ್ರೀ ಚಂಪಕಧಾಮ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ತಂದು ಕೂರಿಸಲಾಯಿತು. ಅಲಂಕೃತಗೊಂಡಿದ್ದ ರಥಕ್ಕೆ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. <br /> <br /> ರಥವು ದೇವಾಲಯದ ಆವರಣದಿಂದ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಜಯಘೋಷ ಮಾಡಿ ಸಂಭ್ರಮಿಸಿದರು. ದವನ ಚುಚ್ಚಿದ ಬಾಳೆಹಣ್ಣುಗಳನ್ನು ತೇರಿನೆಡೆಗೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.<br /> <br /> ಹಿನ್ನೆಲೆ: ಈ ಚಂಪಕಧಾಮ ಸ್ವಾಮಿಗೆ ಸುಮಾರು ಸಾವಿರ ವರ್ಷಗಳಿಗೂ ಪ್ರಾಚೀನ ಇತಿಹಾಸವಿದೆ. <br /> ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ವಹ್ನಿಗಿರಿಯ ಪಕ್ಕದಲ್ಲಿಯ ಈ ದೇವಾಲಯವನ್ನು ಕಟ್ಟಿದರೆಂದು ಪೌರಾಣಿಕ ಹಿನ್ನೆಲೆಯಿದೆ. ಬೆಟ್ಟದ ಮೇಲ್ಭಾಗದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವಿದೆ. <br /> <br /> ಕ್ರಿ.ಶ 1295ರ ತಮಿಳು ದಾಖಲೆಗಳಲ್ಲಿ ಬನ್ನೇರುಘಟ್ಟದ ಬಗ್ಗೆ ಉಲ್ಲೇಖವಿದೆ. ವರದರಾಜ ಪುರವೆಂದೂ ಸಹ ಬನ್ನೇರುಘಟ್ಟವನ್ನು ಈ ದಾಖಲೆಯಲ್ಲಿ ಕರೆಯಲಾಗಿದೆ. <br /> <br /> ದೇವಾಲಯದಲ್ಲಿ ಚಂಪಕಧಾಮ ಸ್ವಾಮಿಯು ಶ್ರೀದೇವಿ, ಭೂದೇವಿ ಸಮೇತರಾಗಿರುವ ಮೂಲ ಮೂರ್ತಿ ಇದೆ. ಈ ದೇವಾಲಯದ ಸುತ್ತಲೂ ಸಂಪಿಗೆ (ಚಂಪಕ) ಮರಗಳು ಹೆಚ್ಚಾಗಿದ್ದುದರಿಂದ ಈ ದೇವರನ್ನು ಚಂಪಕಧಾಮ ಸ್ವಾಮಿ ದೇವರೆಂದು ಕರೆಯಲಾಗಿದೆ.<br /> <br /> ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಮ್, ತಹಶೀಲ್ದಾರ್ ಎಚ್.ಎನ್.ಶಿವೇಗೌಡ, ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ಓಂಕಾರಪ್ಪ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>