<p><strong>ಬಾಗಲಕೋಟೆ:</strong> ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಅನುಕೂಲ ಒದಗಿಸುವ ಸಂಬಂಧ ಜಮಖಂಡಿ ತಾಲ್ಲೂಕಿನ 350 ಶಾಲೆಗಳಿಗೆ ರೂ. 17.65 ಲಕ್ಷ `ಇನ್ಸ್ಫೈರ್~ ಹಣನೀಡಲಾಗಿದೆ ಎಂದು ಜಮಖಂಡಿಯ ಸಮೂಹ ಸಂಪನ್ಮೂಲ ಕೇಂದ್ರದ ನೋಡೆಲ್ ಅಧಿಕಾರಿ ಎಚ್.ವೈ ಜರಾಳಿ ಹೇಳಿದರು.<br /> <br /> ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಸಾಗರದ ವಿಜ್ಞಾನ ವೇದಿಕೆ ಮತ್ತು ಕ್ಷೇತ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಜಮಖಂಡಿಯ ತುಂಗಳಶಾಲೆಯಲ್ಲಿ ನಡೆದ `ಇನ್ಸ್ಫೈರ್ ಅವಾರ್ಡ್ ಮಾಹಿತಿ ಹಾಗೂ ಯೋಜನೆ ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇನ್ಸ್ಪೈರ್ ಮೂಲಕ ಸಂಶೋಧನೆ ಕೈಗೊಳ್ಳಲು ಪೂರಕವದ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು, ಕ್ಷೇತ್ರ ಕಾರ್ಯ ಕೈಗೊಳ್ಳಲು ಎಂಬುದನ್ನು ಈ ಕಾರ್ಯಾಗಾರದ ಮೂಲಕ ತಿಳಿದು ಕೊಳ್ಳಬೇಕು ಎಂದರು.<br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಚ್.ಎಲ್. ಸೂರ್ಯನಾರಾಯಣರಾವ್, ಇನ್ಸ್ಫೈರ್ ಅವಾರ್ಡ್ ಎಂದರೆ ವಿದ್ಯಾರ್ಥಿಗಳು ಸಂಶೋಧನೆ ಮಾಡಲು ನೀಡುತ್ತಿರುವ ಸಹಾಯಧನವಾಗಿದೆ ಎಂದರು.<br /> <br /> ಬಾಲ್ಯದಿಂದಲೇ ವಿಜ್ಞಾನದ ಕುರಿತು ಆಸಕ್ತಿ, ಕುತೂಹಲ ಮೂಡಿಸಿ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಕಾರಣವಾಗುವ ವಿಜ್ಙಾನಿ ಆಗಲಿ ಎಂಬುದು ಇದರ ಮುಖ್ಯ ಉದ್ಧೇಶ ಎಂದರು.<br /> ಪ್ರೊ.ಎಂ.ಆರ್.ನಾಗರಾಜ, ಡಿ.ಜಿ.ವಾಲಿ, ಅಗಸ್ತ್ಯ ಪೌಂಡೇಶನ್ನ ಚಂದ್ರಕಾಂತ ಉಪಸ್ಥಿತರಿದ್ದರು. ಸಾಗರದ ವಿಜ್ಙಾನ ವೇದಿಕೆಯ ಪೂರ್ಣಪ್ರಜ್ಞ ಬೇಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಗಳ ಶಾಲೆಯ ಡಿ.ಜಿ.ವಾಲಿ ವಂದಿಸಿದರು.<br /> <br /> ಕಾರ್ಯಾಗಾರದಲ್ಲಿ ಸುಮಾರು 159 ಶಿಕ್ಷಕರು ಭಾಗವಹಿಸಿದ್ದರು. ಯೋಜನೆಗಳ ಪ್ರಾತ್ಯಕ್ಷಿಕೆ ಹಾಗೂ ತಯಾರಿಕೆಗಳನ್ನು ಮಾಡಲಾಯಿತು. ಜೊತೆಗೆ ಅಗಸ್ತ್ಯ ಪೌಂಡೇಶನ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಅನುಕೂಲ ಒದಗಿಸುವ ಸಂಬಂಧ ಜಮಖಂಡಿ ತಾಲ್ಲೂಕಿನ 350 ಶಾಲೆಗಳಿಗೆ ರೂ. 17.65 ಲಕ್ಷ `ಇನ್ಸ್ಫೈರ್~ ಹಣನೀಡಲಾಗಿದೆ ಎಂದು ಜಮಖಂಡಿಯ ಸಮೂಹ ಸಂಪನ್ಮೂಲ ಕೇಂದ್ರದ ನೋಡೆಲ್ ಅಧಿಕಾರಿ ಎಚ್.ವೈ ಜರಾಳಿ ಹೇಳಿದರು.<br /> <br /> ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಸಾಗರದ ವಿಜ್ಞಾನ ವೇದಿಕೆ ಮತ್ತು ಕ್ಷೇತ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಜಮಖಂಡಿಯ ತುಂಗಳಶಾಲೆಯಲ್ಲಿ ನಡೆದ `ಇನ್ಸ್ಫೈರ್ ಅವಾರ್ಡ್ ಮಾಹಿತಿ ಹಾಗೂ ಯೋಜನೆ ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇನ್ಸ್ಪೈರ್ ಮೂಲಕ ಸಂಶೋಧನೆ ಕೈಗೊಳ್ಳಲು ಪೂರಕವದ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು, ಕ್ಷೇತ್ರ ಕಾರ್ಯ ಕೈಗೊಳ್ಳಲು ಎಂಬುದನ್ನು ಈ ಕಾರ್ಯಾಗಾರದ ಮೂಲಕ ತಿಳಿದು ಕೊಳ್ಳಬೇಕು ಎಂದರು.<br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಚ್.ಎಲ್. ಸೂರ್ಯನಾರಾಯಣರಾವ್, ಇನ್ಸ್ಫೈರ್ ಅವಾರ್ಡ್ ಎಂದರೆ ವಿದ್ಯಾರ್ಥಿಗಳು ಸಂಶೋಧನೆ ಮಾಡಲು ನೀಡುತ್ತಿರುವ ಸಹಾಯಧನವಾಗಿದೆ ಎಂದರು.<br /> <br /> ಬಾಲ್ಯದಿಂದಲೇ ವಿಜ್ಞಾನದ ಕುರಿತು ಆಸಕ್ತಿ, ಕುತೂಹಲ ಮೂಡಿಸಿ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಕಾರಣವಾಗುವ ವಿಜ್ಙಾನಿ ಆಗಲಿ ಎಂಬುದು ಇದರ ಮುಖ್ಯ ಉದ್ಧೇಶ ಎಂದರು.<br /> ಪ್ರೊ.ಎಂ.ಆರ್.ನಾಗರಾಜ, ಡಿ.ಜಿ.ವಾಲಿ, ಅಗಸ್ತ್ಯ ಪೌಂಡೇಶನ್ನ ಚಂದ್ರಕಾಂತ ಉಪಸ್ಥಿತರಿದ್ದರು. ಸಾಗರದ ವಿಜ್ಙಾನ ವೇದಿಕೆಯ ಪೂರ್ಣಪ್ರಜ್ಞ ಬೇಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಗಳ ಶಾಲೆಯ ಡಿ.ಜಿ.ವಾಲಿ ವಂದಿಸಿದರು.<br /> <br /> ಕಾರ್ಯಾಗಾರದಲ್ಲಿ ಸುಮಾರು 159 ಶಿಕ್ಷಕರು ಭಾಗವಹಿಸಿದ್ದರು. ಯೋಜನೆಗಳ ಪ್ರಾತ್ಯಕ್ಷಿಕೆ ಹಾಗೂ ತಯಾರಿಕೆಗಳನ್ನು ಮಾಡಲಾಯಿತು. ಜೊತೆಗೆ ಅಗಸ್ತ್ಯ ಪೌಂಡೇಶನ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>