<p><strong>ಪುದುಚೇರಿ (ಪಿಟಿಐ):</strong> ಖುದ್ದು ಶಿಕ್ಷಣ ಸಚಿವರೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಕುಳಿತು, ವಿವಾದದ ಕೇಂದ್ರಬಿಂದುವಾಗಿರುವ ಪ್ರಸಂಗ ಇಲ್ಲಿ ನಡೆದಿದೆ.<br /> <br /> ಪಿ.ಎಂ.ಎಲ್ ಕಲ್ಯಾಣ ಸುಂದರಂ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತ್ತಿದ್ದು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಫೇಲಾಗಿದ್ದರು. ನಂತರ ಕಳೆದ ಎರಡು ದಶಕಗಳಲ್ಲಿ ಆ ಎರಡು ವಿಷಯಗಳಲ್ಲಿ ಪಾಸಾಗಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿದ್ದವು. ಆದರೆ ಅವರು ಸಾರ್ವಜನಿಕ ಬದುಕಿನ `ಪರೀಕ್ಷೆ~ಯಲ್ಲಿ ಇನ್ನಿಲ್ಲದ ಯಶಸ್ಸು ಗಳಿಸಿ ಪ್ರಸಕ್ತ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.<br /> <br /> ಈಗ ಇವರು ತಮ್ಮ ಪ್ರಭಾವವನ್ನು ಬಳಸಿಯಾದರೂ ಆ ಎರಡು ವಿಷಯಗಳಲ್ಲಿ ಪಾಸಾಗುವ ಪ್ರಯತ್ನ ನಡೆಸಿಯೇ ಬಿಟ್ಟಿದ್ದಾರೆ. ಸೆಪ್ಟೆಂಬರ್ 29 ಮತ್ತು 30ರಂದು ದಿಂಡಿವನಂನಲ್ಲಿ ಪರೀಕ್ಷೆ ಬರೆಯಲು ಕುಳಿತ್ತಿದ್ದರೆಂಬುದು ಈಗ ಪುದುಚೇರಿ, ತಮಿಳುನಾಡಿನಾದ್ಯಂತ ಸುದ್ದಿಯಾಗಿದೆ. ಆದರೆ ಅವರು ಪರೀಕ್ಷೆ ಬರೆದಿರುವುದಕ್ಕಲ್ಲ ! ತಮ್ಮ ಹೆಸರಲ್ಲಿ ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಅವರು ಕುಳ್ಳಿರಿಸಿದ್ದರಂತೆ. ಈ ರೀತಿ ಪುದುಚೇರಿ ಕಾಂಗ್ರೆಸ್ ಮುಖಂಡರ ನಿಯೋಗ ಸಾಕ್ಷ್ಯಾಧಾರಗಳ ಸಮೇತ ಆರೋಪಿಸಿದ್ದು, ರಾಜ್ಯಪಾಲ ಇಕ್ಬಾಲ್ ಸಿಂಗ್ ಅವರಿಗೂ ದೂರು ಸಲ್ಲಿಸಿದೆ.<br /> <br /> ನಿರಾಕರಣೆ: ತಮ್ಮ ಮೇಲಿನ ಆಪಾದನೆಗಳನ್ನು ಸಚಿವರು ಅಲ್ಲಗಳೆದಿದ್ದಾರೆ. `ಈ ಆರೋಪ ರಾಜಕೀಯ ಪ್ರೇರಿತವಾಗಿದೆ. ಸೆಪ್ಟೆಂಬರ್ 29ರಂದು ನಾನು ಪರೀಕ್ಷೆ ಬರೆದಿದ್ದೇನೆ. ಆದರೆ 30ರಂದು ಬರೆದಿಲ್ಲ. ಆವತ್ತು ಅಧಿಕೃತ ಸಭೆ ಇದ್ದುದರಿಂದ ಅದರಲ್ಲಿ ಪಾಲ್ಗೊಳ್ಳಲು ನಾನು ತೆರಳಿದ್ದೆ~ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.<br /> <br /> <strong>ಕೇಂದ್ರ ಸಚಿವ ಒತ್ತಾಯ</strong>: ಪ್ರಧಾನಿ ಸಚಿವಾಲಯದ ರಾಜ್ಯ ಸಚಿವರೂ ಆದ ವಿ.ನಾರಾಯಣ ಸ್ವಾಮಿ ಅವರೂ ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾಗಿದೆ ಎಂದು ಭಾನುವಾರವಷ್ಟೇ ಹೇಳಿದ್ದರು. ಇದರಲ್ಲಿ ಪುದುಚೇರಿ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಭಾಗಿಯಾಗಿವೆ ಎಂದು ಅವರು ಆರೋಪಿಸಿದ್ದರು. ಈಗಾಗಲೇ ತಮಿಳುನಾಡು ಸರ್ಕಾರ ಈ ಕುರಿತು ತನಿಖೆ ಆರಂಭಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುದುಚೇರಿ (ಪಿಟಿಐ):</strong> ಖುದ್ದು ಶಿಕ್ಷಣ ಸಚಿವರೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಕುಳಿತು, ವಿವಾದದ ಕೇಂದ್ರಬಿಂದುವಾಗಿರುವ ಪ್ರಸಂಗ ಇಲ್ಲಿ ನಡೆದಿದೆ.<br /> <br /> ಪಿ.ಎಂ.ಎಲ್ ಕಲ್ಯಾಣ ಸುಂದರಂ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಕುಳಿತ್ತಿದ್ದು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಫೇಲಾಗಿದ್ದರು. ನಂತರ ಕಳೆದ ಎರಡು ದಶಕಗಳಲ್ಲಿ ಆ ಎರಡು ವಿಷಯಗಳಲ್ಲಿ ಪಾಸಾಗಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿದ್ದವು. ಆದರೆ ಅವರು ಸಾರ್ವಜನಿಕ ಬದುಕಿನ `ಪರೀಕ್ಷೆ~ಯಲ್ಲಿ ಇನ್ನಿಲ್ಲದ ಯಶಸ್ಸು ಗಳಿಸಿ ಪ್ರಸಕ್ತ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.<br /> <br /> ಈಗ ಇವರು ತಮ್ಮ ಪ್ರಭಾವವನ್ನು ಬಳಸಿಯಾದರೂ ಆ ಎರಡು ವಿಷಯಗಳಲ್ಲಿ ಪಾಸಾಗುವ ಪ್ರಯತ್ನ ನಡೆಸಿಯೇ ಬಿಟ್ಟಿದ್ದಾರೆ. ಸೆಪ್ಟೆಂಬರ್ 29 ಮತ್ತು 30ರಂದು ದಿಂಡಿವನಂನಲ್ಲಿ ಪರೀಕ್ಷೆ ಬರೆಯಲು ಕುಳಿತ್ತಿದ್ದರೆಂಬುದು ಈಗ ಪುದುಚೇರಿ, ತಮಿಳುನಾಡಿನಾದ್ಯಂತ ಸುದ್ದಿಯಾಗಿದೆ. ಆದರೆ ಅವರು ಪರೀಕ್ಷೆ ಬರೆದಿರುವುದಕ್ಕಲ್ಲ ! ತಮ್ಮ ಹೆಸರಲ್ಲಿ ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಅವರು ಕುಳ್ಳಿರಿಸಿದ್ದರಂತೆ. ಈ ರೀತಿ ಪುದುಚೇರಿ ಕಾಂಗ್ರೆಸ್ ಮುಖಂಡರ ನಿಯೋಗ ಸಾಕ್ಷ್ಯಾಧಾರಗಳ ಸಮೇತ ಆರೋಪಿಸಿದ್ದು, ರಾಜ್ಯಪಾಲ ಇಕ್ಬಾಲ್ ಸಿಂಗ್ ಅವರಿಗೂ ದೂರು ಸಲ್ಲಿಸಿದೆ.<br /> <br /> ನಿರಾಕರಣೆ: ತಮ್ಮ ಮೇಲಿನ ಆಪಾದನೆಗಳನ್ನು ಸಚಿವರು ಅಲ್ಲಗಳೆದಿದ್ದಾರೆ. `ಈ ಆರೋಪ ರಾಜಕೀಯ ಪ್ರೇರಿತವಾಗಿದೆ. ಸೆಪ್ಟೆಂಬರ್ 29ರಂದು ನಾನು ಪರೀಕ್ಷೆ ಬರೆದಿದ್ದೇನೆ. ಆದರೆ 30ರಂದು ಬರೆದಿಲ್ಲ. ಆವತ್ತು ಅಧಿಕೃತ ಸಭೆ ಇದ್ದುದರಿಂದ ಅದರಲ್ಲಿ ಪಾಲ್ಗೊಳ್ಳಲು ನಾನು ತೆರಳಿದ್ದೆ~ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.<br /> <br /> <strong>ಕೇಂದ್ರ ಸಚಿವ ಒತ್ತಾಯ</strong>: ಪ್ರಧಾನಿ ಸಚಿವಾಲಯದ ರಾಜ್ಯ ಸಚಿವರೂ ಆದ ವಿ.ನಾರಾಯಣ ಸ್ವಾಮಿ ಅವರೂ ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾಗಿದೆ ಎಂದು ಭಾನುವಾರವಷ್ಟೇ ಹೇಳಿದ್ದರು. ಇದರಲ್ಲಿ ಪುದುಚೇರಿ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಭಾಗಿಯಾಗಿವೆ ಎಂದು ಅವರು ಆರೋಪಿಸಿದ್ದರು. ಈಗಾಗಲೇ ತಮಿಳುನಾಡು ಸರ್ಕಾರ ಈ ಕುರಿತು ತನಿಖೆ ಆರಂಭಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>