<p>ದಾವಣಗೆರೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಶಿಫಾರಸು ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಸಂಚಾಲಕ ವೈ. ಕೊಟ್ರೇಶ್ ಒತ್ತಾಯಿಸಿದರು.<br /> <br /> ಪರಿಶಿಷ್ಟ ಜಾತಿಯ ಶೇ 15ರಷ್ಟು ಒಳಮೀಸಲಾತಿಯಲ್ಲಿ ಎಡಗೈಗೆ ಶೇ 6, ಬಲಗೈಗೆ ಶೇ 5 ಸ್ಪಶ್ಯರಿಗೆ, ಶೇ 3 ಇತರರಿಗೆ ಶೇ 1ನ್ನು ವರ್ಗೀಕರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಮೀಸಲಾತಿ ವರ್ಗೀಕರಣದಲ್ಲಿ ಬರುವ ಜಾತಿಗಳು ಯಾವುವು? ಆಯಾ ಜಾತಿಯ ಜನಸಂಖ್ಯೆ ಎಷ್ಟು? ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕುವಲ್ಲಿ ಆಯೋಗವು ಎಡವಿದೆ. ಈ ವರದಿಯನ್ನು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ಬರೆಸಿದಂತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.<br /> <br /> ರಾಜ್ಯದಲ್ಲಿ ಭೋವಿ (ವಡ್ಡರ) ಸಮಾಜವು ಶೇ 90ರಷ್ಟು ಆರ್ಥಿಕವಾಗಿ ಕಡುಬಡತನ ಹೊಂದಿದೆ. ಈ ಸಮುದಾಯದ ಜನರು ಗುಡ್ಡಗಾಡುಗಳಲ್ಲಿ ಮಣ್ಣು ಅಗೆಯುವ, ಕಲ್ಲು ಒಡೆದು, ಮಹಾನಗರಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಕಡೆ ಅವರನ್ನು ಅಸ್ಪಶ್ಯರಂತೆ ನೋಡಲಾಗುತ್ತಿದೆ. ಲಕ್ಷಾಂತರ ಕುಟುಂಬಗಳು ಮೂಲ ಸೌಲಭ್ಯದಿಂದ ವಂಚಿತವಾಗಿವೆ. ಅನೇಕರು ಅನಕ್ಷರಸ್ಥರಾಗಿದ್ದಾರೆ. ಆದ್ದರಿಂದ ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ವರದಿ ಸಿದ್ಧಪಡಿಸಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ತಿಳಿದಿಲ್ಲ ಎಂದರು.<br /> <br /> ಇಂಥ ವರದಿಯ ಆಧಾರದ ಮೇಲೆ ಸಮುದಾಯದ ಭಾವನೆಗಳನ್ನು ಕೆರಳಿಸಲು ಹೋಗಬಾರದು. ಈ ವರದಿಯನ್ನು ತಿರಸ್ಕರಿಸಬೇಕು. ರಾಜ್ಯದ ಏಕತೆ, ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.<br /> ರಾಜ್ಯ ಸಂಘಟ<br /> ನಾ ಕಾರ್ಯದರ್ಶಿ ಅಶೋಕ ಒಡೆಯರ್, ಬೇವಿನಹಳ್ಳಿ ಪ್ರೇಮ್ಕುಮಾರ್, ಭಗವಾನ್, ಕೆ. ರಾಜಪ್ಪ, ಮಹಾದೇವಿ, ಸುಬ್ರಮಣಿ ಮಾಲೂರ, ಜಯಪ್ರಕಾಶ್ ಬದಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಶಿಫಾರಸು ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಸಂಚಾಲಕ ವೈ. ಕೊಟ್ರೇಶ್ ಒತ್ತಾಯಿಸಿದರು.<br /> <br /> ಪರಿಶಿಷ್ಟ ಜಾತಿಯ ಶೇ 15ರಷ್ಟು ಒಳಮೀಸಲಾತಿಯಲ್ಲಿ ಎಡಗೈಗೆ ಶೇ 6, ಬಲಗೈಗೆ ಶೇ 5 ಸ್ಪಶ್ಯರಿಗೆ, ಶೇ 3 ಇತರರಿಗೆ ಶೇ 1ನ್ನು ವರ್ಗೀಕರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಮೀಸಲಾತಿ ವರ್ಗೀಕರಣದಲ್ಲಿ ಬರುವ ಜಾತಿಗಳು ಯಾವುವು? ಆಯಾ ಜಾತಿಯ ಜನಸಂಖ್ಯೆ ಎಷ್ಟು? ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕುವಲ್ಲಿ ಆಯೋಗವು ಎಡವಿದೆ. ಈ ವರದಿಯನ್ನು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ಬರೆಸಿದಂತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.<br /> <br /> ರಾಜ್ಯದಲ್ಲಿ ಭೋವಿ (ವಡ್ಡರ) ಸಮಾಜವು ಶೇ 90ರಷ್ಟು ಆರ್ಥಿಕವಾಗಿ ಕಡುಬಡತನ ಹೊಂದಿದೆ. ಈ ಸಮುದಾಯದ ಜನರು ಗುಡ್ಡಗಾಡುಗಳಲ್ಲಿ ಮಣ್ಣು ಅಗೆಯುವ, ಕಲ್ಲು ಒಡೆದು, ಮಹಾನಗರಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಕಡೆ ಅವರನ್ನು ಅಸ್ಪಶ್ಯರಂತೆ ನೋಡಲಾಗುತ್ತಿದೆ. ಲಕ್ಷಾಂತರ ಕುಟುಂಬಗಳು ಮೂಲ ಸೌಲಭ್ಯದಿಂದ ವಂಚಿತವಾಗಿವೆ. ಅನೇಕರು ಅನಕ್ಷರಸ್ಥರಾಗಿದ್ದಾರೆ. ಆದ್ದರಿಂದ ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ವರದಿ ಸಿದ್ಧಪಡಿಸಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ತಿಳಿದಿಲ್ಲ ಎಂದರು.<br /> <br /> ಇಂಥ ವರದಿಯ ಆಧಾರದ ಮೇಲೆ ಸಮುದಾಯದ ಭಾವನೆಗಳನ್ನು ಕೆರಳಿಸಲು ಹೋಗಬಾರದು. ಈ ವರದಿಯನ್ನು ತಿರಸ್ಕರಿಸಬೇಕು. ರಾಜ್ಯದ ಏಕತೆ, ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.<br /> ರಾಜ್ಯ ಸಂಘಟ<br /> ನಾ ಕಾರ್ಯದರ್ಶಿ ಅಶೋಕ ಒಡೆಯರ್, ಬೇವಿನಹಳ್ಳಿ ಪ್ರೇಮ್ಕುಮಾರ್, ಭಗವಾನ್, ಕೆ. ರಾಜಪ್ಪ, ಮಹಾದೇವಿ, ಸುಬ್ರಮಣಿ ಮಾಲೂರ, ಜಯಪ್ರಕಾಶ್ ಬದಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>