<p>ಮೈಸೂರಿನ ಮಾನಸಿಕ ತಜ್ಞರಾದ ಡಾ.ಬಿ.ಎನ್.ರವೀಶ್ ಅವರ ‘ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ ಕೈಪಿಡಿ’ಯಲ್ಲಿ ಮನಸ್ಸಿನ ತವಕತಲ್ಲಣಗಳಿಗೆ ಸಂಬಂಧಿಸಿದ ಇಪ್ಪತ್ತಾರು ಲೇಖನಗಳಿವೆ. ಸಾಮಾನ್ಯ ಓದುಗರಲ್ಲಿ ಮನಃಶಾಸ್ತ್ರದ ಬಗೆಗಿನ ಅರಿವು ಹೆಚ್ಚಿಸುವಂತಿರುವ ಈ ಬರಹಗಳು ತಮ್ಮ ಸರಳ ನಿರೂಪಣೆಯಿಂದಾಗಿ ಗಮನಸೆಳೆಯುತ್ತವೆ.<br /> <br /> ಮನೋವ್ಯಾಧಿಯ ಸಾಮಾನ್ಯ ಜ್ಞಾನ ಮತ್ತು ಕಲ್ಪನೆ, ಮನೋರೋಗಗಳ ಬಗ್ಗೆ ನಿಮ್ಮ ನಂಬಿಕೆ; ಯಾವುದು ಸರಿ?, ಮನೋರೋಗ ಏಕೆ ಬರುತ್ತದೆ?, ಮಾನಸಿಕ ಒತ್ತಡಗಳು, ಖಿನ್ನತೆ, ಮನೋರೋಗಿಗಳ ಶುಶ್ರೂಷೆ ಮಾಡುವವರಿಗೆ ಸಲಹೆಗಳು, ಅಪಸ್ಮಾರ, ಮೈಗ್ರೇನ್, ನಿದ್ದೆ, ಮದ್ಯವ್ಯಸನ ಸೇರಿದಂತೆ ಅನೇಕ ವಿಷಯಗಳನ್ನು ರವೀಶ್ ಚರ್ಚಿಸಿದ್ದಾರೆ. ಪ್ರಶ್ನೋತ್ತರ ರೂಪದಲ್ಲಿ, ಟಿಪ್ಪಣಿಗಳ ರೂಪದಲ್ಲಿ, ಪ್ರಶ್ನಾವಳಿ ರೂಪದಲ್ಲಿ- ಹೀಗೆ, ವಿವಿಧ ರೂಪದ ನಿರೂಪಣೆ ಓದುಗರನ್ನು ಸೆಳೆಯುವಂತಿದೆ.<br /> <br /> ಪುಸ್ತಕದಲ್ಲಿ ವಿಪುಲ ಮಾಹಿತಿ ಇರುವಂತೆಯೇ ಕಾಗುಣಿತ ದೋಷಗಳೂ ಹೇರಳವಾಗಿವೆ. ‘ಅಕ್ಷರ ಆರೋಗ್ಯ’ದ ಬಗ್ಗೆಯೂ ವೈದ್ಯರು ಗಮನನೀಡಬೇಕಿತ್ತು.</p>.<p><strong>ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ ಕೈಪಿಡಿ</strong><br /> ಲೇ ಮತ್ತು ಪ್ರ: ಡಾ.ರವೀಶ್ ಬಿ.ಎನ್.<br /> ನಂ. 2955, 1ನೇ ಮುಖ್ಯರಸ್ತೆ, 2ನೇ ತಿರುವು, ಸರಸ್ವತಿಪುರಂ, ಮೈಸೂರು-9</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರಿನ ಮಾನಸಿಕ ತಜ್ಞರಾದ ಡಾ.ಬಿ.ಎನ್.ರವೀಶ್ ಅವರ ‘ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ ಕೈಪಿಡಿ’ಯಲ್ಲಿ ಮನಸ್ಸಿನ ತವಕತಲ್ಲಣಗಳಿಗೆ ಸಂಬಂಧಿಸಿದ ಇಪ್ಪತ್ತಾರು ಲೇಖನಗಳಿವೆ. ಸಾಮಾನ್ಯ ಓದುಗರಲ್ಲಿ ಮನಃಶಾಸ್ತ್ರದ ಬಗೆಗಿನ ಅರಿವು ಹೆಚ್ಚಿಸುವಂತಿರುವ ಈ ಬರಹಗಳು ತಮ್ಮ ಸರಳ ನಿರೂಪಣೆಯಿಂದಾಗಿ ಗಮನಸೆಳೆಯುತ್ತವೆ.<br /> <br /> ಮನೋವ್ಯಾಧಿಯ ಸಾಮಾನ್ಯ ಜ್ಞಾನ ಮತ್ತು ಕಲ್ಪನೆ, ಮನೋರೋಗಗಳ ಬಗ್ಗೆ ನಿಮ್ಮ ನಂಬಿಕೆ; ಯಾವುದು ಸರಿ?, ಮನೋರೋಗ ಏಕೆ ಬರುತ್ತದೆ?, ಮಾನಸಿಕ ಒತ್ತಡಗಳು, ಖಿನ್ನತೆ, ಮನೋರೋಗಿಗಳ ಶುಶ್ರೂಷೆ ಮಾಡುವವರಿಗೆ ಸಲಹೆಗಳು, ಅಪಸ್ಮಾರ, ಮೈಗ್ರೇನ್, ನಿದ್ದೆ, ಮದ್ಯವ್ಯಸನ ಸೇರಿದಂತೆ ಅನೇಕ ವಿಷಯಗಳನ್ನು ರವೀಶ್ ಚರ್ಚಿಸಿದ್ದಾರೆ. ಪ್ರಶ್ನೋತ್ತರ ರೂಪದಲ್ಲಿ, ಟಿಪ್ಪಣಿಗಳ ರೂಪದಲ್ಲಿ, ಪ್ರಶ್ನಾವಳಿ ರೂಪದಲ್ಲಿ- ಹೀಗೆ, ವಿವಿಧ ರೂಪದ ನಿರೂಪಣೆ ಓದುಗರನ್ನು ಸೆಳೆಯುವಂತಿದೆ.<br /> <br /> ಪುಸ್ತಕದಲ್ಲಿ ವಿಪುಲ ಮಾಹಿತಿ ಇರುವಂತೆಯೇ ಕಾಗುಣಿತ ದೋಷಗಳೂ ಹೇರಳವಾಗಿವೆ. ‘ಅಕ್ಷರ ಆರೋಗ್ಯ’ದ ಬಗ್ಗೆಯೂ ವೈದ್ಯರು ಗಮನನೀಡಬೇಕಿತ್ತು.</p>.<p><strong>ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ ಕೈಪಿಡಿ</strong><br /> ಲೇ ಮತ್ತು ಪ್ರ: ಡಾ.ರವೀಶ್ ಬಿ.ಎನ್.<br /> ನಂ. 2955, 1ನೇ ಮುಖ್ಯರಸ್ತೆ, 2ನೇ ತಿರುವು, ಸರಸ್ವತಿಪುರಂ, ಮೈಸೂರು-9</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>