<p>ಗುಲ್ಬರ್ಗ: ಸಸಿಗಳು ಬೆಳೆದು ಮರವಾಗುವ ತನಕ ಅವುಗಳನ್ನು ಮಕ್ಕಳಂತೆ ಪೋಷಿಸುವ ಅಗತ್ಯವಿದೆ ಎಂದು ಗುಲ್ಬರ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಶನಿವಾರ ಇಲ್ಲಿ ಸಲಹೆ ನೀಡಿದರು.<br /> <br /> ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್ಕೆಇಎಸ್)ಯ ಗುಲ್ಬರ್ಗ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ `ಎಚ್ಕೆಇಎಸ್ ಸಂಸ್ಥೆಗಳ ಹಸಿರು-2012~ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಗುಲ್ಬರ್ಗದಲ್ಲಿರುವ ಎಚ್ಕೆಇ ಸಂಸ್ಥೆಯ ಎಲ್ಲ ಕಾಲೇಜುಗಳ ಸುತ್ತ ಸಸಿ ಬೆಳೆಸಲು ಒಟ್ಟು 3,500 ಸಸಿಗಳಿಗೆ ಬೇಡಿಕೆ ಇದೆ. ಬೀದರ್ ಮತ್ತು ರಾಯಚೂರಿನಲ್ಲಿರುವ ಎಚ್ಕೆಇ ಕಾಲೇಜುಗಳ ಸುತ್ತ 1,200 ಸಸಿಗಳಿಗೆ ಬೇಡಿಕೆ ಕೊಡಲಾಗಿದೆ. ಅತಿಯಾದ ತಾಪಮಾನದಿಂದ ಬಳಲುವ ಈ ಭಾಗದಲ್ಲಿ ಮರ ಬೆಳೆಸುವುದನ್ನು ಅರಣ್ಯ ಇಲಾಖೆ ಸದಾ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.<br /> <br /> 5,000 ಸಸಿಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಪ್ರತಿವರ್ಷ ಸುಮಾರು ರೂ. 5.5 ಲಕ್ಷ ಹಣ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. <br /> <br /> ಎಚ್ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಮಾತನಾಡಿ, `ಜುಲೈ 5ರ ಒಳಗಾಗಿ ಸಂಸ್ಥೆಯ ಎಲ್ಲ ಆವರಣದಲ್ಲಿ ಸಸಿ ನೆಡುವ ಕಾರ್ಯ ಮುಗಿಯಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕು. ಕ್ಯಾಂಪಸ್ ಸುಂದರವಾಗಿ ಕಂಗೊಳಿಸಲು ಹಸಿರು ಬೆಳೆಸುವುದು ಮುಖ್ಯ~ ಎಂದು ಹೇಳಿದರು.<br /> <br /> ನರೇಂದ್ರ ಬಡಶೇಶಿ ನಿರೂಪಿಸಿದರು. ಡಾ. ಸಂಪತ್ ರಾವ್ ಸ್ವಾಗತಿಸಿದರು. ಸಿದ್ಧಲಿಂಗ ಮಾಲಿಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲ್ಬರ್ಗ: ಸಸಿಗಳು ಬೆಳೆದು ಮರವಾಗುವ ತನಕ ಅವುಗಳನ್ನು ಮಕ್ಕಳಂತೆ ಪೋಷಿಸುವ ಅಗತ್ಯವಿದೆ ಎಂದು ಗುಲ್ಬರ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಶನಿವಾರ ಇಲ್ಲಿ ಸಲಹೆ ನೀಡಿದರು.<br /> <br /> ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್ಕೆಇಎಸ್)ಯ ಗುಲ್ಬರ್ಗ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ `ಎಚ್ಕೆಇಎಸ್ ಸಂಸ್ಥೆಗಳ ಹಸಿರು-2012~ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಗುಲ್ಬರ್ಗದಲ್ಲಿರುವ ಎಚ್ಕೆಇ ಸಂಸ್ಥೆಯ ಎಲ್ಲ ಕಾಲೇಜುಗಳ ಸುತ್ತ ಸಸಿ ಬೆಳೆಸಲು ಒಟ್ಟು 3,500 ಸಸಿಗಳಿಗೆ ಬೇಡಿಕೆ ಇದೆ. ಬೀದರ್ ಮತ್ತು ರಾಯಚೂರಿನಲ್ಲಿರುವ ಎಚ್ಕೆಇ ಕಾಲೇಜುಗಳ ಸುತ್ತ 1,200 ಸಸಿಗಳಿಗೆ ಬೇಡಿಕೆ ಕೊಡಲಾಗಿದೆ. ಅತಿಯಾದ ತಾಪಮಾನದಿಂದ ಬಳಲುವ ಈ ಭಾಗದಲ್ಲಿ ಮರ ಬೆಳೆಸುವುದನ್ನು ಅರಣ್ಯ ಇಲಾಖೆ ಸದಾ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.<br /> <br /> 5,000 ಸಸಿಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಪ್ರತಿವರ್ಷ ಸುಮಾರು ರೂ. 5.5 ಲಕ್ಷ ಹಣ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. <br /> <br /> ಎಚ್ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಮಾತನಾಡಿ, `ಜುಲೈ 5ರ ಒಳಗಾಗಿ ಸಂಸ್ಥೆಯ ಎಲ್ಲ ಆವರಣದಲ್ಲಿ ಸಸಿ ನೆಡುವ ಕಾರ್ಯ ಮುಗಿಯಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕು. ಕ್ಯಾಂಪಸ್ ಸುಂದರವಾಗಿ ಕಂಗೊಳಿಸಲು ಹಸಿರು ಬೆಳೆಸುವುದು ಮುಖ್ಯ~ ಎಂದು ಹೇಳಿದರು.<br /> <br /> ನರೇಂದ್ರ ಬಡಶೇಶಿ ನಿರೂಪಿಸಿದರು. ಡಾ. ಸಂಪತ್ ರಾವ್ ಸ್ವಾಗತಿಸಿದರು. ಸಿದ್ಧಲಿಂಗ ಮಾಲಿಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>