<p><strong>ನವದೆಹಲಿ(ಐಎಎನ್ಎಸ್): </strong>ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್ ಇನ್ನೂ ಕೆಲವು ಕಾಲ ತಿಹಾರ್ ಜೈಲಿನಲ್ಲೇ ಕಳೆಯಬೇಕಾಗಿದೆ. ಕಾರಣ, ದೇಶಬಿಟ್ಟು ಹೋಗುವುದಿಲ್ಲ ಎಂಬ ವಾಗ್ದಾನದೊಂದಿಗೆ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.<br /> <br /> ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಸ್. ಕೇಹರ್್ ಅವರನ್ನು ಒಳಗೊಂಡ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಸಮರ್ಥಿಸಿಕೊಂಡಿತ್ತು. ಇದೇ ವೇಳೆ ಹೂಡಿಕೆದಾರರಿಗೆ ನೀಡಲು ಸೆಬಿಗೆ ₨19,000 ಕೋಟಿ ಪಾವತಿ ನೀಡಲು ಸುಬ್ರತೊ ಅವರಿಂದ ಯಾವು ದಾದರೂ ಪ್ರಸ್ತಾವಗಳಿವೆಯೇ ಎಂದು ವಕೀಲ ರಾಂ ಜೇಠ್ಮಲಾನಿ ಅವರನ್ನು ಪ್ರಶ್ನಿಸಿತು.<br /> <br /> ರಾಯ್ ಹಾಗೂ ಸಹಾರಾ ಸಮೂ ಹದ ಇಬ್ಬರು ನಿರ್ದೇಶಕರ ಬಿಡುಗಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾ.25ಕ್ಕೆ ಮುಂದೂಡಿತು. ಈ ವೇಳೆ ವಕೀಲ ಜೇಠ್ಮಲಾನಿ ರಾಯ್ ₨25,000 ಕೋಟಿ ಮರುಪಾವತಿಸಲು ಸಿದ್ಧರಿರುವುದಾಗಿ ಹೇಳಿದರು. ಆದರೆ ಈ ಪ್ರಸ್ತಾವವನ್ನು ಪೀಠ ತಿರಸ್ಕರಿಸಿತು. ಇದೇ ರೀತಿ ಪ್ರಸ್ತಾವವನ್ನು ಸಹಾರಾ ಸಮೂಹವು ಮಾ.7 ರ ವಿಚಾರಣೆಯಲ್ಲಿ ಮುಂದಿಟ್ಟಿತ್ತು. <br /> <br /> ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬದಲ್ಲಿ ಭಾಗಿಯಾಗಲು ಮತ್ತು ಅನಾರೋಗ್ಯ ಪೀಡಿತ ತಮ್ಮ ತಾಯಿ ಯನ್ನು ನೋಡಿಕೊಳ್ಳಲು ರಾಯ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜೇಠ್ಮಲಾನಿ ನ್ಯಾಯಾ ಲಯವನ್ನು ಕೋರಿದರು. ಆದರೆ ಇದನ್ನು ನ್ಯಾಯಮೂರ್ತಿಗಳ ಮಾನ್ಯ ಮಾಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಐಎಎನ್ಎಸ್): </strong>ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್ ಇನ್ನೂ ಕೆಲವು ಕಾಲ ತಿಹಾರ್ ಜೈಲಿನಲ್ಲೇ ಕಳೆಯಬೇಕಾಗಿದೆ. ಕಾರಣ, ದೇಶಬಿಟ್ಟು ಹೋಗುವುದಿಲ್ಲ ಎಂಬ ವಾಗ್ದಾನದೊಂದಿಗೆ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.<br /> <br /> ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಸ್. ಕೇಹರ್್ ಅವರನ್ನು ಒಳಗೊಂಡ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಸಮರ್ಥಿಸಿಕೊಂಡಿತ್ತು. ಇದೇ ವೇಳೆ ಹೂಡಿಕೆದಾರರಿಗೆ ನೀಡಲು ಸೆಬಿಗೆ ₨19,000 ಕೋಟಿ ಪಾವತಿ ನೀಡಲು ಸುಬ್ರತೊ ಅವರಿಂದ ಯಾವು ದಾದರೂ ಪ್ರಸ್ತಾವಗಳಿವೆಯೇ ಎಂದು ವಕೀಲ ರಾಂ ಜೇಠ್ಮಲಾನಿ ಅವರನ್ನು ಪ್ರಶ್ನಿಸಿತು.<br /> <br /> ರಾಯ್ ಹಾಗೂ ಸಹಾರಾ ಸಮೂ ಹದ ಇಬ್ಬರು ನಿರ್ದೇಶಕರ ಬಿಡುಗಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾ.25ಕ್ಕೆ ಮುಂದೂಡಿತು. ಈ ವೇಳೆ ವಕೀಲ ಜೇಠ್ಮಲಾನಿ ರಾಯ್ ₨25,000 ಕೋಟಿ ಮರುಪಾವತಿಸಲು ಸಿದ್ಧರಿರುವುದಾಗಿ ಹೇಳಿದರು. ಆದರೆ ಈ ಪ್ರಸ್ತಾವವನ್ನು ಪೀಠ ತಿರಸ್ಕರಿಸಿತು. ಇದೇ ರೀತಿ ಪ್ರಸ್ತಾವವನ್ನು ಸಹಾರಾ ಸಮೂಹವು ಮಾ.7 ರ ವಿಚಾರಣೆಯಲ್ಲಿ ಮುಂದಿಟ್ಟಿತ್ತು. <br /> <br /> ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬದಲ್ಲಿ ಭಾಗಿಯಾಗಲು ಮತ್ತು ಅನಾರೋಗ್ಯ ಪೀಡಿತ ತಮ್ಮ ತಾಯಿ ಯನ್ನು ನೋಡಿಕೊಳ್ಳಲು ರಾಯ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜೇಠ್ಮಲಾನಿ ನ್ಯಾಯಾ ಲಯವನ್ನು ಕೋರಿದರು. ಆದರೆ ಇದನ್ನು ನ್ಯಾಯಮೂರ್ತಿಗಳ ಮಾನ್ಯ ಮಾಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>