<p><strong>ಮುಸಗುಪ್ಪಿ (ಮೂಡಲಗಿ): </strong>ಸಾರಾಯಿ ಮತ್ತು ಗುಟಕಾ ಸೇವನೆಯಿಂದ ಯುವ ಜನರು ಹಾಳಾಗಬಾರದೆಂದು ಗ್ರಾಮದ ಭೂಮಿಕಾ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಿ ಪ್ರತಿಭಟನೆಯನ್ನು ಮಾಡಿದರು.<br /> <br /> ಯುವಕರು ಸಾರಾಯಿ ಮತ್ತು ಗುಟಕಾ ವ್ಯಸನಕ್ಕೆ ಬಲಿಯಾಗಿ ತಾವು ಹಾಳಾಗುವದರೊಂದಿಗೆ ಕುಟಂಬವನ್ನು ಹಾಳು ಮಾಡುತ್ತಿದ್ದಾರೆ ಮತ್ತು ಗ್ರಾಮದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಸಂಘದ ಮಹಿಳೆಯರು ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.<br /> <br /> ಗ್ರಾ.ಪಂ. ಅಧ್ಯಕ್ಷ ಬಂಡಿನಿಂಗಗೋಳ ಮಹಿಳೆಯರ ಅಹವಾಲನ್ನು ಆಲಿಸಿ ಗ್ರಾಮದಲ್ಲಿ ಸಾರಾಯಿ ಮತ್ತು ಗುಟಕಾ ನಿಷೇದಕ್ಕೆ ತಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದ ಭರವಸೆ ನೀಡಿದಾಗ ಧರಣಿಯನ್ನು ಹಿಂದಕ್ಕೆ ತೆಗೆದುಕೊಂಡರು. <br /> <br /> ಗ್ರಾ.ಪಂ. ಸದಸ್ಯ ಸಂಜಯ ಹೊಸಕೋಟಿ, ಲಕ್ಷ್ಮಣ ಕುಡಪ್ಪಗೋಳ, ಕಮಲವ್ವ ಮಾದರ,ದುಂಡಪ್ಪ ಪಾತೋಜಿ,ಎಸ್.ಎ. ಮುರಗೋಡ ಮತ್ತಿತರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಸಗುಪ್ಪಿ (ಮೂಡಲಗಿ): </strong>ಸಾರಾಯಿ ಮತ್ತು ಗುಟಕಾ ಸೇವನೆಯಿಂದ ಯುವ ಜನರು ಹಾಳಾಗಬಾರದೆಂದು ಗ್ರಾಮದ ಭೂಮಿಕಾ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಿ ಪ್ರತಿಭಟನೆಯನ್ನು ಮಾಡಿದರು.<br /> <br /> ಯುವಕರು ಸಾರಾಯಿ ಮತ್ತು ಗುಟಕಾ ವ್ಯಸನಕ್ಕೆ ಬಲಿಯಾಗಿ ತಾವು ಹಾಳಾಗುವದರೊಂದಿಗೆ ಕುಟಂಬವನ್ನು ಹಾಳು ಮಾಡುತ್ತಿದ್ದಾರೆ ಮತ್ತು ಗ್ರಾಮದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಸಂಘದ ಮಹಿಳೆಯರು ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.<br /> <br /> ಗ್ರಾ.ಪಂ. ಅಧ್ಯಕ್ಷ ಬಂಡಿನಿಂಗಗೋಳ ಮಹಿಳೆಯರ ಅಹವಾಲನ್ನು ಆಲಿಸಿ ಗ್ರಾಮದಲ್ಲಿ ಸಾರಾಯಿ ಮತ್ತು ಗುಟಕಾ ನಿಷೇದಕ್ಕೆ ತಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದ ಭರವಸೆ ನೀಡಿದಾಗ ಧರಣಿಯನ್ನು ಹಿಂದಕ್ಕೆ ತೆಗೆದುಕೊಂಡರು. <br /> <br /> ಗ್ರಾ.ಪಂ. ಸದಸ್ಯ ಸಂಜಯ ಹೊಸಕೋಟಿ, ಲಕ್ಷ್ಮಣ ಕುಡಪ್ಪಗೋಳ, ಕಮಲವ್ವ ಮಾದರ,ದುಂಡಪ್ಪ ಪಾತೋಜಿ,ಎಸ್.ಎ. ಮುರಗೋಡ ಮತ್ತಿತರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>