<p>ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿ ನಾರೇಯಣ ಮಠದ ಸಾಂಸ್ಕೃತಿಕ ವೇದಿಕೆಯಾದ ನಾದಸುಧಾರಸ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಒಂದು ಸಾವಿರ ದಿನವಾದ ಹಿನ್ನೆಲೆಯಲ್ಲಿ ಸಂಚಾಲಕ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.<br /> <br /> ಸಂಗೀತ, ಕಲೆ, ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಅಧ್ಯಾತ್ಮ ತತ್ವಗಳ ಜತೆಗೆ ಕಲೆಯ ಅವಸಾನವನ್ನು ತಡೆಗಟ್ಟಿ, ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ನಾದಸುಧಾರಸ ವೇದಿಕೆಯನ್ನು ಹುಟ್ಟುಹಾಕಲಾಗಿದೆ. ರಾಷ್ಟ್ರೀಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಬಾಲಕೃಷ್ಣ ಭಾಗವತರ್ ತಿಳಿಸಿದರು.<br /> <br /> ನಾದೋಪಾಸನೆಯ ಮೂಲಕ ಅಧ್ಯಾತ್ಮ ವಿದ್ಯೆಯನ್ನು ಮನಸ್ಸಿಗೆ ನಾಟುವಂತೆ ಪ್ರಸರಿಸುವುದು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಹಾಗೂ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದರು.<br /> <br /> ವಿದ್ವಾನ್ ಮಾಧವದಾಸ್ ಮಾತನಾಡಿದರು. ಕಲಾವಿದರಾದ ನಾರಾಯಣಸ್ವಾಮಿ, ಶ್ರೀಹರಿಶರ್ಮ, ರಮೇಶಬಾಬು, ಟಿ.ಎಲ್.ಆನಂದ್, ಎಸ್.ಎನ್.ಜಗದೀಶ್ಕುಮಾರ್, ನಾರಾಯಣಪ್ಪ, ಹೇಮಕುಮಾರ್, ವೆಂಕಟರಮಣಯ್ಯ, ಸೂರ್ಯನಾರಾಯಣಾಚಾರಿ ಮತ್ತಿತರರು ಸಮೂಹ ಗಾಯನದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿ ನಾರೇಯಣ ಮಠದ ಸಾಂಸ್ಕೃತಿಕ ವೇದಿಕೆಯಾದ ನಾದಸುಧಾರಸ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಒಂದು ಸಾವಿರ ದಿನವಾದ ಹಿನ್ನೆಲೆಯಲ್ಲಿ ಸಂಚಾಲಕ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.<br /> <br /> ಸಂಗೀತ, ಕಲೆ, ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಅಧ್ಯಾತ್ಮ ತತ್ವಗಳ ಜತೆಗೆ ಕಲೆಯ ಅವಸಾನವನ್ನು ತಡೆಗಟ್ಟಿ, ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ನಾದಸುಧಾರಸ ವೇದಿಕೆಯನ್ನು ಹುಟ್ಟುಹಾಕಲಾಗಿದೆ. ರಾಷ್ಟ್ರೀಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಬಾಲಕೃಷ್ಣ ಭಾಗವತರ್ ತಿಳಿಸಿದರು.<br /> <br /> ನಾದೋಪಾಸನೆಯ ಮೂಲಕ ಅಧ್ಯಾತ್ಮ ವಿದ್ಯೆಯನ್ನು ಮನಸ್ಸಿಗೆ ನಾಟುವಂತೆ ಪ್ರಸರಿಸುವುದು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಹಾಗೂ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದರು.<br /> <br /> ವಿದ್ವಾನ್ ಮಾಧವದಾಸ್ ಮಾತನಾಡಿದರು. ಕಲಾವಿದರಾದ ನಾರಾಯಣಸ್ವಾಮಿ, ಶ್ರೀಹರಿಶರ್ಮ, ರಮೇಶಬಾಬು, ಟಿ.ಎಲ್.ಆನಂದ್, ಎಸ್.ಎನ್.ಜಗದೀಶ್ಕುಮಾರ್, ನಾರಾಯಣಪ್ಪ, ಹೇಮಕುಮಾರ್, ವೆಂಕಟರಮಣಯ್ಯ, ಸೂರ್ಯನಾರಾಯಣಾಚಾರಿ ಮತ್ತಿತರರು ಸಮೂಹ ಗಾಯನದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>