<p>ಗಂಗಾವತಿ: ಭತ್ತದ ಖಣಜ ಎಂಬ ಹಿರಿಮೆಯ ಗಂಗಾವತಿ ನಗರದಲ್ಲಿ ನವೆಂಬರನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಇನ್ನೂ ಎರಡು ತಿಂಗಳು ಬಾಕಿ ಇರುವಂತೆಯೇ ಭರದ ಸಿದ್ಧತೆ ಆರಂಭವಾಗಿವೆ.<br /> <br /> ಸಿದ್ಧತೆಯ ಪೂರ್ವಭಾವಿ ವ್ಯವಸ್ಥೆ ಮತ್ತು ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಸುಮಾರು 25ಕ್ಕೂ ಹೆಚ್ಚು ವಿವಿಧ ಸಮಿತಿ ಮತ್ತು ಉಪ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಲ್ಲದೇ ಸಮಿತಿಗಳು ಈಗಾಗಲೆ ಸುಮಾರು 36ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಸಮ್ಮೇಳನ ರೂಪುರೇಷೆ ಸಿದ್ದಪಡಿಸಿವೆ.<br /> <br /> ಆದರೆ 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕೇವಲ ಹಾಲಿ ರಾಜಕಾರಣಿಗಳಿಗಷ್ಟೆ ಸೀಮಿತವಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡ ತೊಡಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾಜಿ ರಾಜಕಾರಣಿಗಳನ್ನು ಸಮ್ಮೇಳನದ ಪ್ರತಿಯೊಂದು ಸಭೆಗೆ ನಿರ್ಲಕ್ಷಿಸಲಾಗುತ್ತಿದೆ.<br /> <br /> ಜತೆಗೆ ಸಮ್ಮೇಳನದ ಏರ್ಪಾಡುಗಳಿಗಾಗಿ ಅಸ್ತಿತ್ವಕ್ಕೆ ತರಲಾದ ಯಾವೊಂದು ಸಮಿತಿಯಲ್ಲಿಯೂ ನಗರದ ಪ್ರಮುಖ ಮಾಜಿ ರಾಜಕಾರಣಿಗಳನ್ನು ಸೇರಿಸಿಲ್ಲದಿರುವುದು ಸಮ್ಮೇಳನ ಸಂಘಟಕರತ್ತ ಸಾರ್ವಜನಿಕರು ಅನುಮಾನದ ಚಿತ್ತ ಹರಿಸುವಂತಾಗಿದೆ.<br /> <br /> ಈ ಬಗ್ಗೆ ಸಮ್ಮೇಳನದ ಸಂಘಟಕರು, ವಾಸ್ತವದ ಗುಟ್ಟು ಬಿಟ್ಟುಕೊಡುತ್ತಿಲ್ಲ. `ಮಾಜಿ ರಾಜಕಾರಣಿಗಳನ್ನು ಗೌರವ ಪೂರ್ವಕವಾಗಿ ಸಲಹಾ ಸಮಿತಿಯಲ್ಲಿ ಹಾಕಿಕೊಳ್ಳಲಾಗಿದೆ~ ಎಂದು ಹೇಳುತ್ತಾರೆ. ಆದರೆ ಸಲಹಾ ಸಮಿತಿಯ ಒಂದೇ ಒಂದು ಸಭೆ ಈವರೆಗೆ ನಡೆದಿಲ್ಲ.<br /> <br /> ಸಮ್ಮೇಳನದ ಲಾಂಛನ ಬಿಡುಗಡೆಯಿಂದ ಹಿಡಿದು, ಇಲ್ಲಿವರೆಗೆ ಅಂದರೆ, ವಿವಿಧ ಉಪ ಸಮಿತಿಗಳು ಈಗಾಗಲೆ 36 ಬಾರಿ ಸಭೆ ನಡೆಸಿವೆ. ಆದರೆ ಇದುವರೆಗೂ ಯಾವೊಬ್ಬ ಮಾಜಿ ರಾಜಕಾರಣಿ ಸಮ್ಮೇಳನದ ಕಚೇರಿಗೆ ಕಾಲಿಟ್ಟಿಲ್ಲ. <br /> <br /> ಹಾಲಿ ರಾಜಕಾರಣಿಗಳ ಇಚ್ಛಾನುಸಾರ ಸಮ್ಮೇಳನದ ದರ್ಬಾರು ನಡೆಯುತ್ತಿದೆ. ಕೈ-ಕೈ ಜೋಡಿಸಿದರೆ ಮಾತ್ರ ಚಪ್ಪಾಳೆ ಯಾಗುತ್ತದೆ. ಹಾಗೆಯೆ ಸಂಘಟಕರು ಎಲ್ಲರೊಂದಿಗೆ ಸಮನ್ವಯ ಸಾಧಿಸಿದರೆ ಮಾತ್ರ ಸಮ್ಮೇಳನ ಯಶಸ್ವಿಗೆ ಯಾಗಲಿದೆ ಎಂಬ ಮಾತು ಸಾಹಿತ್ಯಾಸಕ್ತರಿಂದ ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಭತ್ತದ ಖಣಜ ಎಂಬ ಹಿರಿಮೆಯ ಗಂಗಾವತಿ ನಗರದಲ್ಲಿ ನವೆಂಬರನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಇನ್ನೂ ಎರಡು ತಿಂಗಳು ಬಾಕಿ ಇರುವಂತೆಯೇ ಭರದ ಸಿದ್ಧತೆ ಆರಂಭವಾಗಿವೆ.<br /> <br /> ಸಿದ್ಧತೆಯ ಪೂರ್ವಭಾವಿ ವ್ಯವಸ್ಥೆ ಮತ್ತು ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಸುಮಾರು 25ಕ್ಕೂ ಹೆಚ್ಚು ವಿವಿಧ ಸಮಿತಿ ಮತ್ತು ಉಪ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಲ್ಲದೇ ಸಮಿತಿಗಳು ಈಗಾಗಲೆ ಸುಮಾರು 36ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಸಮ್ಮೇಳನ ರೂಪುರೇಷೆ ಸಿದ್ದಪಡಿಸಿವೆ.<br /> <br /> ಆದರೆ 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕೇವಲ ಹಾಲಿ ರಾಜಕಾರಣಿಗಳಿಗಷ್ಟೆ ಸೀಮಿತವಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡ ತೊಡಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾಜಿ ರಾಜಕಾರಣಿಗಳನ್ನು ಸಮ್ಮೇಳನದ ಪ್ರತಿಯೊಂದು ಸಭೆಗೆ ನಿರ್ಲಕ್ಷಿಸಲಾಗುತ್ತಿದೆ.<br /> <br /> ಜತೆಗೆ ಸಮ್ಮೇಳನದ ಏರ್ಪಾಡುಗಳಿಗಾಗಿ ಅಸ್ತಿತ್ವಕ್ಕೆ ತರಲಾದ ಯಾವೊಂದು ಸಮಿತಿಯಲ್ಲಿಯೂ ನಗರದ ಪ್ರಮುಖ ಮಾಜಿ ರಾಜಕಾರಣಿಗಳನ್ನು ಸೇರಿಸಿಲ್ಲದಿರುವುದು ಸಮ್ಮೇಳನ ಸಂಘಟಕರತ್ತ ಸಾರ್ವಜನಿಕರು ಅನುಮಾನದ ಚಿತ್ತ ಹರಿಸುವಂತಾಗಿದೆ.<br /> <br /> ಈ ಬಗ್ಗೆ ಸಮ್ಮೇಳನದ ಸಂಘಟಕರು, ವಾಸ್ತವದ ಗುಟ್ಟು ಬಿಟ್ಟುಕೊಡುತ್ತಿಲ್ಲ. `ಮಾಜಿ ರಾಜಕಾರಣಿಗಳನ್ನು ಗೌರವ ಪೂರ್ವಕವಾಗಿ ಸಲಹಾ ಸಮಿತಿಯಲ್ಲಿ ಹಾಕಿಕೊಳ್ಳಲಾಗಿದೆ~ ಎಂದು ಹೇಳುತ್ತಾರೆ. ಆದರೆ ಸಲಹಾ ಸಮಿತಿಯ ಒಂದೇ ಒಂದು ಸಭೆ ಈವರೆಗೆ ನಡೆದಿಲ್ಲ.<br /> <br /> ಸಮ್ಮೇಳನದ ಲಾಂಛನ ಬಿಡುಗಡೆಯಿಂದ ಹಿಡಿದು, ಇಲ್ಲಿವರೆಗೆ ಅಂದರೆ, ವಿವಿಧ ಉಪ ಸಮಿತಿಗಳು ಈಗಾಗಲೆ 36 ಬಾರಿ ಸಭೆ ನಡೆಸಿವೆ. ಆದರೆ ಇದುವರೆಗೂ ಯಾವೊಬ್ಬ ಮಾಜಿ ರಾಜಕಾರಣಿ ಸಮ್ಮೇಳನದ ಕಚೇರಿಗೆ ಕಾಲಿಟ್ಟಿಲ್ಲ. <br /> <br /> ಹಾಲಿ ರಾಜಕಾರಣಿಗಳ ಇಚ್ಛಾನುಸಾರ ಸಮ್ಮೇಳನದ ದರ್ಬಾರು ನಡೆಯುತ್ತಿದೆ. ಕೈ-ಕೈ ಜೋಡಿಸಿದರೆ ಮಾತ್ರ ಚಪ್ಪಾಳೆ ಯಾಗುತ್ತದೆ. ಹಾಗೆಯೆ ಸಂಘಟಕರು ಎಲ್ಲರೊಂದಿಗೆ ಸಮನ್ವಯ ಸಾಧಿಸಿದರೆ ಮಾತ್ರ ಸಮ್ಮೇಳನ ಯಶಸ್ವಿಗೆ ಯಾಗಲಿದೆ ಎಂಬ ಮಾತು ಸಾಹಿತ್ಯಾಸಕ್ತರಿಂದ ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>