<p><strong>ಸಿಂದಗಿ:</strong> ನಗರದ 17 ಮನೆಗಳಲ್ಲಿ ಒಣ ಶೌಚಾಲಯ (ಮಲ ಹೊರುವ ಪದ್ದತಿ) ಪದ್ಧತಿ ಅಸ್ತಿತ್ವದಲ್ಲಿ ಇದೆ ಎಂಬ ಗಣತಿ ವರದಿಯ ಹಿನ್ನಲೆಯಲ್ಲಿ ಭಾನುವಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ಸಿಂದಗಿಗೆ ಭೇಟಿ ನೀಡಿ ಪರಿಶೀಲಿಸಿದರು.<br /> <br /> ಇಲ್ಲಿಯ ಅಶೋಕ ಚೌಕ್ನಲ್ಲಿರುವ ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ಇವರ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ಸಮೀಕ್ಷೆ ಮಾಡಿದರು.<br /> <br /> ಕಳೆದ ಜನಗಣತಿ ಸಂದರ್ಭದಲ್ಲಿ ಅರ್ಜಿ ನಮೂನೆಯಲ್ಲಿ ನಗರದ 17 ಮನೆಗಳಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಭರ್ತಿ ಮಾಡಿದ ಕಾರಣಕ್ಕಾಗಿ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಈ ಬಗ್ಗೆ ಕ್ರಮ ಜರುಗಿಸುವಂತೆ ಯೋಜನಾನಿರ್ದೇಶಕಿ ಮಾನಕರ ಅವರಿಗೆ ಸೂಚನೆ ನೀಡಲಾಗಿತ್ತು.<br /> <br /> ಜನಗಣತಿ ಅರ್ಜಿ ನಮೂನೆಯಲ್ಲಿ ತಪ್ಪಾಗಿ ಭರ್ತಿ ಮಾಡಿದ್ದಾರೆ ಎಂದು ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ತಮ್ಮ ಹೇಳಿಕೆ ನೀಡಿದರು.<br /> <br /> ಈ ಸಂದರ್ಭದಲ್ಲಿ ಯೋಜನಾನಿರ್ದೇಶಕಿ ಗಂಗೂಬಾಯಿ ಮಾತನಾಡಿ, ಮಲ ಹೊರುವ ಪದ್ದತಿ ಅತ್ಯಂತ ಗಂಭೀರ ಅಪರಾಧ ಎಂದರು.<br /> ಈ ಪದ್ಧತಿ ಅನುಸರಿಸಿದರೆ ಕಠಿಣ ಶಿಕ್ಷೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ.<br /> <br /> ಸಿಂದಗಿಯಲ್ಲಿ 17 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲಾಯಿತು. ವರದಿ ವರದಿ ಸುಳ್ಳು ಎಂಬುದು ಸಾಬೀತಾಗಿದೆ ಎಂದರು. ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕಾಗಿ ನಗರದ ಪುರಸಭೆಗಳಿಗೆ ಸರ್ಕಾರ ಸೆಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವುಳ್ಳ ವಾಹನಗಳನ್ನು ಒದಗಿಸಲಾಗಿದೆ. ಎಲ್ಲಿಯಾದರೂ ಇಂಥ ಪದ್ಧತಿ ಇರುವ ಬಗ್ಗೆ ಕಂಡುಬಂದರೆ ತಮ್ಮ ಕಚೇರಿಗೆ ತಿಳಿಸಲು ಮನವಿ ಮಾಡಿದರು.<br /> <br /> ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎನ್. ಆರ್.ಮಠ, ಸದಸ್ಯ ಹಣಮಂತ ಸುಣಗಾರ, ಸುರೇಶ ಹಳ್ಳೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ನಗರದ 17 ಮನೆಗಳಲ್ಲಿ ಒಣ ಶೌಚಾಲಯ (ಮಲ ಹೊರುವ ಪದ್ದತಿ) ಪದ್ಧತಿ ಅಸ್ತಿತ್ವದಲ್ಲಿ ಇದೆ ಎಂಬ ಗಣತಿ ವರದಿಯ ಹಿನ್ನಲೆಯಲ್ಲಿ ಭಾನುವಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ಸಿಂದಗಿಗೆ ಭೇಟಿ ನೀಡಿ ಪರಿಶೀಲಿಸಿದರು.<br /> <br /> ಇಲ್ಲಿಯ ಅಶೋಕ ಚೌಕ್ನಲ್ಲಿರುವ ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ಇವರ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ಸಮೀಕ್ಷೆ ಮಾಡಿದರು.<br /> <br /> ಕಳೆದ ಜನಗಣತಿ ಸಂದರ್ಭದಲ್ಲಿ ಅರ್ಜಿ ನಮೂನೆಯಲ್ಲಿ ನಗರದ 17 ಮನೆಗಳಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಭರ್ತಿ ಮಾಡಿದ ಕಾರಣಕ್ಕಾಗಿ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಈ ಬಗ್ಗೆ ಕ್ರಮ ಜರುಗಿಸುವಂತೆ ಯೋಜನಾನಿರ್ದೇಶಕಿ ಮಾನಕರ ಅವರಿಗೆ ಸೂಚನೆ ನೀಡಲಾಗಿತ್ತು.<br /> <br /> ಜನಗಣತಿ ಅರ್ಜಿ ನಮೂನೆಯಲ್ಲಿ ತಪ್ಪಾಗಿ ಭರ್ತಿ ಮಾಡಿದ್ದಾರೆ ಎಂದು ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ತಮ್ಮ ಹೇಳಿಕೆ ನೀಡಿದರು.<br /> <br /> ಈ ಸಂದರ್ಭದಲ್ಲಿ ಯೋಜನಾನಿರ್ದೇಶಕಿ ಗಂಗೂಬಾಯಿ ಮಾತನಾಡಿ, ಮಲ ಹೊರುವ ಪದ್ದತಿ ಅತ್ಯಂತ ಗಂಭೀರ ಅಪರಾಧ ಎಂದರು.<br /> ಈ ಪದ್ಧತಿ ಅನುಸರಿಸಿದರೆ ಕಠಿಣ ಶಿಕ್ಷೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ.<br /> <br /> ಸಿಂದಗಿಯಲ್ಲಿ 17 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲಾಯಿತು. ವರದಿ ವರದಿ ಸುಳ್ಳು ಎಂಬುದು ಸಾಬೀತಾಗಿದೆ ಎಂದರು. ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕಾಗಿ ನಗರದ ಪುರಸಭೆಗಳಿಗೆ ಸರ್ಕಾರ ಸೆಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವುಳ್ಳ ವಾಹನಗಳನ್ನು ಒದಗಿಸಲಾಗಿದೆ. ಎಲ್ಲಿಯಾದರೂ ಇಂಥ ಪದ್ಧತಿ ಇರುವ ಬಗ್ಗೆ ಕಂಡುಬಂದರೆ ತಮ್ಮ ಕಚೇರಿಗೆ ತಿಳಿಸಲು ಮನವಿ ಮಾಡಿದರು.<br /> <br /> ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎನ್. ಆರ್.ಮಠ, ಸದಸ್ಯ ಹಣಮಂತ ಸುಣಗಾರ, ಸುರೇಶ ಹಳ್ಳೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>