<p>ತುಮಕೂರು: ಭಾರತದ ವೈವಿಧ್ಯತೆ ಹಾಗೂ ಮಾನವೀಯ ಮೌಲ್ಯಗಳು ಅತ್ಯಂತ ಸಂತೋಷದ ಅಂಶಗಳೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ರುಡಾಲ್ಫ್ ಮಾರ್ಕಸ್ ಹೇಳಿದರು.<br /> <br /> ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು, ಬುಧವಾರ ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಸಾಯನ ಶಾಸ್ತ್ರ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> `ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಎನಿಸಿದ ರೇಡಿಯೋ ಕಾರ್ಬನ್ ಡೇಟಿಂಗ್ ವಿಷಯದ ಮೇಲೆ ಸಂಶೋಧನೆ ನಡೆಸಿ ನೊಬೆಲ್ ಪುರಸ್ಕಾರ ಪಡೆದ ಪ್ರೊ.ವಿಲಿಯರ್ಡ್ ಎಫ್.ಲಿಬಿ ಅವರ ಭಾಷಣದಿಂದ ಉತ್ತೇಜಿತನಾಗಿ ತಾನು ಸಂಶೋಧನೆ ನಡೆಸಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರನಾದೆ. <br /> <br /> ನಿಮಗೆ ಯಾವ ವಿಷಯದಲ್ಲಿ ಅತ್ಯಂತ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚಿನ ಸಾಧನೆ ಹಾಗೂ ಸಂಶೋಧನೆ ಮಾಡಿ~ ಎಂದು ಸಲಹೆ ಮಾಡಿದರು.<br /> <br /> ಒಂದು ಸಿದ್ಧಾಂತ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಹುಕಾಲ ಉಳಿಯಬೇಕಾದರೆ ಅದು ಸಾಕಷ್ಟು ಗಟ್ಟಿಯಾಗಿರಬೇಕು ಮತ್ತು ಕಠಿಣ ಶ್ರಮದ ಹಿನ್ನೆಲೆ ಹೊಂದಿರಬೇಕು ಎಂದು ಅವರು ತಿಳಿಸಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಾಗೂ ಸೌಲಭ್ಯಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಭಾರತಕ್ಕೆ ಈ ಹಿಂದೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಇಲ್ಲಿನ ಸಂಸ್ಕೃತಿ ವೈವಿಧ್ಯತೆ ತುಂಬ ಇಷ್ಟ ಎಂದು ಹೇಳಿದರು.<br /> <br /> ತುಮಕೂರು ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಸ್ನಾತಕೋತ್ತರ ಅಧ್ಯಯನ ವಿಭಾಗ ನಿರ್ದೇಶಕ ಡಾ.ಎಂ.ಜಯರಾಮು ಉಪಸ್ಥಿತರಿದ್ದರು. ಉಪಕುಲಸಚಿವ ಎ.ರೂಪೇಶ್ಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಭಾರತದ ವೈವಿಧ್ಯತೆ ಹಾಗೂ ಮಾನವೀಯ ಮೌಲ್ಯಗಳು ಅತ್ಯಂತ ಸಂತೋಷದ ಅಂಶಗಳೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ರುಡಾಲ್ಫ್ ಮಾರ್ಕಸ್ ಹೇಳಿದರು.<br /> <br /> ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು, ಬುಧವಾರ ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಸಾಯನ ಶಾಸ್ತ್ರ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> `ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಎನಿಸಿದ ರೇಡಿಯೋ ಕಾರ್ಬನ್ ಡೇಟಿಂಗ್ ವಿಷಯದ ಮೇಲೆ ಸಂಶೋಧನೆ ನಡೆಸಿ ನೊಬೆಲ್ ಪುರಸ್ಕಾರ ಪಡೆದ ಪ್ರೊ.ವಿಲಿಯರ್ಡ್ ಎಫ್.ಲಿಬಿ ಅವರ ಭಾಷಣದಿಂದ ಉತ್ತೇಜಿತನಾಗಿ ತಾನು ಸಂಶೋಧನೆ ನಡೆಸಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರನಾದೆ. <br /> <br /> ನಿಮಗೆ ಯಾವ ವಿಷಯದಲ್ಲಿ ಅತ್ಯಂತ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚಿನ ಸಾಧನೆ ಹಾಗೂ ಸಂಶೋಧನೆ ಮಾಡಿ~ ಎಂದು ಸಲಹೆ ಮಾಡಿದರು.<br /> <br /> ಒಂದು ಸಿದ್ಧಾಂತ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಹುಕಾಲ ಉಳಿಯಬೇಕಾದರೆ ಅದು ಸಾಕಷ್ಟು ಗಟ್ಟಿಯಾಗಿರಬೇಕು ಮತ್ತು ಕಠಿಣ ಶ್ರಮದ ಹಿನ್ನೆಲೆ ಹೊಂದಿರಬೇಕು ಎಂದು ಅವರು ತಿಳಿಸಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಾಗೂ ಸೌಲಭ್ಯಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಭಾರತಕ್ಕೆ ಈ ಹಿಂದೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಇಲ್ಲಿನ ಸಂಸ್ಕೃತಿ ವೈವಿಧ್ಯತೆ ತುಂಬ ಇಷ್ಟ ಎಂದು ಹೇಳಿದರು.<br /> <br /> ತುಮಕೂರು ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಸ್ನಾತಕೋತ್ತರ ಅಧ್ಯಯನ ವಿಭಾಗ ನಿರ್ದೇಶಕ ಡಾ.ಎಂ.ಜಯರಾಮು ಉಪಸ್ಥಿತರಿದ್ದರು. ಉಪಕುಲಸಚಿವ ಎ.ರೂಪೇಶ್ಕುಮಾರ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>