<p>ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ವಿ.ಶ್ರೀರಾಮರೆಡ್ಡಿ ಭದ್ರತಾ ಠೇವಣಿಗಾಗಿ ಸ್ವಂತ ಹಣ ಬಳಸಿಲ್ಲ. ಅವರ ಮೇಲಿನ ಅಭಿಮಾನದಿಂದ ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ಭದ್ರತಾ ಠೇವಣಿ ಪಾವತಿಸಿದ್ದಾರೆ.<br /> <br /> ನಗರದಲ್ಲಿ ಶನಿವಾರ ಜಿ.ವಿ.ಶ್ರೀರಾಮರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಈ ವಿಷಯ ತಿಳಿಸಿದ ಸಿಪಿಎಂ ನಾಯಕ ಮೀನಾಕ್ಷಿ ಸುಂದರಂ, ‘ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ₨ 25 ಸಾವಿರ ಭದ್ರತಾ ಠೇವಣಿ ಪಾವತಿಸಿದ್ದಾರೆ’ ಎಂದರು.<br /> <br /> ‘ಚುನಾವಣೆ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಯಲಹಂಕದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಹೆಚ್ಚಿನ ಆಸಕ್ತಿ ತೋರಿಸಿದ ಆಟೊರಿಕ್ಷಾ ಚಾಲಕರು ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ನಂತರ ಅವರೇ ಭದ್ರತಾ ಠೇವಣಿ ನೀಡಲು ಮುಂದಾದರು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ವಿ.ಶ್ರೀರಾಮರೆಡ್ಡಿ ಭದ್ರತಾ ಠೇವಣಿಗಾಗಿ ಸ್ವಂತ ಹಣ ಬಳಸಿಲ್ಲ. ಅವರ ಮೇಲಿನ ಅಭಿಮಾನದಿಂದ ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ಭದ್ರತಾ ಠೇವಣಿ ಪಾವತಿಸಿದ್ದಾರೆ.<br /> <br /> ನಗರದಲ್ಲಿ ಶನಿವಾರ ಜಿ.ವಿ.ಶ್ರೀರಾಮರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಈ ವಿಷಯ ತಿಳಿಸಿದ ಸಿಪಿಎಂ ನಾಯಕ ಮೀನಾಕ್ಷಿ ಸುಂದರಂ, ‘ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ₨ 25 ಸಾವಿರ ಭದ್ರತಾ ಠೇವಣಿ ಪಾವತಿಸಿದ್ದಾರೆ’ ಎಂದರು.<br /> <br /> ‘ಚುನಾವಣೆ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಯಲಹಂಕದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಹೆಚ್ಚಿನ ಆಸಕ್ತಿ ತೋರಿಸಿದ ಆಟೊರಿಕ್ಷಾ ಚಾಲಕರು ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ನಂತರ ಅವರೇ ಭದ್ರತಾ ಠೇವಣಿ ನೀಡಲು ಮುಂದಾದರು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>