<p>ಮಂಡ್ಯ: ನಗರದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ, ಅಲ್ಲಿನ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಈಗ ಪಾಳು ಬಿದ್ದಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದ ಗೃಹಗಳು ಅನ್ಯ ಕಾರಣಗಳಿಗೆ ಬಳಕೆ ಯಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.<br /> <br /> ವಸತಿಗೃಹಗಳು ನಿರ್ಮಾಣ ಗೊಂಡು 2-3 ವರ್ಷಗಳೇ ಕಳೆ ದಿದ್ದರೂ ವಾಸಿಸಲು ಸಿಬ್ಬಂದಿ ಮುಂದಾಗುತ್ತಿಲ್ಲ. ಹೀಗಾಗಿ, ಮದ್ಯ ವಸನಿಗಳು ಸೇರಿದಂತೆ ಅನ್ಯ ಉದ್ದೇಶ ಗಳಿಗೆ ಇವು ಹೇಳಿ ಮಾಡಿಸಿದ ತಾಣವಾಗಿದೆ.<br /> <br /> ರೈಲ್ವೆ ಕ್ವಾಟ್ರರ್ಸ್ನಲ್ಲಿ ಒಟ್ಟು 10 ಮನೆಗಳು ಖಾಲಿ ಇದ್ದು, ಇಡೀ ಪರಿ ಸರ ಗಲೀಜಿನಿಂದ ಕೂಡಿದೆ. ಮನೆ ಬಳ ಸದಿದ್ದರೂ, ಚೊಕ್ಕವಾಗಿಟ್ಟು ಕೊಂಡು, ಸಂರಕ್ಷಿಸಿಕೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳೂ ಮನಸ್ಸು ಮಾಡಿಲ್ಲ. ಪರಿಣಾಮ, ಮನೆ ಕಟ್ಟಿ ಅನೈತಿಕ ಚಟುವಟಿಕೆಗಳಿಗೆ ಬಿಟ್ಟುಕೊಟ್ಟಂತಿದೆ. <br /> <br /> ರೈಲ್ವೆ ಕೆಲಸಕ್ಕೆ ಬರುವ ಬಹುತೇಕ ಸಿಬ್ಬಂದಿ ಮೈಸೂರು, ಬೆಂಗಳೂರಿ ನಿಂದ ಬರುತ್ತಾರೆ. ನಗರದಲ್ಲಿ ಇರುವವರೂ ಬೇರೆಡೆ ಮನೆ ಮಾಡಿದ್ದಾರೆ. ಮೂಲ ವೇತನಕ್ಕೆ ಪೂರಕವಾಗಿ ಸರ್ಕಾರವೇ ಮನೆ ಬಾಡಿಗೆ ಭತ್ಯೆ ನೀಡುವಾಗ ಇಲ್ಲಿದ್ದು ಸಂಕಷ್ಟ ಏಕೆ ಎದುರಿಸಬೇಕು ಎನ್ನುವುದೂ ವಾಸಿಸದಿರಲು ಕಾರಣ.<br /> <br /> ಅದಷ್ಟೇ ಅಲ್ಲ, ಕುಡಿಯುವ ನೀರು, ಶುಚ್ಚಿತ್ವ, ಬೀದಿ ದೀಪ ನಿರ್ವಹ ಣೆಯೂ ಅಷ್ಟಕಷ್ಟೆ. ಸ್ವಂತ ಮನೆ ಹೊಂದಿರುವುದು, ಮಕ್ಕಳ ವಿದ್ಯಾಭ್ಯಾ ಸದ ದೃಷ್ಟಿ, ರೈಲಿನ ಶಬ್ದ, ಪುಂಡರ ಕಿರಿ ಕಿರಿಯೂ ಸಿಬ್ಬಂದಿ ಮನೆ ನಿರಾಕರಿಸಲು ಇರುವ ಇನ್ನಷ್ಟು ಕಾರಣಗಳೆನ್ನಬಹುದು.<br /> <br /> `ಬೀದಿ ದೀಪ ಹದಗೆಟ್ಟು, ವಾರ ಕಳೆದರೂ, ಸರಿಪಡಿಸಿಲ್ಲ. ಕುಡಿವ ನೀರು ಚೆನ್ನಾಗಿ ಇಲ್ಲ. ಸಂಜೆಯ ನಂತರ, ಪೇಟೆ ಬೀದಿಗೆ ಹೊಂದಿಕೊಂಡಂತಿ ರುವ, ಕ್ವಾಟ್ರರ್ಸ್ ನ ಒಂದು ಬದಿ ಯಲ್ಲಿ ಪುಂಡ-ಪೊಕರಿಗಳ ಹಾವಳಿ ಹೆಚ್ಚು. ಹೀಗಾಗಿ, ಆ ಮಾರ್ಗದಲ್ಲಿ ಓಡಾಡುವುದೇ ಇಲ್ಲ~ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರತ್ನ.<br /> <br /> ಕ್ವಾಟರ್ಸ್ನಲ್ಲಿ ಉಳಿದಿರುವವರು ಕೆಳ ಹಂತದ ನೌಕರರೇ. ಅಲ್ಲಿರುವ ಸೌಲಭ್ಯಗಳಲ್ಲೇ ದಿನದೂಡುತ್ತಿದ್ದಾರೆ. ಸೌಲಭ್ಯಕ್ಕಿಂತಲೂ ಸುರಕ್ಷತೆಯ ಬಗೆಗೆ ಅಲ್ಲಿನ ಬಹುತೇಕ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಾರೆ. <br /> <strong><br /> ಉಢಾಪೆ ಉತ್ತರ: </strong>ಮನೆಗಳ ಬಳಕೆ, ಸ್ವಚ್ಛತೆ ಕುರಿತ ಎನ್ನುವ ಪ್ರಶ್ನೆಗೆ, ಭಾನುವಾರ ಇನ್ಚಾರ್ಜ್ ನಲ್ಲಿದ್ದ ರೈಲ್ವೆ ಅಧಿಕಾರಿ ತೇಜಸ್ವಿ ಅವರದು ಉಢಾಪೆ, ಉದ್ಧಟತನ ಉತ್ತರ. `ನಾವ್ಯಾರೂ ಇಲ್ಲ ಅದಕ್ಕೆ ಬಳಕೆ ಆಗುತ್ತಿಲ್ಲ. ಇಲ್ಲೇ ಉಳಿದುಕೊಳ್ಳಬೇಕಂತೇನು? ನಮ್ಮಿಷ್ಟ. ಅಯ್ಯೋ ಹೇಗೋ ಇರುತ್ತದೆ ಬಿಡಿ. ಎಲ್ಲವನ್ನೂ ನೋಡೊಕಾಗುತ್ತಾ~. <br /> <br /> ಹೌದು, ಅಧಿಕಾರಿಗಳಿಗೆ ಪುರುಸೊತ್ತು ಇಲ್ಲ. ಇಲಾಖೆ ಸ್ವತ್ತನ್ನು ಜೋಪಾನ ಮಾಡಲು ಆಗುತ್ತಿಲ್ಲ. ಹೀಗಾಗಿಯೇ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ವಸತಿ ಗೃಹಗಳು ಈಗ ಪಾಳು ಬಿದ್ದಿವೆ. ಮನೆಗಳ ರಕ್ಷಣೆ ಹೊಣೆ ಯಾರದು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ನಗರದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ, ಅಲ್ಲಿನ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಈಗ ಪಾಳು ಬಿದ್ದಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದ ಗೃಹಗಳು ಅನ್ಯ ಕಾರಣಗಳಿಗೆ ಬಳಕೆ ಯಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.<br /> <br /> ವಸತಿಗೃಹಗಳು ನಿರ್ಮಾಣ ಗೊಂಡು 2-3 ವರ್ಷಗಳೇ ಕಳೆ ದಿದ್ದರೂ ವಾಸಿಸಲು ಸಿಬ್ಬಂದಿ ಮುಂದಾಗುತ್ತಿಲ್ಲ. ಹೀಗಾಗಿ, ಮದ್ಯ ವಸನಿಗಳು ಸೇರಿದಂತೆ ಅನ್ಯ ಉದ್ದೇಶ ಗಳಿಗೆ ಇವು ಹೇಳಿ ಮಾಡಿಸಿದ ತಾಣವಾಗಿದೆ.<br /> <br /> ರೈಲ್ವೆ ಕ್ವಾಟ್ರರ್ಸ್ನಲ್ಲಿ ಒಟ್ಟು 10 ಮನೆಗಳು ಖಾಲಿ ಇದ್ದು, ಇಡೀ ಪರಿ ಸರ ಗಲೀಜಿನಿಂದ ಕೂಡಿದೆ. ಮನೆ ಬಳ ಸದಿದ್ದರೂ, ಚೊಕ್ಕವಾಗಿಟ್ಟು ಕೊಂಡು, ಸಂರಕ್ಷಿಸಿಕೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳೂ ಮನಸ್ಸು ಮಾಡಿಲ್ಲ. ಪರಿಣಾಮ, ಮನೆ ಕಟ್ಟಿ ಅನೈತಿಕ ಚಟುವಟಿಕೆಗಳಿಗೆ ಬಿಟ್ಟುಕೊಟ್ಟಂತಿದೆ. <br /> <br /> ರೈಲ್ವೆ ಕೆಲಸಕ್ಕೆ ಬರುವ ಬಹುತೇಕ ಸಿಬ್ಬಂದಿ ಮೈಸೂರು, ಬೆಂಗಳೂರಿ ನಿಂದ ಬರುತ್ತಾರೆ. ನಗರದಲ್ಲಿ ಇರುವವರೂ ಬೇರೆಡೆ ಮನೆ ಮಾಡಿದ್ದಾರೆ. ಮೂಲ ವೇತನಕ್ಕೆ ಪೂರಕವಾಗಿ ಸರ್ಕಾರವೇ ಮನೆ ಬಾಡಿಗೆ ಭತ್ಯೆ ನೀಡುವಾಗ ಇಲ್ಲಿದ್ದು ಸಂಕಷ್ಟ ಏಕೆ ಎದುರಿಸಬೇಕು ಎನ್ನುವುದೂ ವಾಸಿಸದಿರಲು ಕಾರಣ.<br /> <br /> ಅದಷ್ಟೇ ಅಲ್ಲ, ಕುಡಿಯುವ ನೀರು, ಶುಚ್ಚಿತ್ವ, ಬೀದಿ ದೀಪ ನಿರ್ವಹ ಣೆಯೂ ಅಷ್ಟಕಷ್ಟೆ. ಸ್ವಂತ ಮನೆ ಹೊಂದಿರುವುದು, ಮಕ್ಕಳ ವಿದ್ಯಾಭ್ಯಾ ಸದ ದೃಷ್ಟಿ, ರೈಲಿನ ಶಬ್ದ, ಪುಂಡರ ಕಿರಿ ಕಿರಿಯೂ ಸಿಬ್ಬಂದಿ ಮನೆ ನಿರಾಕರಿಸಲು ಇರುವ ಇನ್ನಷ್ಟು ಕಾರಣಗಳೆನ್ನಬಹುದು.<br /> <br /> `ಬೀದಿ ದೀಪ ಹದಗೆಟ್ಟು, ವಾರ ಕಳೆದರೂ, ಸರಿಪಡಿಸಿಲ್ಲ. ಕುಡಿವ ನೀರು ಚೆನ್ನಾಗಿ ಇಲ್ಲ. ಸಂಜೆಯ ನಂತರ, ಪೇಟೆ ಬೀದಿಗೆ ಹೊಂದಿಕೊಂಡಂತಿ ರುವ, ಕ್ವಾಟ್ರರ್ಸ್ ನ ಒಂದು ಬದಿ ಯಲ್ಲಿ ಪುಂಡ-ಪೊಕರಿಗಳ ಹಾವಳಿ ಹೆಚ್ಚು. ಹೀಗಾಗಿ, ಆ ಮಾರ್ಗದಲ್ಲಿ ಓಡಾಡುವುದೇ ಇಲ್ಲ~ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರತ್ನ.<br /> <br /> ಕ್ವಾಟರ್ಸ್ನಲ್ಲಿ ಉಳಿದಿರುವವರು ಕೆಳ ಹಂತದ ನೌಕರರೇ. ಅಲ್ಲಿರುವ ಸೌಲಭ್ಯಗಳಲ್ಲೇ ದಿನದೂಡುತ್ತಿದ್ದಾರೆ. ಸೌಲಭ್ಯಕ್ಕಿಂತಲೂ ಸುರಕ್ಷತೆಯ ಬಗೆಗೆ ಅಲ್ಲಿನ ಬಹುತೇಕ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಾರೆ. <br /> <strong><br /> ಉಢಾಪೆ ಉತ್ತರ: </strong>ಮನೆಗಳ ಬಳಕೆ, ಸ್ವಚ್ಛತೆ ಕುರಿತ ಎನ್ನುವ ಪ್ರಶ್ನೆಗೆ, ಭಾನುವಾರ ಇನ್ಚಾರ್ಜ್ ನಲ್ಲಿದ್ದ ರೈಲ್ವೆ ಅಧಿಕಾರಿ ತೇಜಸ್ವಿ ಅವರದು ಉಢಾಪೆ, ಉದ್ಧಟತನ ಉತ್ತರ. `ನಾವ್ಯಾರೂ ಇಲ್ಲ ಅದಕ್ಕೆ ಬಳಕೆ ಆಗುತ್ತಿಲ್ಲ. ಇಲ್ಲೇ ಉಳಿದುಕೊಳ್ಳಬೇಕಂತೇನು? ನಮ್ಮಿಷ್ಟ. ಅಯ್ಯೋ ಹೇಗೋ ಇರುತ್ತದೆ ಬಿಡಿ. ಎಲ್ಲವನ್ನೂ ನೋಡೊಕಾಗುತ್ತಾ~. <br /> <br /> ಹೌದು, ಅಧಿಕಾರಿಗಳಿಗೆ ಪುರುಸೊತ್ತು ಇಲ್ಲ. ಇಲಾಖೆ ಸ್ವತ್ತನ್ನು ಜೋಪಾನ ಮಾಡಲು ಆಗುತ್ತಿಲ್ಲ. ಹೀಗಾಗಿಯೇ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ವಸತಿ ಗೃಹಗಳು ಈಗ ಪಾಳು ಬಿದ್ದಿವೆ. ಮನೆಗಳ ರಕ್ಷಣೆ ಹೊಣೆ ಯಾರದು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>