<p>ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ `ಸಿರಿಗೇರಿ~ ಗ್ರಾಮ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ, ರಾಜಕೀಯವಾಗಿ ತನ್ನದೇ ಆದ ಸ್ಥಾನ ಪಡೆದಿದೆ.<br /> <br /> ಗ್ರಾಮದ ಅಧಿದೇವತೆ `ಸಿರಿಗೇರಮ್ಮ~. ಈ ದೇವಿಯ ಆರಾಧನೆಯಿಂದಲೇ ಗ್ರಾಮಕ್ಕೆ `ಸಿರಿಗೇರಿ~ ಎಂಬ ಹೆಸರು ಬಂದಿರಬಹುದು ಎಂಬ ಪ್ರತೀತಿ.<br /> <br /> ಹಾಗೆಯೇ ಶ್ರಿ ನಾಗನಾಥೇಶ್ವರ ದೇವಾಲಯ ಕೂಡ ಇಲ್ಲಿದೆ. ಇದರಲ್ಲಿ ಪೂರ್ವಾಭಿಮುಖ ಈಶ್ವರನ ವಿಗ್ರಹವಿದೆ. ಗ್ರಾಮದಲ್ಲಿ ಶಂಭುಲಿಂಗ, ಬಸವಣ್ಣ, ಅಕ್ಕ-ತಂಗಿ, ಶ್ರಿ ವೀರಭದ್ರ ದೇವಾಲಯಗಳ ಜೊತೆ ದ್ಯಾವಮ್ಮ, ಮಾರಮ್ಮ, ಆಂಜನೇಯ ದೇವಾಲಯಗಳು ಇವೆ. <br /> <br /> ಇದೇ ತಿಂಗಳ 29ರ ಚೈತ್ರಶುದ್ಧ ಸಪ್ತಮಿ ದಿನದಂದು ಶ್ರಿ ನಾಗನಾಥೇಶ್ವರನ ಮತ್ತು ಮಾರ್ಚ್ 31 ರಂದು ಸಿರಿಗೇರಮ್ಮನ ಜಾತ್ರೆಗಳು ಅದ್ಧೂರಿಯಾಗಿ ನಡೆಯುತ್ತವೆ. <br /> <br /> ಸುತ್ತಲಿನ ಸಿದ್ದರಾಂಪುರ, ದಾಸಾಪುರ, ಕೊಂಚಿಗೇರಿ, ಮುದ್ದಟನೂರು, ಗುಂಡಿಗನೂರು, ಹಾವಿನಹಾಳು ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ಈ ಎರಡೂ ಜಾತ್ರೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಅಶೋಕನ ಶಿಲಾಶಾಸನಗಳಿರುವ ಉಡೇಗೋಳದಿಂದ ಇಲ್ಲಿಗೆ ಕೇವಲ 7 ಕಿಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ `ಸಿರಿಗೇರಿ~ ಗ್ರಾಮ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ, ರಾಜಕೀಯವಾಗಿ ತನ್ನದೇ ಆದ ಸ್ಥಾನ ಪಡೆದಿದೆ.<br /> <br /> ಗ್ರಾಮದ ಅಧಿದೇವತೆ `ಸಿರಿಗೇರಮ್ಮ~. ಈ ದೇವಿಯ ಆರಾಧನೆಯಿಂದಲೇ ಗ್ರಾಮಕ್ಕೆ `ಸಿರಿಗೇರಿ~ ಎಂಬ ಹೆಸರು ಬಂದಿರಬಹುದು ಎಂಬ ಪ್ರತೀತಿ.<br /> <br /> ಹಾಗೆಯೇ ಶ್ರಿ ನಾಗನಾಥೇಶ್ವರ ದೇವಾಲಯ ಕೂಡ ಇಲ್ಲಿದೆ. ಇದರಲ್ಲಿ ಪೂರ್ವಾಭಿಮುಖ ಈಶ್ವರನ ವಿಗ್ರಹವಿದೆ. ಗ್ರಾಮದಲ್ಲಿ ಶಂಭುಲಿಂಗ, ಬಸವಣ್ಣ, ಅಕ್ಕ-ತಂಗಿ, ಶ್ರಿ ವೀರಭದ್ರ ದೇವಾಲಯಗಳ ಜೊತೆ ದ್ಯಾವಮ್ಮ, ಮಾರಮ್ಮ, ಆಂಜನೇಯ ದೇವಾಲಯಗಳು ಇವೆ. <br /> <br /> ಇದೇ ತಿಂಗಳ 29ರ ಚೈತ್ರಶುದ್ಧ ಸಪ್ತಮಿ ದಿನದಂದು ಶ್ರಿ ನಾಗನಾಥೇಶ್ವರನ ಮತ್ತು ಮಾರ್ಚ್ 31 ರಂದು ಸಿರಿಗೇರಮ್ಮನ ಜಾತ್ರೆಗಳು ಅದ್ಧೂರಿಯಾಗಿ ನಡೆಯುತ್ತವೆ. <br /> <br /> ಸುತ್ತಲಿನ ಸಿದ್ದರಾಂಪುರ, ದಾಸಾಪುರ, ಕೊಂಚಿಗೇರಿ, ಮುದ್ದಟನೂರು, ಗುಂಡಿಗನೂರು, ಹಾವಿನಹಾಳು ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ಈ ಎರಡೂ ಜಾತ್ರೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಅಶೋಕನ ಶಿಲಾಶಾಸನಗಳಿರುವ ಉಡೇಗೋಳದಿಂದ ಇಲ್ಲಿಗೆ ಕೇವಲ 7 ಕಿಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>