<p><strong>ಬೆಂಗಳೂರು</strong>: ಫಾರ್ಮ್ಲ್ಯಾಂಡ್ ರೇನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಸಂಸ್ಥೆಯು ಬತ್ತಿ ಹೋಗಿರುವ ಕೊಳವೆಬಾವಿಗಳ ಪುನಃಶ್ಚೇತನಕ್ಕಾಗಿ ಸುಧಾರಿತ ತಂತ್ರಜ್ಞಾನ ಆಧಾರಿತ ಮಳೆ ನೀರು ಸಂಗ್ರಹಣೆ ಯೋಜನೆಯನ್ನು ಪರಿಚಯಿಸಿದೆ.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ‘ಸುಧಾರಿತ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನದ ಮೂಲಕ ಒಂದು ವರ್ಷದಲ್ಲಾಗುವ 70 ದಿನಗಳ ಮಳೆಯ ನೀರಿನಲ್ಲಿ ಕನಿಷ್ಠ 2.1 ದಶಲಕ್ಷ ಲೀಟರ್ನಿಂದ 4 ದಶಲಕ್ಷ ಲೀಟರ್ ನೀರನ್ನು ಅಂತರ್ಜಲಕ್ಕೆ ಸೇರಿಸಬಹುದು’ ಎಂದು ಹೇಳಿದರು.<br /> <br /> ‘ಇದರಿಂದ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ನೀರನ್ನು ಪುನಃಶ್ಚೇತನಗೊಳಿಸಬಹುದಾಗಿದ್ದು, ಬರಪೀಡಿತ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ’ ಎಂದರು.<br /> <br /> ‘ಮಳೆನೀರು ಶುದ್ಧೀಕರಿಸುವ ವ್ಯವಸ್ಥೆಯನ್ನೂ ಈ ಯೋಜನೆ ಹೊಂದಿದ್ದು ಕುಡಿಯಲು ಸಹ ಬಳಸಬಹುದಾಗಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗದ ಭಾಗಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ’ ಎಂದು ಹೇಳಿದರು.<br /> <br /> ‘ಕೆಲವರಿಗೆ ಈ ಮಳೆ ನೀರು ಸಂಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ ಎಂಬ ಕಾರಣದಿಂದಾಗಿ ಈ ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಅರ್ಧ ಸೈಟು ಪ್ರದೇಶಕ್ಕೆ ₨ 12ರಿಂದ 13 ಸಾವಿರ, 30x40 ಚದರಡಿಗೆ ₨ 18ರಿಂದ 20 ಸಾವಿರ ಹಾಗೂ 40x60ಚದರಡಿಗೆ ₨ 30ರಿಂದ 35 ಸಾವಿರ ಖರ್ಚಾಗಲಿದೆ. ಒಂದು ಬಾರಿ ಖರ್ಚು ಮಾಡಿದರೆ ಹಲವಾರು ವರ್ಷಗಳು ಬಳಸಬಹುದು’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಫಾರ್ಮ್ಲ್ಯಾಂಡ್ ರೇನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಸಂಸ್ಥೆಯು ಬತ್ತಿ ಹೋಗಿರುವ ಕೊಳವೆಬಾವಿಗಳ ಪುನಃಶ್ಚೇತನಕ್ಕಾಗಿ ಸುಧಾರಿತ ತಂತ್ರಜ್ಞಾನ ಆಧಾರಿತ ಮಳೆ ನೀರು ಸಂಗ್ರಹಣೆ ಯೋಜನೆಯನ್ನು ಪರಿಚಯಿಸಿದೆ.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ‘ಸುಧಾರಿತ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನದ ಮೂಲಕ ಒಂದು ವರ್ಷದಲ್ಲಾಗುವ 70 ದಿನಗಳ ಮಳೆಯ ನೀರಿನಲ್ಲಿ ಕನಿಷ್ಠ 2.1 ದಶಲಕ್ಷ ಲೀಟರ್ನಿಂದ 4 ದಶಲಕ್ಷ ಲೀಟರ್ ನೀರನ್ನು ಅಂತರ್ಜಲಕ್ಕೆ ಸೇರಿಸಬಹುದು’ ಎಂದು ಹೇಳಿದರು.<br /> <br /> ‘ಇದರಿಂದ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ನೀರನ್ನು ಪುನಃಶ್ಚೇತನಗೊಳಿಸಬಹುದಾಗಿದ್ದು, ಬರಪೀಡಿತ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ’ ಎಂದರು.<br /> <br /> ‘ಮಳೆನೀರು ಶುದ್ಧೀಕರಿಸುವ ವ್ಯವಸ್ಥೆಯನ್ನೂ ಈ ಯೋಜನೆ ಹೊಂದಿದ್ದು ಕುಡಿಯಲು ಸಹ ಬಳಸಬಹುದಾಗಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗದ ಭಾಗಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ’ ಎಂದು ಹೇಳಿದರು.<br /> <br /> ‘ಕೆಲವರಿಗೆ ಈ ಮಳೆ ನೀರು ಸಂಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ ಎಂಬ ಕಾರಣದಿಂದಾಗಿ ಈ ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಅರ್ಧ ಸೈಟು ಪ್ರದೇಶಕ್ಕೆ ₨ 12ರಿಂದ 13 ಸಾವಿರ, 30x40 ಚದರಡಿಗೆ ₨ 18ರಿಂದ 20 ಸಾವಿರ ಹಾಗೂ 40x60ಚದರಡಿಗೆ ₨ 30ರಿಂದ 35 ಸಾವಿರ ಖರ್ಚಾಗಲಿದೆ. ಒಂದು ಬಾರಿ ಖರ್ಚು ಮಾಡಿದರೆ ಹಲವಾರು ವರ್ಷಗಳು ಬಳಸಬಹುದು’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>