<p><strong>ಹುಬ್ಬಳ್ಳಿ:</strong> ಸುಪ್ರೀಂಕೋರ್ಟ್ನ ಅರಣ್ಯ ಪೀಠವು ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಪ್ರದೇಶಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಇದೇ 13ರಂದು ನೀಡಿದ `~ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ~ (ಎನ್ಸಿಪಿಎನ್ಆರ್) ಸ್ವಾಗತಿಸಿದ್ದು, ಅರಣ್ಯ ಪುನರುಜ್ಜೀವನ ಕಾರ್ಯ ಆಗುವವರೆಗೂ ಮತ್ತೆ ಗಣಿಗಾರಿಕೆಗೆ ಒಪ್ಪಿಗೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದೆ.<br /> <br /> ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ಸಿಪಿಎನ್ಆರ್ನ ಮುಖಂಡ ಹಾಗೂ ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಆರ್.ಹಿರೇಮಠ, ಸುಪ್ರೀಂಕೋರ್ಟ್ನ ಈ ಆದೇಶ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಹಾಗೂ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ತರುವಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು.<br /> <br /> ಬಳ್ಳಾರಿ ಜಿಲ್ಲೆಯ 126, ತುಮಕೂರಿನ 25 ಹಾಗೂ ಚಿತ್ರದುರ್ಗದ 26 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ, ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ಅರಣ್ಯ ಪೀಠವು ಈ ಆದೇಶವನ್ನು ನೀಡಿದೆ. ವಿಚಾರಣೆ ಸಮಯದಲ್ಲಿ ಗಣಿ ಧಣಿಗಳ ಪರ ವಕೀಲರು ಗಣಿಗಾರಿಕೆ ಆರಂಭಿಸುವಂತೆ ಮಾಡಿದ ಮನವಿಯನ್ನು ಪೀಠವು ತಳ್ಳಿಹಾಕಿತು ಎಂದು ಹಿರೇಮಠ ತಿಳಿಸಿದರು. <br /> <br /> ವಿಚಾರಣೆಯ ಕೊನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಪರ ವಕೀಲ ಸೋಲಿ ಸೊರಾಬ್ಜಿ ಅವರು, ಯಡಿಯೂರಪ್ಪ ಮೇಲಿರುವ ಮೊಕದ್ದಮೆಯೊಂದನ್ನು ಹೈಕೋರ್ಟ್ ವಜಾಗೊಳಿಸಿರುವುದನ್ನು ಕೋರ್ಟ್ ಗಮನಕ್ಕೆ ತಂದು, ಗಣಿ ಕಂಪೆನಿಗಳಿಂದ ಯಡಿಯೂರಪ್ಪ ಅವರು ಕಪ್ಪ ಪಡೆದಿಲ್ಲ ಎಂದು ವಾದಿಸಿದರು. ಆದರೆ ಸುಪ್ರೀಂಕೋರ್ಟ್ ಆ ವಿಚಾರಣೆಯನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎನ್ನುವ ಮೂಲಕ ವಕೀಲರ ವಾದ ವಿಫಲವಾಯಿತು ಎಂದು ಅವರು ಹೇಳಿದರು. <br /> <br /> ರಮೇಶ್ಕುಮಾರ್ ಜಮೀನು ನೀಡಲಿ: ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಕ್ರಮವಾಗಿ 60 ಎಕರೆ ಅರಣ್ಯ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದ್ದು, ಸ್ವಯಂ ಪ್ರೇರಣೆಯಿಂದ ಅವರು ಜಮೀನನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧವು ಎನ್ಸಿಪಿಎನ್ಆರ್ ರಿಟ್ ಅರ್ಜಿ ಸಲ್ಲಿಸಲಿದೆ ಎಂದರು.</p>.<p><strong>`ಕೊಪರ್ನಿಕಸ್ ಹೇಳಿದ್ದೂ ಹಳೆಯದೇ~</strong><br /> `ಹಿರೇಮಠರು ಸಿಇಸಿಗೆ ತಮ್ಮ ವಿರುದ್ಧ ಹಳೆಯ ದಾಖಲೆಗಳನ್ನೇ ಸಲ್ಲಿಸಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರಲ್ಲ~ ಎಂಬ ಪ್ರಶ್ನೆಯೊಂದಕ್ಕೆ ಸ್ವಾರಸ್ಯಕರವಾಗಿ ಪ್ರತಿಕ್ರಿಯೆ ನೀಡಿದ ಎಸ್.ಆರ್.ಹಿರೇಮಠರು, `ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬುದು ಹಳೆಯ ಸತ್ಯವಾದರೂ, ಕೊಪರ್ನಿಕಸ್ ಅದನ್ನು ಸಿದ್ಧ ಮಾಡಿ ತೋರಿಸಿದರು. ನಾವು ಸಿಇಸಿಗೆ ಸಲ್ಲಿಸಿದ ದಾಖಲೆಗಳು ಹಳೆಯದೇ ಇರಬಹುದು. ಅವು ಸತ್ಯ ಸಂಗತಿಗಳೇ ಅಲ್ಲವೇ?~ ಎಂದು ಪ್ರಶ್ನಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸುಪ್ರೀಂಕೋರ್ಟ್ನ ಅರಣ್ಯ ಪೀಠವು ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಪ್ರದೇಶಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಇದೇ 13ರಂದು ನೀಡಿದ `~ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ~ (ಎನ್ಸಿಪಿಎನ್ಆರ್) ಸ್ವಾಗತಿಸಿದ್ದು, ಅರಣ್ಯ ಪುನರುಜ್ಜೀವನ ಕಾರ್ಯ ಆಗುವವರೆಗೂ ಮತ್ತೆ ಗಣಿಗಾರಿಕೆಗೆ ಒಪ್ಪಿಗೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದೆ.<br /> <br /> ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ಸಿಪಿಎನ್ಆರ್ನ ಮುಖಂಡ ಹಾಗೂ ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಆರ್.ಹಿರೇಮಠ, ಸುಪ್ರೀಂಕೋರ್ಟ್ನ ಈ ಆದೇಶ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಹಾಗೂ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ತರುವಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು.<br /> <br /> ಬಳ್ಳಾರಿ ಜಿಲ್ಲೆಯ 126, ತುಮಕೂರಿನ 25 ಹಾಗೂ ಚಿತ್ರದುರ್ಗದ 26 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ, ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ಅರಣ್ಯ ಪೀಠವು ಈ ಆದೇಶವನ್ನು ನೀಡಿದೆ. ವಿಚಾರಣೆ ಸಮಯದಲ್ಲಿ ಗಣಿ ಧಣಿಗಳ ಪರ ವಕೀಲರು ಗಣಿಗಾರಿಕೆ ಆರಂಭಿಸುವಂತೆ ಮಾಡಿದ ಮನವಿಯನ್ನು ಪೀಠವು ತಳ್ಳಿಹಾಕಿತು ಎಂದು ಹಿರೇಮಠ ತಿಳಿಸಿದರು. <br /> <br /> ವಿಚಾರಣೆಯ ಕೊನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಪರ ವಕೀಲ ಸೋಲಿ ಸೊರಾಬ್ಜಿ ಅವರು, ಯಡಿಯೂರಪ್ಪ ಮೇಲಿರುವ ಮೊಕದ್ದಮೆಯೊಂದನ್ನು ಹೈಕೋರ್ಟ್ ವಜಾಗೊಳಿಸಿರುವುದನ್ನು ಕೋರ್ಟ್ ಗಮನಕ್ಕೆ ತಂದು, ಗಣಿ ಕಂಪೆನಿಗಳಿಂದ ಯಡಿಯೂರಪ್ಪ ಅವರು ಕಪ್ಪ ಪಡೆದಿಲ್ಲ ಎಂದು ವಾದಿಸಿದರು. ಆದರೆ ಸುಪ್ರೀಂಕೋರ್ಟ್ ಆ ವಿಚಾರಣೆಯನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎನ್ನುವ ಮೂಲಕ ವಕೀಲರ ವಾದ ವಿಫಲವಾಯಿತು ಎಂದು ಅವರು ಹೇಳಿದರು. <br /> <br /> ರಮೇಶ್ಕುಮಾರ್ ಜಮೀನು ನೀಡಲಿ: ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಕ್ರಮವಾಗಿ 60 ಎಕರೆ ಅರಣ್ಯ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದ್ದು, ಸ್ವಯಂ ಪ್ರೇರಣೆಯಿಂದ ಅವರು ಜಮೀನನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧವು ಎನ್ಸಿಪಿಎನ್ಆರ್ ರಿಟ್ ಅರ್ಜಿ ಸಲ್ಲಿಸಲಿದೆ ಎಂದರು.</p>.<p><strong>`ಕೊಪರ್ನಿಕಸ್ ಹೇಳಿದ್ದೂ ಹಳೆಯದೇ~</strong><br /> `ಹಿರೇಮಠರು ಸಿಇಸಿಗೆ ತಮ್ಮ ವಿರುದ್ಧ ಹಳೆಯ ದಾಖಲೆಗಳನ್ನೇ ಸಲ್ಲಿಸಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರಲ್ಲ~ ಎಂಬ ಪ್ರಶ್ನೆಯೊಂದಕ್ಕೆ ಸ್ವಾರಸ್ಯಕರವಾಗಿ ಪ್ರತಿಕ್ರಿಯೆ ನೀಡಿದ ಎಸ್.ಆರ್.ಹಿರೇಮಠರು, `ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬುದು ಹಳೆಯ ಸತ್ಯವಾದರೂ, ಕೊಪರ್ನಿಕಸ್ ಅದನ್ನು ಸಿದ್ಧ ಮಾಡಿ ತೋರಿಸಿದರು. ನಾವು ಸಿಇಸಿಗೆ ಸಲ್ಲಿಸಿದ ದಾಖಲೆಗಳು ಹಳೆಯದೇ ಇರಬಹುದು. ಅವು ಸತ್ಯ ಸಂಗತಿಗಳೇ ಅಲ್ಲವೇ?~ ಎಂದು ಪ್ರಶ್ನಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>