<p>ಬೆಂಗಳೂರು: `ನರ್ಮ್ ಯೋಜನೆಯ ಸಹಯೋಗದೊಂದಿಗೆ ಮುಂದಿನ ವರ್ಷ ನೂರು ಕೊಳೆಗೇರಿ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.<br /> <br /> ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯಡಿ (ಜೆಎನ್ ನರ್ಮ್) ನಗರದ ಲಕ್ಷ್ಮಣರಾವ್ ನಗರ ಕೊಳೆಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ನಗರದಲ್ಲಿ ಕೊಳೆಗೇರಿಗಳು ನಿರ್ಮಾಣವಾಗದಂತೆ ಗಮನ ಹರಿಸಬೇಕು. ಅವರಿಗಾಗಿ ಉತ್ತಮ ಬಡಾವಣೆಗಳನ್ನು ನಿರ್ಮಿಸಬೇಕು. <br /> <br /> ರಾಜಕೀಯೇತರವಾಗಿ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದಾಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.<br /> <br /> `ಕೊಳೆಗೇರಿ ಪ್ರದೇಶಗಳಲ್ಲಿ ವಸತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಶೇ 50 ಭಾಗ ಮತ್ತು ರಾಜ್ಯ ಸರ್ಕಾರವು ಶೇ 40 ಭಾಗವನ್ನು ನೀಡುತ್ತದೆ. ಅದರಲ್ಲಿ ಫಲಾನುಭವಿಗಳು ಶೇ 10 ಭಾಗವನ್ನು ನೀಡಬೇಕು. <br /> <br /> ಆದರೆ, ಫಲಾನುಭವಿಗಳಿಗೆ ಹೊರೆಯಾಗುವುದಾದರೆ ಅದನ್ನು ಸರ್ಕಾರವೇ ಭರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು~ ಎಂದು ಶಾಸಕ ಎನ್.ಎ. ಹ್ಯಾರೀಸ್ ಅವರ ಮನವಿಗೆ ಹೇಳಿದರು.<br /> <strong><br /> ರೂ 19.30ಕೋಟಿ ವೆಚ್ಚ </strong><br /> ಲಕ್ಷ್ಮಣರಾವ್ನಗರ ಕೊಳಚೆ ಪ್ರದೇಶವು ಸುಮಾರು 30 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯ (ಜೆಎನ್ ನರ್ಮ್) ಹಂತ 1 ರ ಯೋಜನೆಯಡಿಯಲ್ಲಿ 920 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. <br /> <br /> ಕಾಮಗಾರಿಗೆ ಒಟ್ಟು 19.30 ಕೋಟಿ ರೂಪಾಯಿ ಅಂದಾಜು ವೆಚ್ಚವಾಗಿದ್ದು ಈಗ 630 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜೆಎನ್ ನರ್ಮ್ ಹಂತ 2 ಮತ್ತು 3 ರ ಯೋಜನೆಯಡಿಯಲ್ಲಿ ಇನ್ನುಳಿದ 673 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲು ರೂ 21.56 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು ಪ್ರಗತಿಯಲ್ಲಿದೆ.<br /> <br /> <strong>ಸಂತಸವಾಗುತ್ತಿದೆ</strong><br /> `ಕೊಳೆಗೇರಿಯಲ್ಲಿ ನಮಗಾಗಿ ಈ ತರಹದ ಅಚ್ಚುಕಟ್ಟಾದ ಮನೆ ದೊರೆಯುತ್ತದೆಂದು ಎಣಿಸಿರಲಿಲ್ಲ. ಈಗ ನಮಗೆ ನಮ್ಮದೇ ಆದ ಸುಂದರವಾದ ಮನೆ ದೊರೆತಿದೆ. ಸಂತಸವಾಗುತ್ತಿದೆ. ನಮ್ಮನ್ನು ಕೊಳೆಗೇರಿಯವರೆಂದು ಹೀನವಾಗಿ ನೋಡದೆ ನಮ್ಮನ್ನು ಕೂಡ ಮನುಷ್ಯರಂತೆ ಕಾಣಬೇಕು~<br /> -ಪಾರ್ವತಮ್ಮ, ಫಲಾನುಭವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ನರ್ಮ್ ಯೋಜನೆಯ ಸಹಯೋಗದೊಂದಿಗೆ ಮುಂದಿನ ವರ್ಷ ನೂರು ಕೊಳೆಗೇರಿ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.<br /> <br /> ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯಡಿ (ಜೆಎನ್ ನರ್ಮ್) ನಗರದ ಲಕ್ಷ್ಮಣರಾವ್ ನಗರ ಕೊಳೆಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ನಗರದಲ್ಲಿ ಕೊಳೆಗೇರಿಗಳು ನಿರ್ಮಾಣವಾಗದಂತೆ ಗಮನ ಹರಿಸಬೇಕು. ಅವರಿಗಾಗಿ ಉತ್ತಮ ಬಡಾವಣೆಗಳನ್ನು ನಿರ್ಮಿಸಬೇಕು. <br /> <br /> ರಾಜಕೀಯೇತರವಾಗಿ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದಾಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.<br /> <br /> `ಕೊಳೆಗೇರಿ ಪ್ರದೇಶಗಳಲ್ಲಿ ವಸತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಶೇ 50 ಭಾಗ ಮತ್ತು ರಾಜ್ಯ ಸರ್ಕಾರವು ಶೇ 40 ಭಾಗವನ್ನು ನೀಡುತ್ತದೆ. ಅದರಲ್ಲಿ ಫಲಾನುಭವಿಗಳು ಶೇ 10 ಭಾಗವನ್ನು ನೀಡಬೇಕು. <br /> <br /> ಆದರೆ, ಫಲಾನುಭವಿಗಳಿಗೆ ಹೊರೆಯಾಗುವುದಾದರೆ ಅದನ್ನು ಸರ್ಕಾರವೇ ಭರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು~ ಎಂದು ಶಾಸಕ ಎನ್.ಎ. ಹ್ಯಾರೀಸ್ ಅವರ ಮನವಿಗೆ ಹೇಳಿದರು.<br /> <strong><br /> ರೂ 19.30ಕೋಟಿ ವೆಚ್ಚ </strong><br /> ಲಕ್ಷ್ಮಣರಾವ್ನಗರ ಕೊಳಚೆ ಪ್ರದೇಶವು ಸುಮಾರು 30 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯ (ಜೆಎನ್ ನರ್ಮ್) ಹಂತ 1 ರ ಯೋಜನೆಯಡಿಯಲ್ಲಿ 920 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. <br /> <br /> ಕಾಮಗಾರಿಗೆ ಒಟ್ಟು 19.30 ಕೋಟಿ ರೂಪಾಯಿ ಅಂದಾಜು ವೆಚ್ಚವಾಗಿದ್ದು ಈಗ 630 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜೆಎನ್ ನರ್ಮ್ ಹಂತ 2 ಮತ್ತು 3 ರ ಯೋಜನೆಯಡಿಯಲ್ಲಿ ಇನ್ನುಳಿದ 673 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲು ರೂ 21.56 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು ಪ್ರಗತಿಯಲ್ಲಿದೆ.<br /> <br /> <strong>ಸಂತಸವಾಗುತ್ತಿದೆ</strong><br /> `ಕೊಳೆಗೇರಿಯಲ್ಲಿ ನಮಗಾಗಿ ಈ ತರಹದ ಅಚ್ಚುಕಟ್ಟಾದ ಮನೆ ದೊರೆಯುತ್ತದೆಂದು ಎಣಿಸಿರಲಿಲ್ಲ. ಈಗ ನಮಗೆ ನಮ್ಮದೇ ಆದ ಸುಂದರವಾದ ಮನೆ ದೊರೆತಿದೆ. ಸಂತಸವಾಗುತ್ತಿದೆ. ನಮ್ಮನ್ನು ಕೊಳೆಗೇರಿಯವರೆಂದು ಹೀನವಾಗಿ ನೋಡದೆ ನಮ್ಮನ್ನು ಕೂಡ ಮನುಷ್ಯರಂತೆ ಕಾಣಬೇಕು~<br /> -ಪಾರ್ವತಮ್ಮ, ಫಲಾನುಭವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>