<p>ಸಿದ್ದಾಪುರ: ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಾದ ಸೋಮೇಶ್ವರ ಅಭಯಾರಣ್ಯದ ಹಂಜ ಕಾಡಿನಲ್ಲಿ ಎರಡು ದಿನಗಳಿಂದ ಬೆಂಕಿ ಉರಿಯುತ್ತಿದ್ದು, ಭಾನುವಾರ ರಾತ್ರಿ ಸೋಮೇಶ್ವರ ಅಭಯಾರಣ್ಯದ ಅರಣ್ಯಾಧಿಕಾರಿ ಲೋಹಿತ್ ಕುಮಾರ್ ನೇತೃತ್ವದ ತಂಡ ಬೆಂಕಿ ನಂದಿಸಿದೆ.<br /> <br /> ಸ್ಥಳೀಯರ ಪ್ರಕಾರ ಶನಿವಾರವೇ ಅಭಯಾರಣ್ಯ ವ್ಯಾಪ್ತಿಯಲ್ಲಿ ಬೆಂಕಿ ತಗುಲಿದೆ. ಸೊಮೇಶ್ವರ ಅಭಯಾರಣ್ಯ, ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಉಳ್ತ ಅಭಯಾರಣ್ಯದ ಸುಮಾರು 15 ಎಕರೆ ಪ್ರದೇಶಅಗ್ನಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದಿದ್ದರೂ ವಿಳಂಬವಾಗಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ದೂರಿದ್ದಾರೆ.<br /> <br /> ಹಂಜಾ, ಕಾರೀಮನೆ, ಎಡಮಲೆ ಪರಿಸರಕ್ಕೆ ಬೆಂಕಿಯ ಕೆನ್ನಾಲಿಗೆ ರಾತ್ರಿ ವೇಳೆ ಸಂಪೂರ್ಣವಾಗಿ ಗೋಚರಿಸುತ್ತಿದ್ದು ಭಾನುವಾರ ಸಂಜೆ ವೇಳೆ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಂದಿಸಿದರು. ಮಧ್ಯರಾತ್ರಿಯ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.<br /> <br /> ಹಂಜದ ಸೋಮೇಶ್ವರ ಅಭಯಾರಣ್ಯ ಎತ್ತರ ತಗ್ಗುಗಳಿಂದ ಕೂಡಿದ್ದು ಬೆಂಕಿ ಬಹುಬೇಗ ಅರಣ್ಯ ವ್ಯಾಪ್ತಿಗೆ ಪಸರಿಸಿ ಅಪಾರ ಪ್ರಮಾಣದ ಅರಣ್ಯ , ಜೀವ ವೈವಿಧ್ಯ ನಾಶವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಪೂರ್ಣವಾಗಿ ಆರದೇ ಇರುವುದು, ಹಳೆ ಮರಗಳು ಬೆಂಕಿಗೆ ಬಲಿಯಾಗಿರುವುದರಿಂದ ಸೋಮವಾರವೂ ಅರಣ್ಯ ತಪ್ಪಲು ಪ್ರದೇಶದಲ್ಲಿ ಹೊಗೆ-ಕಮಟು ವಾಸನೆಯಿಂದ ಇತ್ತು.<br /> <br /> <strong>ಬೆಂಕಿ ಹತೋಟಿಯಲ್ಲಿದೆ: </strong>ಅಭಯಾರಣ್ಯ ವ್ಯಾಪ್ತಿಯ ಹಂಜಾ ಪ್ರದೇಶದ 1ಎಕರೆ ಪ್ರದೇಶದ ಕಾಡಿಗೆ ಬೆಂಕಿ ಹತ್ತಿಕೊಂಡಿತ್ತು. ತಳಮಟ್ಟದಲ್ಲಿ ಮಾತ್ರ ಬೆಂಕಿ ಹತ್ತಿಕೊಂಡಿದ್ದು ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರಿಸಲಾಗಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.<br /> <br /> ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಿಸಿ ಎಂಬ ನಾಮಫಲಕವನ್ನು ಇಲಾಖೆ ವತಿಯಿಂದ ಸಾಕಷ್ಟು ಮುಂಚಿತವಾಗಿ ಹಾಕಲಾಗಿದೆ ಎಂದು ಸೊಮೇಶ್ವರ ಅಭಯಾರಣ್ಯದ ವನ್ಯಜೀವಿ ವಿಭಾಗ ಅರಣ್ಯಾಧಿಕಾರಿ ಲೋಹಿತ್ ಕುಮಾರ ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದಾಪುರ: ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಾದ ಸೋಮೇಶ್ವರ ಅಭಯಾರಣ್ಯದ ಹಂಜ ಕಾಡಿನಲ್ಲಿ ಎರಡು ದಿನಗಳಿಂದ ಬೆಂಕಿ ಉರಿಯುತ್ತಿದ್ದು, ಭಾನುವಾರ ರಾತ್ರಿ ಸೋಮೇಶ್ವರ ಅಭಯಾರಣ್ಯದ ಅರಣ್ಯಾಧಿಕಾರಿ ಲೋಹಿತ್ ಕುಮಾರ್ ನೇತೃತ್ವದ ತಂಡ ಬೆಂಕಿ ನಂದಿಸಿದೆ.<br /> <br /> ಸ್ಥಳೀಯರ ಪ್ರಕಾರ ಶನಿವಾರವೇ ಅಭಯಾರಣ್ಯ ವ್ಯಾಪ್ತಿಯಲ್ಲಿ ಬೆಂಕಿ ತಗುಲಿದೆ. ಸೊಮೇಶ್ವರ ಅಭಯಾರಣ್ಯ, ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಉಳ್ತ ಅಭಯಾರಣ್ಯದ ಸುಮಾರು 15 ಎಕರೆ ಪ್ರದೇಶಅಗ್ನಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದಿದ್ದರೂ ವಿಳಂಬವಾಗಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ದೂರಿದ್ದಾರೆ.<br /> <br /> ಹಂಜಾ, ಕಾರೀಮನೆ, ಎಡಮಲೆ ಪರಿಸರಕ್ಕೆ ಬೆಂಕಿಯ ಕೆನ್ನಾಲಿಗೆ ರಾತ್ರಿ ವೇಳೆ ಸಂಪೂರ್ಣವಾಗಿ ಗೋಚರಿಸುತ್ತಿದ್ದು ಭಾನುವಾರ ಸಂಜೆ ವೇಳೆ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಂದಿಸಿದರು. ಮಧ್ಯರಾತ್ರಿಯ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.<br /> <br /> ಹಂಜದ ಸೋಮೇಶ್ವರ ಅಭಯಾರಣ್ಯ ಎತ್ತರ ತಗ್ಗುಗಳಿಂದ ಕೂಡಿದ್ದು ಬೆಂಕಿ ಬಹುಬೇಗ ಅರಣ್ಯ ವ್ಯಾಪ್ತಿಗೆ ಪಸರಿಸಿ ಅಪಾರ ಪ್ರಮಾಣದ ಅರಣ್ಯ , ಜೀವ ವೈವಿಧ್ಯ ನಾಶವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಪೂರ್ಣವಾಗಿ ಆರದೇ ಇರುವುದು, ಹಳೆ ಮರಗಳು ಬೆಂಕಿಗೆ ಬಲಿಯಾಗಿರುವುದರಿಂದ ಸೋಮವಾರವೂ ಅರಣ್ಯ ತಪ್ಪಲು ಪ್ರದೇಶದಲ್ಲಿ ಹೊಗೆ-ಕಮಟು ವಾಸನೆಯಿಂದ ಇತ್ತು.<br /> <br /> <strong>ಬೆಂಕಿ ಹತೋಟಿಯಲ್ಲಿದೆ: </strong>ಅಭಯಾರಣ್ಯ ವ್ಯಾಪ್ತಿಯ ಹಂಜಾ ಪ್ರದೇಶದ 1ಎಕರೆ ಪ್ರದೇಶದ ಕಾಡಿಗೆ ಬೆಂಕಿ ಹತ್ತಿಕೊಂಡಿತ್ತು. ತಳಮಟ್ಟದಲ್ಲಿ ಮಾತ್ರ ಬೆಂಕಿ ಹತ್ತಿಕೊಂಡಿದ್ದು ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರಿಸಲಾಗಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.<br /> <br /> ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಿಸಿ ಎಂಬ ನಾಮಫಲಕವನ್ನು ಇಲಾಖೆ ವತಿಯಿಂದ ಸಾಕಷ್ಟು ಮುಂಚಿತವಾಗಿ ಹಾಕಲಾಗಿದೆ ಎಂದು ಸೊಮೇಶ್ವರ ಅಭಯಾರಣ್ಯದ ವನ್ಯಜೀವಿ ವಿಭಾಗ ಅರಣ್ಯಾಧಿಕಾರಿ ಲೋಹಿತ್ ಕುಮಾರ ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>