<p><strong>ರಿಯಾದ್ (ಐಎಎನ್ಎಸ್): </strong>ಮುಸಲ್ಮಾನರ ಪವಿತ್ರ ಧಾರ್ಮಿಕ ಯಾತ್ರಾ ಕೇಂದ್ರವಾದ ಮೆಕ್ಕಾದ ಪ್ರಮುಖ ಮಸೀದಿಯಲ್ಲಿ ವಿಸ್ತರಣಾ ಕಾರ್ಯ ನಡೆಯುತ್ತಿರುವುದರಿಂದ, ವಿದೇಶಿ ಯಾತ್ರಿಕರು ಪ್ರಸ್ತುತ ವರ್ಷ ತಮ್ಮ ಹಜ್ ಯಾತ್ರೆಯನ್ನು ಮುಂದೂಡಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಮನವಿ ಮಾಡಿದೆ.<br /> <br /> ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಕುರಿತು ಮೆಕ್ಕಾದ ಪವಿತ್ರ ಕುರಾನ್ ಟಿ.ವಿ ಚಾನೆಲ್ನಲ್ಲಿ ಸರಣಿ ಘೋಷಣೆಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.<br /> <br /> ಯಾತ್ರಿಕರ ದಟ್ಟಣೆ ಮತ್ತು ಕಾಲ್ತುಳಿತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಸ್ತತ ವರ್ಷ ವಿದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 20ರಷ್ಟು ಹಾಗೂ ದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 50ರಷ್ಟು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಇಲ್ಲಿನ ಪ್ರಧಾನ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಅಲ್- ಅಶೇಕ್ ಸರ್ಕಾರದ ನಿರ್ಧಾರ ಕುರಿತು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಯಾದ್ (ಐಎಎನ್ಎಸ್): </strong>ಮುಸಲ್ಮಾನರ ಪವಿತ್ರ ಧಾರ್ಮಿಕ ಯಾತ್ರಾ ಕೇಂದ್ರವಾದ ಮೆಕ್ಕಾದ ಪ್ರಮುಖ ಮಸೀದಿಯಲ್ಲಿ ವಿಸ್ತರಣಾ ಕಾರ್ಯ ನಡೆಯುತ್ತಿರುವುದರಿಂದ, ವಿದೇಶಿ ಯಾತ್ರಿಕರು ಪ್ರಸ್ತುತ ವರ್ಷ ತಮ್ಮ ಹಜ್ ಯಾತ್ರೆಯನ್ನು ಮುಂದೂಡಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಮನವಿ ಮಾಡಿದೆ.<br /> <br /> ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಕುರಿತು ಮೆಕ್ಕಾದ ಪವಿತ್ರ ಕುರಾನ್ ಟಿ.ವಿ ಚಾನೆಲ್ನಲ್ಲಿ ಸರಣಿ ಘೋಷಣೆಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.<br /> <br /> ಯಾತ್ರಿಕರ ದಟ್ಟಣೆ ಮತ್ತು ಕಾಲ್ತುಳಿತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಸ್ತತ ವರ್ಷ ವಿದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 20ರಷ್ಟು ಹಾಗೂ ದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 50ರಷ್ಟು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಇಲ್ಲಿನ ಪ್ರಧಾನ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಅಲ್- ಅಶೇಕ್ ಸರ್ಕಾರದ ನಿರ್ಧಾರ ಕುರಿತು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>