<p><strong>ನೆಲಮಂಗಲ:</strong> ನೆಲಮಂಗಲದಿಂದ ಬೆಂಗಳೂರಿಗೆ ಮೇಲು ಸೇತುವೆ ಹೆದ್ದಾರಿಯಲ್ಲಿ (ಎಲಿವೇಟೆಡ್ ಹೈವೇ) ಕೆಲವೇ ನಿಮಿಷಗಳಲ್ಲಿ ಹೊರಗಿನವರು ಹೋಗಬಹುದಾಗಿದ್ದರೂ, ಸ್ಥಳೀಯರಿಗೆ ಮಾತ್ರ ಇದು ಶಾಪವಾಗಿದೆ. ಮೇಲು ಹೆದ್ದಾರಿ ನಿರ್ಮಾಣಕ್ಕೆ ಭೂಮಿಯನ್ನು, ಮನೆ- ಮಠ ಕಳೆದುಕೊಂಡವರು ಸ್ಥಳೀಯರು. ಆದರೆ ಇದರ ಫಲ ಮಾತ್ರ ಅವರಿಗೆ ಇಲ್ಲವಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಈ ಮೇಲು ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಕೆಳಗೆ ಸರ್ವೀಸ್ ರಸ್ತೆಯಲ್ಲಿ ಕಾದು ನಿಂತ ಸ್ಥಳೀಯರಿಗೆ ಬಸ್ಗಳು ‘ಮರೀಚಿಕೆ’ಯಾಗಿವೆ. ಈ ಕಾರಣದಿಂದ ಪ್ರಯಾಣಿಕ ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನು ಅವಲಂಬಿಸಬೇಕಿದೆ.<br /> <br /> ಈ ಮೇಲು ಹೆದ್ದಾರಿ ನಿರ್ಮಾಣಕ್ಕೆ ಪೂರ್ವದಲ್ಲಿ ಬೆಂಗಳೂರಿನಿಂದ ಕುಣಿಗಲ್, ತುಮಕೂರು ಕಡೆಗೆ ಹೋಗುತ್ತಿದ್ದ ಮತ್ತು ಆ ಕಡೆಯಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ನೆಲಮಂಗಲದಲ್ಲಿ ಕಡ್ಡಾಯವಾಗಿ ನಿಲುಗಡೆ ನೀಡುತ್ತಿದ್ದವು. <br /> <br /> ಇದಕ್ಕಾಗಿ ಇಲ್ಲಿ ಎಂಟ್ರಿ ಪಾಯಿಂಟನ್ನು ಪ್ರಾರಂಭಿಸಿ ಮೂರು ಪಾಳಿಯಲ್ಲೂ ಸಿಬ್ಬಂದಿಯನ್ನು ನಿಯೋಜಿಸಿ ಬಸ್ಸುಗಳ ನಿಲುಗಡೆ ಬಗ್ಗೆ ನಿಗಾ ಇರಿಸಲಾಗಿತ್ತು. ಹಲವು ಮುಷ್ಕರ ಹೋರಾಟಗಳ ಫಲವಾಗಿ ಈ ಸೌಲಭ್ಯ ಪಡೆಯಲಾಗಿತ್ತು. ಅದರೆ ಈ ಮೇಲು ಹೆದ್ದಾರಿ ನಿರ್ಮಾಣವಾದ ಮೇಲೆ ಸರ್ಕಾರಿ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.<br /> <br /> ‘ಈ ಸಮಸ್ಯೆಗೆ ಅಧಿಕಾರಿಗಳು ಈಗಾಗಲೇ ಪರಿಹಾರ ಸೂಚಿಸಬೇಕಿತ್ತು. ಎಲ್ಲದಕ್ಕೂ ಸಾರ್ವಜನಿಕರು ಪ್ರತಿಭಟನೆ ನಡೆಸಿಯೇ ಪರಿಹಾರ ಕಂಡುಕೊಳ್ಳಬೇಕೇ?’ ಎಂದು ಬ್ಯಾಂಕ್ ಮ್ಯಾನೇಜರ್ ಆಗಿರುವ ನೆಲಮಂಗಲ ನಿವಾಸಿ ಅರುಣ್ಕುಮಾರ್ ಪ್ರಶ್ನಿಸುತ್ತಾರೆ. <br /> <br /> ತುಮಕೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳು ತುಮಕೂರಿನತ್ತ ಮುಖ ಮಾಡಿದ್ದಾರೆ. ಸಾವಿರಾರು ನೌಕರರು, ಸಾರ್ವಜನಿಕರು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. <br /> <br /> ‘ಮಾಸಿಕ/ ವಿದ್ಯಾರ್ಥಿ ಪಾಸು ಹೊಂದಿರುವವರನ್ನು ಕಂಡರೆ ಸರ್ಕಾರಿ ಬಸ್ನ ಚಾಲಕ, ನಿರ್ವಾಹಕರಿಗೆ ತಾತ್ಸಾರ.ಪಾಸು ಪಡೆದ ಎಷ್ಟೋ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ಹಣ ಕೊಟ್ಟು ಸಂಚರಿಸಬೇಕಾಗಿದೆ ಮತ್ತು ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ’ ಎಂದು ತುಮಕೂರಿನ ವಿದ್ಯಾವಾಹಿನಿ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಮಂಜುನಾಥ್’ ನೊಂದು ನುಡಿಯುತ್ತಾರೆ. <br /> <br /> ‘ದೂರದ ಊರುಗಳಿಂದ ಬೆಂಗಳೂರಿಗೆ ಬಂದು- ಹೋಗುವವರಿಗೆ ನೆಲಮಂಗಲ ‘ಸೇತುವೆ’ಯಾಗಿದೆ. ಆದರೆ ಇಲ್ಲಿನ ಜನತೆಗೆ ಈ ಮೇಲು ಸೇತುವೆ ‘ದೀಪದ ಕೆಳಗೆ ಕತ್ತಲು’ ಎಂಬಂತೆ ಆಗಿದೆ’ ಎಂದು ತುಮಕೂರಿನ ಸಿದ್ದಗಂಗಾ ಕಾಲೇಜಿನ ಉಪನ್ಯಾಸಕರಾದ ನೆಲಮಂಗಲ ನಿವಾಸಿ ಚಂದ್ರಶೇಖರ್ ವಿಷಾದಿಸುತ್ತಾರೆ.<br /> <br /> ವೃದ್ಧರು, ಮಹಿಳೆಯರು, ಮಕ್ಕಳು ಮೇಲು ಸೇತುವೆಯ ತಡೆಗೋಡೆಯನ್ನು ದಾಟುವುದು ಕಷ್ಟಕರ. ನಿಗದಿತ ತಂಗುದಾಣ ನಿರ್ಮಿಸಿ ತಡೆಗೋಡೆಯನ್ನು ದಾಟಲು ವ್ಯವಸ್ಥೆ ಕಲ್ಪಿಸಬೇಕು, ಮೊದಲಿನಂತೆ ಎಂಟ್ರಿ ಪಾಯಿಂಟ್ ಪ್ರಾರಂಭಿಸುವುದರಿಂದ ಮಾತ್ರ ಇದು ಸಾಧ್ಯ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ನೆಲಮಂಗಲದಿಂದ ಬೆಂಗಳೂರಿಗೆ ಮೇಲು ಸೇತುವೆ ಹೆದ್ದಾರಿಯಲ್ಲಿ (ಎಲಿವೇಟೆಡ್ ಹೈವೇ) ಕೆಲವೇ ನಿಮಿಷಗಳಲ್ಲಿ ಹೊರಗಿನವರು ಹೋಗಬಹುದಾಗಿದ್ದರೂ, ಸ್ಥಳೀಯರಿಗೆ ಮಾತ್ರ ಇದು ಶಾಪವಾಗಿದೆ. ಮೇಲು ಹೆದ್ದಾರಿ ನಿರ್ಮಾಣಕ್ಕೆ ಭೂಮಿಯನ್ನು, ಮನೆ- ಮಠ ಕಳೆದುಕೊಂಡವರು ಸ್ಥಳೀಯರು. ಆದರೆ ಇದರ ಫಲ ಮಾತ್ರ ಅವರಿಗೆ ಇಲ್ಲವಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಈ ಮೇಲು ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಕೆಳಗೆ ಸರ್ವೀಸ್ ರಸ್ತೆಯಲ್ಲಿ ಕಾದು ನಿಂತ ಸ್ಥಳೀಯರಿಗೆ ಬಸ್ಗಳು ‘ಮರೀಚಿಕೆ’ಯಾಗಿವೆ. ಈ ಕಾರಣದಿಂದ ಪ್ರಯಾಣಿಕ ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನು ಅವಲಂಬಿಸಬೇಕಿದೆ.<br /> <br /> ಈ ಮೇಲು ಹೆದ್ದಾರಿ ನಿರ್ಮಾಣಕ್ಕೆ ಪೂರ್ವದಲ್ಲಿ ಬೆಂಗಳೂರಿನಿಂದ ಕುಣಿಗಲ್, ತುಮಕೂರು ಕಡೆಗೆ ಹೋಗುತ್ತಿದ್ದ ಮತ್ತು ಆ ಕಡೆಯಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ನೆಲಮಂಗಲದಲ್ಲಿ ಕಡ್ಡಾಯವಾಗಿ ನಿಲುಗಡೆ ನೀಡುತ್ತಿದ್ದವು. <br /> <br /> ಇದಕ್ಕಾಗಿ ಇಲ್ಲಿ ಎಂಟ್ರಿ ಪಾಯಿಂಟನ್ನು ಪ್ರಾರಂಭಿಸಿ ಮೂರು ಪಾಳಿಯಲ್ಲೂ ಸಿಬ್ಬಂದಿಯನ್ನು ನಿಯೋಜಿಸಿ ಬಸ್ಸುಗಳ ನಿಲುಗಡೆ ಬಗ್ಗೆ ನಿಗಾ ಇರಿಸಲಾಗಿತ್ತು. ಹಲವು ಮುಷ್ಕರ ಹೋರಾಟಗಳ ಫಲವಾಗಿ ಈ ಸೌಲಭ್ಯ ಪಡೆಯಲಾಗಿತ್ತು. ಅದರೆ ಈ ಮೇಲು ಹೆದ್ದಾರಿ ನಿರ್ಮಾಣವಾದ ಮೇಲೆ ಸರ್ಕಾರಿ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.<br /> <br /> ‘ಈ ಸಮಸ್ಯೆಗೆ ಅಧಿಕಾರಿಗಳು ಈಗಾಗಲೇ ಪರಿಹಾರ ಸೂಚಿಸಬೇಕಿತ್ತು. ಎಲ್ಲದಕ್ಕೂ ಸಾರ್ವಜನಿಕರು ಪ್ರತಿಭಟನೆ ನಡೆಸಿಯೇ ಪರಿಹಾರ ಕಂಡುಕೊಳ್ಳಬೇಕೇ?’ ಎಂದು ಬ್ಯಾಂಕ್ ಮ್ಯಾನೇಜರ್ ಆಗಿರುವ ನೆಲಮಂಗಲ ನಿವಾಸಿ ಅರುಣ್ಕುಮಾರ್ ಪ್ರಶ್ನಿಸುತ್ತಾರೆ. <br /> <br /> ತುಮಕೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳು ತುಮಕೂರಿನತ್ತ ಮುಖ ಮಾಡಿದ್ದಾರೆ. ಸಾವಿರಾರು ನೌಕರರು, ಸಾರ್ವಜನಿಕರು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. <br /> <br /> ‘ಮಾಸಿಕ/ ವಿದ್ಯಾರ್ಥಿ ಪಾಸು ಹೊಂದಿರುವವರನ್ನು ಕಂಡರೆ ಸರ್ಕಾರಿ ಬಸ್ನ ಚಾಲಕ, ನಿರ್ವಾಹಕರಿಗೆ ತಾತ್ಸಾರ.ಪಾಸು ಪಡೆದ ಎಷ್ಟೋ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ಹಣ ಕೊಟ್ಟು ಸಂಚರಿಸಬೇಕಾಗಿದೆ ಮತ್ತು ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ’ ಎಂದು ತುಮಕೂರಿನ ವಿದ್ಯಾವಾಹಿನಿ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಮಂಜುನಾಥ್’ ನೊಂದು ನುಡಿಯುತ್ತಾರೆ. <br /> <br /> ‘ದೂರದ ಊರುಗಳಿಂದ ಬೆಂಗಳೂರಿಗೆ ಬಂದು- ಹೋಗುವವರಿಗೆ ನೆಲಮಂಗಲ ‘ಸೇತುವೆ’ಯಾಗಿದೆ. ಆದರೆ ಇಲ್ಲಿನ ಜನತೆಗೆ ಈ ಮೇಲು ಸೇತುವೆ ‘ದೀಪದ ಕೆಳಗೆ ಕತ್ತಲು’ ಎಂಬಂತೆ ಆಗಿದೆ’ ಎಂದು ತುಮಕೂರಿನ ಸಿದ್ದಗಂಗಾ ಕಾಲೇಜಿನ ಉಪನ್ಯಾಸಕರಾದ ನೆಲಮಂಗಲ ನಿವಾಸಿ ಚಂದ್ರಶೇಖರ್ ವಿಷಾದಿಸುತ್ತಾರೆ.<br /> <br /> ವೃದ್ಧರು, ಮಹಿಳೆಯರು, ಮಕ್ಕಳು ಮೇಲು ಸೇತುವೆಯ ತಡೆಗೋಡೆಯನ್ನು ದಾಟುವುದು ಕಷ್ಟಕರ. ನಿಗದಿತ ತಂಗುದಾಣ ನಿರ್ಮಿಸಿ ತಡೆಗೋಡೆಯನ್ನು ದಾಟಲು ವ್ಯವಸ್ಥೆ ಕಲ್ಪಿಸಬೇಕು, ಮೊದಲಿನಂತೆ ಎಂಟ್ರಿ ಪಾಯಿಂಟ್ ಪ್ರಾರಂಭಿಸುವುದರಿಂದ ಮಾತ್ರ ಇದು ಸಾಧ್ಯ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>