<p>ಐತಿಹಾಸಿಕ ಸ್ಮಾರಕಗಳನ್ನು ಜೋಪಾನ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ, ಸ್ಮಾರಕಗಳ ಸುತ್ತಲಿನ ಪ್ರದೇಶದ ಒತ್ತುವರಿಯನ್ನು ತಡೆಯಲೂ ಆಸಕ್ತಿ ಇಲ್ಲ; ಸ್ಮಾರಕಗಳ ಸಂರಕ್ಷಣೆಗೆ ಸಂಘಟಿತ ಕಾರ್ಯತಂತ್ರ ಬಳಸುತ್ತಿಲ್ಲ, ಅನುದಾನ ಹಂಚಿಕೆಯೂ ಸಮರ್ಪಕವಾಗಿಲ್ಲ ಇತ್ಯಾದಿ ಹಲವು ಲೋಪಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ಇತ್ತೀಚಿನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. <br /> <br /> ಸರ್ಕಾರದ ನಿರ್ಲಕ್ಷ್ಯ ಧೋರಣೆ ಆಘಾತಕಾರಿ. ಬಿಜೆಪಿ ಮುಖಂಡರು ದೇಶದ ಸಾಂಸ್ಕೃತಿಕ ವಾರಸುದಾರಿಕೆಯನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ. ಅದೇ ಪಕ್ಷದ ಸರ್ಕಾರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ ರಕ್ಷಣೆಯ ಕರ್ತವ್ಯವನ್ನೇ ಮರೆತಿದೆ. <br /> <br /> ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿರುವ ಸರ್ಕಾರಕ್ಕೆ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಗಮನವಿಲ್ಲ. ಹಿಂದಿನ ಯಾವ ಸರ್ಕಾರಗಳೂ ಈ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಾಗಿ ವರ್ತಿಸಿರಲಿಲ್ಲ. ಸ್ಮಾರಕಗಳ ಸುತ್ತಲಿನ ಜಾಗವನ್ನು ಒತ್ತುವರಿ ಆಗದಂತೆ ತಡೆಯುವ ವಿಷಯದ್ಲ್ಲಲಿ ಸರ್ಕಾರ ತಾಳಿರುವ ನಿರ್ಲಕ್ಷ್ಯದ ಧೋರಣೆ ಅಕ್ಷಮ್ಯ. <br /> <br /> ಅತ್ಯಧಿಕ ಸಂರಕ್ಷಿತ ಸ್ಮಾರಕಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ 518 ಸ್ಮಾರಕಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ. <br /> <br /> ಉಳಿದ 763 ಸ್ಮಾರಕಗಳು ರಾಜ್ಯ ಪ್ರಾಚ್ಯ ವಸ್ತು ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ. ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಒಬ್ಬ ಸಚಿವರಿದ್ದಾರೆ, ನಿರ್ದೇಶನಾಲಯವೂ ಇದೆ. ಜಿಲ್ಲಾ ಮಟ್ಟದಲ್ಲಿ ಕಚೇರಿಗಳಿವೆ. ಸ್ಮಾರಕಗಳ ಒತ್ತುವರಿಯನ್ನು ತಡೆಯುವುದು ಜಿಲ್ಲಾಡಳಿತಗಳ ಕರ್ತವ್ಯ. <br /> <br /> ಸಂಬಂಧಿಸಿದ ಇಲಾಖೆಗಳು ಒತ್ತುವರಿ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಅದನ್ನು ತಡೆಗಟ್ಟಬೇಕು. ಆದರೆ, ಸೊರಬ, ಶಿಕಾರಿಪುರ, ಸಂಡೂರು, ಗಂಗಾವತಿ ತಾಲ್ಲೂಕುಗಳಲ್ಲಿ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗದ ಅತಿಕ್ರಮಣ ಆಗಿದೆ. ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲೂ ಒತ್ತುವರಿ ಆಗಿದೆ. <br /> <br /> ಮೈಸೂರು ಅರಮನೆಯ ಭದ್ರತಾ ಕೋಣೆಯಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ ಮತ್ತಿತರ ಲೋಹ ಪರಿಕರಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸ ನಡೆಯುತ್ತಿಲ್ಲ. ಈ ವಸ್ತುಗಳ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರ 2008ರಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಕೆಲಸವನ್ನೇ ಆರಂಭಿಸಿಲ್ಲ. <br /> <br /> ಸರ್ಕಾರ ತಕ್ಷಣವೇ ಸ್ಮಾರಕಗಳ ಒತ್ತುವರಿಯ ತೆರವಿಗೆ ಗಮನ ಕೊಡಬೇಕು. ಒತ್ತುವರಿಗೆ ಜಿಲ್ಲಾ ಆಡಳಿತಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು. ಸ್ಮಾರಕಗಳು ನಾಶವಾದರೆ ರಾಜ್ಯದ ಸಾಂಸ್ಕೃತಿಕ ಪರಂಪರೆಯೂ ನಾಶವಾಗುತ್ತದೆ ಎಂಬ ಎಚ್ಚರ ಸರ್ಕಾರಕ್ಕೆ ಇರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಐತಿಹಾಸಿಕ ಸ್ಮಾರಕಗಳನ್ನು ಜೋಪಾನ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ, ಸ್ಮಾರಕಗಳ ಸುತ್ತಲಿನ ಪ್ರದೇಶದ ಒತ್ತುವರಿಯನ್ನು ತಡೆಯಲೂ ಆಸಕ್ತಿ ಇಲ್ಲ; ಸ್ಮಾರಕಗಳ ಸಂರಕ್ಷಣೆಗೆ ಸಂಘಟಿತ ಕಾರ್ಯತಂತ್ರ ಬಳಸುತ್ತಿಲ್ಲ, ಅನುದಾನ ಹಂಚಿಕೆಯೂ ಸಮರ್ಪಕವಾಗಿಲ್ಲ ಇತ್ಯಾದಿ ಹಲವು ಲೋಪಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ಇತ್ತೀಚಿನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. <br /> <br /> ಸರ್ಕಾರದ ನಿರ್ಲಕ್ಷ್ಯ ಧೋರಣೆ ಆಘಾತಕಾರಿ. ಬಿಜೆಪಿ ಮುಖಂಡರು ದೇಶದ ಸಾಂಸ್ಕೃತಿಕ ವಾರಸುದಾರಿಕೆಯನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ. ಅದೇ ಪಕ್ಷದ ಸರ್ಕಾರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ ರಕ್ಷಣೆಯ ಕರ್ತವ್ಯವನ್ನೇ ಮರೆತಿದೆ. <br /> <br /> ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿರುವ ಸರ್ಕಾರಕ್ಕೆ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಗಮನವಿಲ್ಲ. ಹಿಂದಿನ ಯಾವ ಸರ್ಕಾರಗಳೂ ಈ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಾಗಿ ವರ್ತಿಸಿರಲಿಲ್ಲ. ಸ್ಮಾರಕಗಳ ಸುತ್ತಲಿನ ಜಾಗವನ್ನು ಒತ್ತುವರಿ ಆಗದಂತೆ ತಡೆಯುವ ವಿಷಯದ್ಲ್ಲಲಿ ಸರ್ಕಾರ ತಾಳಿರುವ ನಿರ್ಲಕ್ಷ್ಯದ ಧೋರಣೆ ಅಕ್ಷಮ್ಯ. <br /> <br /> ಅತ್ಯಧಿಕ ಸಂರಕ್ಷಿತ ಸ್ಮಾರಕಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ 518 ಸ್ಮಾರಕಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ. <br /> <br /> ಉಳಿದ 763 ಸ್ಮಾರಕಗಳು ರಾಜ್ಯ ಪ್ರಾಚ್ಯ ವಸ್ತು ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ. ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಒಬ್ಬ ಸಚಿವರಿದ್ದಾರೆ, ನಿರ್ದೇಶನಾಲಯವೂ ಇದೆ. ಜಿಲ್ಲಾ ಮಟ್ಟದಲ್ಲಿ ಕಚೇರಿಗಳಿವೆ. ಸ್ಮಾರಕಗಳ ಒತ್ತುವರಿಯನ್ನು ತಡೆಯುವುದು ಜಿಲ್ಲಾಡಳಿತಗಳ ಕರ್ತವ್ಯ. <br /> <br /> ಸಂಬಂಧಿಸಿದ ಇಲಾಖೆಗಳು ಒತ್ತುವರಿ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಅದನ್ನು ತಡೆಗಟ್ಟಬೇಕು. ಆದರೆ, ಸೊರಬ, ಶಿಕಾರಿಪುರ, ಸಂಡೂರು, ಗಂಗಾವತಿ ತಾಲ್ಲೂಕುಗಳಲ್ಲಿ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗದ ಅತಿಕ್ರಮಣ ಆಗಿದೆ. ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲೂ ಒತ್ತುವರಿ ಆಗಿದೆ. <br /> <br /> ಮೈಸೂರು ಅರಮನೆಯ ಭದ್ರತಾ ಕೋಣೆಯಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ ಮತ್ತಿತರ ಲೋಹ ಪರಿಕರಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸ ನಡೆಯುತ್ತಿಲ್ಲ. ಈ ವಸ್ತುಗಳ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರ 2008ರಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಕೆಲಸವನ್ನೇ ಆರಂಭಿಸಿಲ್ಲ. <br /> <br /> ಸರ್ಕಾರ ತಕ್ಷಣವೇ ಸ್ಮಾರಕಗಳ ಒತ್ತುವರಿಯ ತೆರವಿಗೆ ಗಮನ ಕೊಡಬೇಕು. ಒತ್ತುವರಿಗೆ ಜಿಲ್ಲಾ ಆಡಳಿತಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು. ಸ್ಮಾರಕಗಳು ನಾಶವಾದರೆ ರಾಜ್ಯದ ಸಾಂಸ್ಕೃತಿಕ ಪರಂಪರೆಯೂ ನಾಶವಾಗುತ್ತದೆ ಎಂಬ ಎಚ್ಚರ ಸರ್ಕಾರಕ್ಕೆ ಇರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>