<p>ಕೆಲವರಿಗೆ ತಮ್ಮ ವಾದಗಳನ್ನು ಜೀವಂತಗೊಳಿಸುತ್ತಲೆ ಸಾಮಾಜಿಕ ಪ್ರತಿಷ್ಠೆ ಗಳಿಸುವ ಹಪಹಪಿ. ಮತ್ತೆ ಕೆಲವರು ತಮ್ಮ ವಿ-ವಾದಗಳಿಂದ (ವಿಕೃತವಾದ) ರಾತ್ರೋರಾತ್ರಿ ಜನಪ್ರಿಯರಾಗುತ್ತಾರೆ. ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರು ಎರಡನೆಯ ಗುಂಪಿಗೆ ಸೇರಿದವರೆ ಎಂಬ ಅನುಮಾನ ಹುಟ್ಟುತ್ತಿದೆ. ಡಾ. ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿಗೆ ಅನರ್ಹರೆಂದು ಶ್ರೀಯುತರೆ ತೀರ್ಮಾನಿಸಿದಂತೆ ಇದೆ (ಪ್ರ.ವಾ. ಸೆ.20) <br /> <br /> ಅರ್ಹತೆಯ ವಿಷಯಕ್ಕೆ ಬಂದಾಗ, ಕಂಬಾರರಿಗಿಂತ ಹಿಂದಿನ ಈರ್ವರ ಅರ್ಹತೆಯೇ ಪ್ರಶ್ನಾರ್ಹ. ಜ್ಞಾನಪೀಠದೊಡನೆ, `ಸಿರಿಸಂಪಿಗೆ~ಯ ಕಥಾವಸ್ತುವನ್ನೂ ಹೈಜಾಕ್ ಮಾಡಿ ಪರೋಕ್ಷವಾಗಿ ಘ್ನಾನಪೀಠ ಪ್ರಶಸ್ತಿಯನ್ನು ಎದೆಗವಚಿಗೊಂಡ ಮಹಾಮಹಿಮರು ಈ ಈರ್ವರಲ್ಲಿ ಒಬ್ಬರು. ಕೃತಿಚೌರ್ಯದ ಆಪಾದನೆ ಮಾಡಿ ಕಂಬಾರರು ಶ್ರೀಯುತರನ್ನು ಕೋರ್ಟಿಗೆ ಎಳೆಯಲಿಲ್ಲ. ಅದೇ ಅವರ ದೊಡ್ಡತನ. ಇಷ್ಟಕ್ಕೂ ಪ್ರಶಸ್ತಿಯ ಮಾನದಂಡ ಯಾವುದು? ನಾನು ತಿಳಿದಂತೆ ಗುಣಾತ್ಮಕವಾಗಿಯೂ, ಗಾತ್ರಾತ್ಮಕವಾಗಿಯೂ ಕೃತಿ ರಚನೆ ಮಾಡುವುದಷ್ಟೆ ಅಲ್ಲ. `ಜಾನಪದಕ್ಕೆ ನವ್ಯದ ಮೆರುಗನ್ನೂ, ನವ್ಯಕ್ಕೆ ಜಾನಪದದ ಘಾಟನ್ನೂ ತಂದ ಒಂದು ವಿಶಿಷ್ಟ ಅಭೂತಪೂರ್ವ ಪ್ರಯೋಗವೂ ಪ್ರಶಸ್ತಿಗೆ ಮಾನದಂಡವಾಗಬಹುದು (ಮಾತ್ಸೆತುಂಗ). ನಾಟಕದಲ್ಲಿ ಗೇಯತೆಯ ಗುಣವನ್ನು ಜಾನಪದದ ನೆಲೆಗಟ್ಟಿನ ಮೇಲೆ ಮೆರೆಸಿದವರು ಕಂಬಾರರು (ಸಂಗ್ಯಾ ಬಾಳ್ಯಾ, ಜೋಕುಮಾರಸ್ವಾಮಿ, ಜೈಸಿದನಾಯ್ಕ).<br /> <br /> ನಾಡಿಗೆ ಶುಭ ಹಾರೈಸುವವರು, ನಮ್ಮಲ್ಲೊಬ್ಬರು ಪ್ರಶಸ್ತಿಗೆ ಭಾಜನರಾದಾಗ ಸಂಭ್ರಮಿಸಬೇಕು, ಅಪಸ್ವರವೆತ್ತಿ ಸ್ವಪ್ರತಿಷ್ಠೆ ಮೆರೆಸಬಾರದು. ಡಾ. ಎಸ್.ಎಲ್. ಭೈರಪ್ಪ ಅದ್ವಿತೀಯ ಕಾದಂಬರಿಕಾರರೆಂಬುದರಲ್ಲಿ ಎರಡು ಮಾತಿಲ್ಲ. ಲಾಬಿಗಳ ನಡುವೆಯೂ ಭೈರಪ್ಪನವರಿಗೆ ಪ್ರಶಸ್ತಿ ಸಿಗುವ ಸಂಕಲ್ಪ ದೈವಕ್ಕಿದ್ದರೆ, ತಡೆಯುವ ಕುನ್ನಿಗಳಿಗೆ ಕವಡೆಕಾಸಿನ ಕಿಮ್ಮತ್ತೂ ಇರಲಾರದು. ಆ ದಿನಗಳೂ ಬಂದಾವು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವರಿಗೆ ತಮ್ಮ ವಾದಗಳನ್ನು ಜೀವಂತಗೊಳಿಸುತ್ತಲೆ ಸಾಮಾಜಿಕ ಪ್ರತಿಷ್ಠೆ ಗಳಿಸುವ ಹಪಹಪಿ. ಮತ್ತೆ ಕೆಲವರು ತಮ್ಮ ವಿ-ವಾದಗಳಿಂದ (ವಿಕೃತವಾದ) ರಾತ್ರೋರಾತ್ರಿ ಜನಪ್ರಿಯರಾಗುತ್ತಾರೆ. ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರು ಎರಡನೆಯ ಗುಂಪಿಗೆ ಸೇರಿದವರೆ ಎಂಬ ಅನುಮಾನ ಹುಟ್ಟುತ್ತಿದೆ. ಡಾ. ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿಗೆ ಅನರ್ಹರೆಂದು ಶ್ರೀಯುತರೆ ತೀರ್ಮಾನಿಸಿದಂತೆ ಇದೆ (ಪ್ರ.ವಾ. ಸೆ.20) <br /> <br /> ಅರ್ಹತೆಯ ವಿಷಯಕ್ಕೆ ಬಂದಾಗ, ಕಂಬಾರರಿಗಿಂತ ಹಿಂದಿನ ಈರ್ವರ ಅರ್ಹತೆಯೇ ಪ್ರಶ್ನಾರ್ಹ. ಜ್ಞಾನಪೀಠದೊಡನೆ, `ಸಿರಿಸಂಪಿಗೆ~ಯ ಕಥಾವಸ್ತುವನ್ನೂ ಹೈಜಾಕ್ ಮಾಡಿ ಪರೋಕ್ಷವಾಗಿ ಘ್ನಾನಪೀಠ ಪ್ರಶಸ್ತಿಯನ್ನು ಎದೆಗವಚಿಗೊಂಡ ಮಹಾಮಹಿಮರು ಈ ಈರ್ವರಲ್ಲಿ ಒಬ್ಬರು. ಕೃತಿಚೌರ್ಯದ ಆಪಾದನೆ ಮಾಡಿ ಕಂಬಾರರು ಶ್ರೀಯುತರನ್ನು ಕೋರ್ಟಿಗೆ ಎಳೆಯಲಿಲ್ಲ. ಅದೇ ಅವರ ದೊಡ್ಡತನ. ಇಷ್ಟಕ್ಕೂ ಪ್ರಶಸ್ತಿಯ ಮಾನದಂಡ ಯಾವುದು? ನಾನು ತಿಳಿದಂತೆ ಗುಣಾತ್ಮಕವಾಗಿಯೂ, ಗಾತ್ರಾತ್ಮಕವಾಗಿಯೂ ಕೃತಿ ರಚನೆ ಮಾಡುವುದಷ್ಟೆ ಅಲ್ಲ. `ಜಾನಪದಕ್ಕೆ ನವ್ಯದ ಮೆರುಗನ್ನೂ, ನವ್ಯಕ್ಕೆ ಜಾನಪದದ ಘಾಟನ್ನೂ ತಂದ ಒಂದು ವಿಶಿಷ್ಟ ಅಭೂತಪೂರ್ವ ಪ್ರಯೋಗವೂ ಪ್ರಶಸ್ತಿಗೆ ಮಾನದಂಡವಾಗಬಹುದು (ಮಾತ್ಸೆತುಂಗ). ನಾಟಕದಲ್ಲಿ ಗೇಯತೆಯ ಗುಣವನ್ನು ಜಾನಪದದ ನೆಲೆಗಟ್ಟಿನ ಮೇಲೆ ಮೆರೆಸಿದವರು ಕಂಬಾರರು (ಸಂಗ್ಯಾ ಬಾಳ್ಯಾ, ಜೋಕುಮಾರಸ್ವಾಮಿ, ಜೈಸಿದನಾಯ್ಕ).<br /> <br /> ನಾಡಿಗೆ ಶುಭ ಹಾರೈಸುವವರು, ನಮ್ಮಲ್ಲೊಬ್ಬರು ಪ್ರಶಸ್ತಿಗೆ ಭಾಜನರಾದಾಗ ಸಂಭ್ರಮಿಸಬೇಕು, ಅಪಸ್ವರವೆತ್ತಿ ಸ್ವಪ್ರತಿಷ್ಠೆ ಮೆರೆಸಬಾರದು. ಡಾ. ಎಸ್.ಎಲ್. ಭೈರಪ್ಪ ಅದ್ವಿತೀಯ ಕಾದಂಬರಿಕಾರರೆಂಬುದರಲ್ಲಿ ಎರಡು ಮಾತಿಲ್ಲ. ಲಾಬಿಗಳ ನಡುವೆಯೂ ಭೈರಪ್ಪನವರಿಗೆ ಪ್ರಶಸ್ತಿ ಸಿಗುವ ಸಂಕಲ್ಪ ದೈವಕ್ಕಿದ್ದರೆ, ತಡೆಯುವ ಕುನ್ನಿಗಳಿಗೆ ಕವಡೆಕಾಸಿನ ಕಿಮ್ಮತ್ತೂ ಇರಲಾರದು. ಆ ದಿನಗಳೂ ಬಂದಾವು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>