<p>ಪ್ರಜಾವಾಣಿಯ `ಸಂಗತ'ದಲ್ಲಿ ಪ್ರಕಟವಾದ ಕಾ.ತ. ಚಿಕ್ಕಣ್ಣ ಅವರ ಪತ್ರ (ಜೂನ್ 18) ಓದಿದೆ. ಸರ್ಕಾರದ ಅಧೀನದಲ್ಲಿದ್ದು ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಸ್ವಾಯತ್ತತೆ ಇಲ್ಲದಿರುವುದರ ಬಗ್ಗೆ, ಇವು ಸರ್ಕಾರದ ಹಿಡಿತದಿಂದ ಮುಕ್ತವಾಗಬೇಕೆಂಬ ಸಲಹೆ ಬಗ್ಗೆ ನನ್ನ ಎರಡು ಮಾತು.<br /> <br /> ಚಿಕ್ಕಣ್ಣ ಅವರು ಹೇಳುವಂತೆ ವಿಧಾನಸೌಧದ ಸುತ್ತ `ಪ್ರದಕ್ಷಿಣೆ' ಹಾಕುವ ಜನ ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೂ ಇಂಥ ಸಂಸ್ಥೆಗಳಿಗೆ ಸ್ವಾಯತ್ತತೆ ಬರುವುದಿಲ್ಲ. ಮಂತ್ರಿಮಹೋದಯರ ಚೇಲಾಗಳೇ ಇಂಥ ಕಡೆ `ಜೀ ಹುಜೂರ್' ಅಂಥ ಕೂತಿರುತ್ತಾರೆ. ಅಂಥ ಕಡೆ ಆತ್ಮಸಾಕ್ಷಿ, ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ.<br /> <br /> ಮತ್ತೆ ಅವರು ಹೇಳುವ, `ಇವತ್ತಿನ ತುರ್ತು ಎಂದರೆ ಮೊದಲು ನಮ್ಮನ್ನು ನಾವು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳಬೇಕು' ಎಂಬ ಅವರ ಮತ್ತೊಂದು ಮಾತನ್ನು ಎಷ್ಟು ಜನ ಅನುಸರಿಸುತ್ತಾರೆ. ಯಾಕೆಂದರೆ ಸ್ವತಃ ಚಿಕ್ಕಣ್ಣ ಅವರೇ ಈ ಮಾತನ್ನು ಅನುಸರಿಸಲು ಆಗಿಲ್ಲ.<br /> <strong>-ಕೊಟ್ರಬಸಪ್ಪ, ಹೊಸಪೇಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿಯ `ಸಂಗತ'ದಲ್ಲಿ ಪ್ರಕಟವಾದ ಕಾ.ತ. ಚಿಕ್ಕಣ್ಣ ಅವರ ಪತ್ರ (ಜೂನ್ 18) ಓದಿದೆ. ಸರ್ಕಾರದ ಅಧೀನದಲ್ಲಿದ್ದು ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಸ್ವಾಯತ್ತತೆ ಇಲ್ಲದಿರುವುದರ ಬಗ್ಗೆ, ಇವು ಸರ್ಕಾರದ ಹಿಡಿತದಿಂದ ಮುಕ್ತವಾಗಬೇಕೆಂಬ ಸಲಹೆ ಬಗ್ಗೆ ನನ್ನ ಎರಡು ಮಾತು.<br /> <br /> ಚಿಕ್ಕಣ್ಣ ಅವರು ಹೇಳುವಂತೆ ವಿಧಾನಸೌಧದ ಸುತ್ತ `ಪ್ರದಕ್ಷಿಣೆ' ಹಾಕುವ ಜನ ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೂ ಇಂಥ ಸಂಸ್ಥೆಗಳಿಗೆ ಸ್ವಾಯತ್ತತೆ ಬರುವುದಿಲ್ಲ. ಮಂತ್ರಿಮಹೋದಯರ ಚೇಲಾಗಳೇ ಇಂಥ ಕಡೆ `ಜೀ ಹುಜೂರ್' ಅಂಥ ಕೂತಿರುತ್ತಾರೆ. ಅಂಥ ಕಡೆ ಆತ್ಮಸಾಕ್ಷಿ, ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ.<br /> <br /> ಮತ್ತೆ ಅವರು ಹೇಳುವ, `ಇವತ್ತಿನ ತುರ್ತು ಎಂದರೆ ಮೊದಲು ನಮ್ಮನ್ನು ನಾವು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳಬೇಕು' ಎಂಬ ಅವರ ಮತ್ತೊಂದು ಮಾತನ್ನು ಎಷ್ಟು ಜನ ಅನುಸರಿಸುತ್ತಾರೆ. ಯಾಕೆಂದರೆ ಸ್ವತಃ ಚಿಕ್ಕಣ್ಣ ಅವರೇ ಈ ಮಾತನ್ನು ಅನುಸರಿಸಲು ಆಗಿಲ್ಲ.<br /> <strong>-ಕೊಟ್ರಬಸಪ್ಪ, ಹೊಸಪೇಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>