<p><strong>ಕೊಟ್ಟೂರು:</strong> ಜನತೆಯ ಆರೋಗ್ಯ ಕಾಪಾಡುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೇ ದಿನ ದಿನೇ ರೋಗ ಹರಡುವ ಕೇಂದ್ರವಾಗತೊಡಗಿದೆ. ಕಾರಣವಿಷ್ಟೇ, ಇಲ್ಲಿನ ಆಸ್ಪತ್ರೆಗೆ ಕಾಲಿಡುತ್ತಿದ್ದಂತೆಯೇ ರೋಗಗಳನ್ನು ಹರಡುವ ಹಂದಿಗಳು ನಿಮ್ಮನ್ನು ಸ್ವಾಗತಿಸುತ್ತವೆ. <br /> <br /> ಹಾಗಂತ ಆಸ್ಪತ್ರೆ ಸಿಬ್ಬಂದಿ ಹಂದಿಗಳನ್ನೇನು ಸಾಕಿಲ್ಲ. ಜರ್ಮನ್ ದೇಶದ ಅನುದಾನದಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆ ಮಡಿಲಲ್ಲಿಟ್ಟುಕೊಂಡಿದೆ.ಸಿಬ್ಬಂದಿಯ ಕೊರತೆಯ ನಡುವೆಯೂ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಜನತೆಯ ಆರೋಗ್ಯವನ್ನು ಕಾಪಾಡುವಲ್ಲಿ ಟೊಂಕಕಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.<br /> <br /> ಆದರೆ ಅಲ್ಲಲ್ಲಿ ಆಸ್ಪತ್ರೆ ಕಾಂಪೌಂಡ್ ಬಿದ್ದು ಹೋಗಿರುವುದರಿಂದ ಹಂದಿಗಳು ಕುರಿಹಿಂಡಿನಂತೆ ಓಡಾಡುತ್ತವೆ. ಹಂದಿಗಳು ಇಲ್ಲಿನ ಸಿಬ್ಬಂದಿ ಮಕ್ಕಳ ಮೇಲೆ ಎರಗಿ ಕಚ್ಚಿದ ಪ್ರಸಂಗಗಳು ಇವೆ.ಆಸ್ಪತ್ರೆ ಸಿಬ್ಬಂದಿಯ ವಸತಿಗಳ ಗೃಹಗಳ ಎರಡು ಮನೆಯನ್ನು ಹಂದಿಗಳು ಸಂಪೂರ್ಣ ಬಾಡಿಗೆ! ತೆಗೆದುಕೊಂಡಿವೆ. <br /> <br /> ನೀವು ಯಾವ ಸಂದರ್ಭದಲ್ಲಿ ಅಲ್ಲಿಗೆ ಹೋದರೂ 25 ಹಂದಿಗಳು ತಮ್ಮ ಸಂಸಾರದೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.ಹಂದಿಗಳು ಮನೆ ಮಾಡಿಕೊಂಡಿರುವ ಅಕ್ಕಪಕ್ಕದಲ್ಲಿಯೇ ಆಸ್ಪತ್ರೆ ಸಿಬ್ಬಂದಿ ವಾಸವಾಗಿದ್ದಾರೆ. ಈ ಸ್ಥಳ ಯಾವುದೇ ಕೊಳಚೆ ಪ್ರದೇಶಕ್ಕಿಂತಲೂ ಕಮ್ಮಿಇಲ್ಲ.<br /> <br /> ನಮ್ಮ ಮಕ್ಕಳಿಗೆ ಹಂದಿಗಳು ಕಚ್ಚಿವೆ. ಡೆಂಗ್ಯೂ ಜ್ವರ ಬಂದಿವೆ. ನಮ್ಮ ಕಷ್ಟನಾ ಯಾರಿಗೆ ಹೇಳಬೇಕೊ ಆರ್ಥವಾಗುತ್ತಿಲ್ಲ ಎಂದು ಸಿಬ್ಬಂದಿ ತಮ್ಮ ಅಳನ್ನು ಪತ್ರಿಕೆಯೊಂದಿಗೆ ತೊಡಿಕೊಳ್ಳುತ್ತಾರೆ.<br /> ಹಂದಿಗಳ ಹಾವಳಿ ಉಪಟಳದಿಂದ ನಮ್ಮನ್ನು ನಮ್ಮ ಮಕ್ಕಳನ್ನು ಹಾಗೂ ಕ್ವಾರ್ಟರ್ಸ್ ರಕ್ಷಿಸಿ ಎಂದು ಪಟ್ಟಣ ಪಂಚಾಯಿತಿಯವರಿಗೆ ನಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವಿನಿಂದಲೇ ಹೇಳುತ್ತಾರೆ.<br /> <br /> ಕಾಂಪೌಂಡ್ ಬಿದ್ದು ಹಲವು ವರ್ಷಗಳೇ ಆಗಿವೆ. ಇದನ್ನು ನಿರ್ಮಿಸಿ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಚನ್ನಬಸವನಗೌಡ ಹಾಗೂ ಶಾಸಕ ನೇಮಿರಾಜ್ ನಾಯ್ಕ ಮತ್ತು ಡಿಎಚ್ಓ ಅವರಿಗೆ ಹಲವಾರು ಬಾರಿ ಪತ್ರ ಬರೆದಿದ್ದೇವೆ.<br /> <br /> ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ ಕುಮಾರ್.<br /> ಆಸ್ಪತ್ರೆಯ ವಾತಾವರಣವೇ ರೋಗ ಪೀಡಿತವಾಗಿದೆ. ಇದನ್ನು ಸರಿಪಡಿಸದ ಸರ್ಕಾರ ಜನತೆ ಆರೋಗ್ಯವನ್ನು ಎಷ್ಟರ ಮಟ್ಟಿಗೆ ರಕ್ಷಿಸಬಲ್ಲದು ಎಂದು ಖಾರವಾಗಿ ಹೇಳುತ್ತಾರೆ ಆಸ್ಪತ್ರೆಗೆ ದಾಖಲಾದ ಕೊಟ್ರೇಶ್.<br /> ಇಲ್ಲಿನ ಕಲುಷಿತ ವಾತಾವರಣ ಕುರಿತು ಮೇಲಾಧಿಕಾರಿಗಳಿಗೆ ಅನೇಕ ಬಾರಿ ಪತ್ರ ಬರೆದಿದ್ದೇವೆ.<br /> <br /> ಇನ್ನು ಎಚ್ಚೆತ್ತಕೊಂಡಿಲ್ಲ. ಇನ್ನು ಮುಷ್ಕರ ಮಾಡುವುದೊಂದೇ ಪರಿಹಾರ ಎಂದು ಸಮಾಜ ಸೇವಕ ಕಡ್ಲಿ ಕಲ್ಮಿನಿ ವೀರಪ್ಪ ಹೇಳುತ್ತಾರೆ.ಜಿಲ್ಲಾ ಪಂಚಾಯಿತಿ ತಕ್ಷಣವೇ ಆಸ್ಪತ್ರೆ ಕಾಂಪೌಂಡ್ ನಿರ್ಮಿಸಬೇಕಾಗಿದೆ. ಸ್ಥಳೀಯ ಪಟ್ಟಣ ಪಂಚಾಯ್ತಿ ಹಂದಿಗಳನ್ನು ಪಟ್ಟಣದಿಂದಲೇ ಹೊರಹಾಕಬೇಕು. ಇಲ್ಲವಾದರೆ ಇಡೀ ಪಟ್ಟಣವೇ ರೋಗ ಪೀಡಿತವಾಗುವುದರಲ್ಲಿ ಅನುಮಾನವಿಲ್ಲ.<br /> <br /> ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ. ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಇಲ್ಲಿನ ಆಸ್ಪತ್ರೆ ಬಗ್ಗೆ ಗಮನ ಹರಿಸದಿದ್ದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಸಂಶಯವಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು:</strong> ಜನತೆಯ ಆರೋಗ್ಯ ಕಾಪಾಡುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೇ ದಿನ ದಿನೇ ರೋಗ ಹರಡುವ ಕೇಂದ್ರವಾಗತೊಡಗಿದೆ. ಕಾರಣವಿಷ್ಟೇ, ಇಲ್ಲಿನ ಆಸ್ಪತ್ರೆಗೆ ಕಾಲಿಡುತ್ತಿದ್ದಂತೆಯೇ ರೋಗಗಳನ್ನು ಹರಡುವ ಹಂದಿಗಳು ನಿಮ್ಮನ್ನು ಸ್ವಾಗತಿಸುತ್ತವೆ. <br /> <br /> ಹಾಗಂತ ಆಸ್ಪತ್ರೆ ಸಿಬ್ಬಂದಿ ಹಂದಿಗಳನ್ನೇನು ಸಾಕಿಲ್ಲ. ಜರ್ಮನ್ ದೇಶದ ಅನುದಾನದಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆ ಮಡಿಲಲ್ಲಿಟ್ಟುಕೊಂಡಿದೆ.ಸಿಬ್ಬಂದಿಯ ಕೊರತೆಯ ನಡುವೆಯೂ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಜನತೆಯ ಆರೋಗ್ಯವನ್ನು ಕಾಪಾಡುವಲ್ಲಿ ಟೊಂಕಕಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.<br /> <br /> ಆದರೆ ಅಲ್ಲಲ್ಲಿ ಆಸ್ಪತ್ರೆ ಕಾಂಪೌಂಡ್ ಬಿದ್ದು ಹೋಗಿರುವುದರಿಂದ ಹಂದಿಗಳು ಕುರಿಹಿಂಡಿನಂತೆ ಓಡಾಡುತ್ತವೆ. ಹಂದಿಗಳು ಇಲ್ಲಿನ ಸಿಬ್ಬಂದಿ ಮಕ್ಕಳ ಮೇಲೆ ಎರಗಿ ಕಚ್ಚಿದ ಪ್ರಸಂಗಗಳು ಇವೆ.ಆಸ್ಪತ್ರೆ ಸಿಬ್ಬಂದಿಯ ವಸತಿಗಳ ಗೃಹಗಳ ಎರಡು ಮನೆಯನ್ನು ಹಂದಿಗಳು ಸಂಪೂರ್ಣ ಬಾಡಿಗೆ! ತೆಗೆದುಕೊಂಡಿವೆ. <br /> <br /> ನೀವು ಯಾವ ಸಂದರ್ಭದಲ್ಲಿ ಅಲ್ಲಿಗೆ ಹೋದರೂ 25 ಹಂದಿಗಳು ತಮ್ಮ ಸಂಸಾರದೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.ಹಂದಿಗಳು ಮನೆ ಮಾಡಿಕೊಂಡಿರುವ ಅಕ್ಕಪಕ್ಕದಲ್ಲಿಯೇ ಆಸ್ಪತ್ರೆ ಸಿಬ್ಬಂದಿ ವಾಸವಾಗಿದ್ದಾರೆ. ಈ ಸ್ಥಳ ಯಾವುದೇ ಕೊಳಚೆ ಪ್ರದೇಶಕ್ಕಿಂತಲೂ ಕಮ್ಮಿಇಲ್ಲ.<br /> <br /> ನಮ್ಮ ಮಕ್ಕಳಿಗೆ ಹಂದಿಗಳು ಕಚ್ಚಿವೆ. ಡೆಂಗ್ಯೂ ಜ್ವರ ಬಂದಿವೆ. ನಮ್ಮ ಕಷ್ಟನಾ ಯಾರಿಗೆ ಹೇಳಬೇಕೊ ಆರ್ಥವಾಗುತ್ತಿಲ್ಲ ಎಂದು ಸಿಬ್ಬಂದಿ ತಮ್ಮ ಅಳನ್ನು ಪತ್ರಿಕೆಯೊಂದಿಗೆ ತೊಡಿಕೊಳ್ಳುತ್ತಾರೆ.<br /> ಹಂದಿಗಳ ಹಾವಳಿ ಉಪಟಳದಿಂದ ನಮ್ಮನ್ನು ನಮ್ಮ ಮಕ್ಕಳನ್ನು ಹಾಗೂ ಕ್ವಾರ್ಟರ್ಸ್ ರಕ್ಷಿಸಿ ಎಂದು ಪಟ್ಟಣ ಪಂಚಾಯಿತಿಯವರಿಗೆ ನಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವಿನಿಂದಲೇ ಹೇಳುತ್ತಾರೆ.<br /> <br /> ಕಾಂಪೌಂಡ್ ಬಿದ್ದು ಹಲವು ವರ್ಷಗಳೇ ಆಗಿವೆ. ಇದನ್ನು ನಿರ್ಮಿಸಿ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಚನ್ನಬಸವನಗೌಡ ಹಾಗೂ ಶಾಸಕ ನೇಮಿರಾಜ್ ನಾಯ್ಕ ಮತ್ತು ಡಿಎಚ್ಓ ಅವರಿಗೆ ಹಲವಾರು ಬಾರಿ ಪತ್ರ ಬರೆದಿದ್ದೇವೆ.<br /> <br /> ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ ಕುಮಾರ್.<br /> ಆಸ್ಪತ್ರೆಯ ವಾತಾವರಣವೇ ರೋಗ ಪೀಡಿತವಾಗಿದೆ. ಇದನ್ನು ಸರಿಪಡಿಸದ ಸರ್ಕಾರ ಜನತೆ ಆರೋಗ್ಯವನ್ನು ಎಷ್ಟರ ಮಟ್ಟಿಗೆ ರಕ್ಷಿಸಬಲ್ಲದು ಎಂದು ಖಾರವಾಗಿ ಹೇಳುತ್ತಾರೆ ಆಸ್ಪತ್ರೆಗೆ ದಾಖಲಾದ ಕೊಟ್ರೇಶ್.<br /> ಇಲ್ಲಿನ ಕಲುಷಿತ ವಾತಾವರಣ ಕುರಿತು ಮೇಲಾಧಿಕಾರಿಗಳಿಗೆ ಅನೇಕ ಬಾರಿ ಪತ್ರ ಬರೆದಿದ್ದೇವೆ.<br /> <br /> ಇನ್ನು ಎಚ್ಚೆತ್ತಕೊಂಡಿಲ್ಲ. ಇನ್ನು ಮುಷ್ಕರ ಮಾಡುವುದೊಂದೇ ಪರಿಹಾರ ಎಂದು ಸಮಾಜ ಸೇವಕ ಕಡ್ಲಿ ಕಲ್ಮಿನಿ ವೀರಪ್ಪ ಹೇಳುತ್ತಾರೆ.ಜಿಲ್ಲಾ ಪಂಚಾಯಿತಿ ತಕ್ಷಣವೇ ಆಸ್ಪತ್ರೆ ಕಾಂಪೌಂಡ್ ನಿರ್ಮಿಸಬೇಕಾಗಿದೆ. ಸ್ಥಳೀಯ ಪಟ್ಟಣ ಪಂಚಾಯ್ತಿ ಹಂದಿಗಳನ್ನು ಪಟ್ಟಣದಿಂದಲೇ ಹೊರಹಾಕಬೇಕು. ಇಲ್ಲವಾದರೆ ಇಡೀ ಪಟ್ಟಣವೇ ರೋಗ ಪೀಡಿತವಾಗುವುದರಲ್ಲಿ ಅನುಮಾನವಿಲ್ಲ.<br /> <br /> ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ. ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಇಲ್ಲಿನ ಆಸ್ಪತ್ರೆ ಬಗ್ಗೆ ಗಮನ ಹರಿಸದಿದ್ದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಸಂಶಯವಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>