<p>ದನಗಳ ಸಂತೆ, ಕುರಿಗಳ ಸಂತೆ, ವಾರಕೊಮ್ಮೆ ನಡೆಯುವ ತರಕಾರಿ ಸಂತೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಹಂದಿಗಳ ಮಾರಾಟಕ್ಕಾಗಿ ಸಂತೆ ನಡೆಯುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. <br /> <br /> ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಸಮೀಪದ ಆಲೂರು ದುದ್ದನಹಳ್ಳಿ ಗೇಟ್ಬಳಿ ಪ್ರತಿ ಸೋಮವಾರ ಬೆಳಗಿನ ಜಾವ 3 ರಿಂದ ಬೆಳಿಗ್ಗೆ 9 ಗಂಟೆವರೆಗೆ ಹಂದಿಗಳ ಸಂತೆ ನಡೆಯುತ್ತದೆ. ಇಷ್ಟು ದೊಡ್ಡ ಹಂದಿ ಸಂತೆ ರಾಜ್ಯದ ಬೇರೆಲ್ಲೂ ಕಾಣಸಿಗದು.<br /> <br /> ಕಳೆದ ಹದಿನೈದು ವರ್ಷಗಳಿಂದ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಂಧ್ರದ ಹಿಂದೂಪುರ, ಕರ್ನೂಲು, ಅನಂತಪುರ, ಕಡಪ ಹಾಗೂ ರಾಜ್ಯದ ಕೊಪ್ಪಳ, ರಾಯಚೂರು, ಗಂಗಾವತಿ ಮತ್ತಿತರ ಕಡೆಗಳಿಂದ ಹಂದಿಗಳನ್ನು ಕೊಳ್ಳುವವರು ಮತ್ತು ಮಾರುವವರು ಸಂತೆಗೆ ಬರುತ್ತಾರೆ. <br /> <br /> ಬೇಸಾಯದ ಜತೆಗೆ ಸಣ್ಣ ಪ್ರಮಾಣದಲ್ಲಿ ಹಂದಿ ಸಾಕುವ ರೈತರು ತಮಗೆ ಹಣದ ಅಗತ್ಯ ಇದ್ದಾಗ ಇಲ್ಲಿಗೆ ಹಂದಿಗಳನ್ನು ತಂದು ಮಾರಾಟ ಮಾಡುತ್ತಾರೆ. ಐದಾರು ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ರೂ ವಹಿವಾಟು ನಡೆಯುತ್ತದೆ.<br /> <br /> ಪ್ರತಿ ವಾರ 12 ರಿಂದ 18 ಟನ್ಗಳಷ್ಟು ತೂಕದ ನಾಟಿ ಹಂದಿಗಳು ಮಾರಾಟವಾಗುತ್ತವೆ. ದೇವನಹಳ್ಳಿ ತಾಲ್ಲೂಕಿನಲ್ಲೇ 17 ಹಂದಿಮಾಂಸ ಮಾರಾಟ ಕೇಂದ್ರಗಳಿವೆ. ಒಂದೊಂದು ಕೇಂದ್ರದಲ್ಲಿ ದಿನಕ್ಕೆ ಸರಾಸರಿ ದ 30 ರಿಂದ 70ಕೆ.ಜಿ ಮಾಂಸ ಮಾರಾಟವಾಗುತ್ತದೆ ಎಂಬ ಅಂದಾಜಿದೆ.<br /> <br /> ಸಂತೆಯಲ್ಲೆ 10ರಿಂದ 25ಕೆ.ಜಿ ತೂಕದ ದೇಸಿ ಹಾಗೂ ಫಾರಂಗಳಲ್ಲಿ ಬೆಳೆಸಿದ ಹಂದಿಗಳು ಬಿಕರಿಯಾಗುತ್ತವೆ. ಬೆಂಗಳೂರು ನಗರದ ಹಂದಿ ಮಾಂಸ ಮಾರಾಟಗಾರರು ಇಲ್ಲಿ ಹಂದಿ ಖರೀದಿಸಿ ಒಯ್ಯುತ್ತಾರೆ. <br /> <br /> ಹಂದಿ ಸಂತೆ ನಡೆಯುವ ಜಾಗ ವ್ಯವಸ್ಥಿತವಾಗಿಲ್ಲ. ಈ ಸ್ಥಳವನ್ನು ಶುಚಿಯಾಗಿಡುವ ಕೆಲಸವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕಿದೆ. ಹಂದಿಗಳ ಸಂತೆಗೆ ಸಾರ್ವಜನಿಕರು ಹೆಚ್ಚಾಗಿ ಬರುವುದಿಲ್ಲವಾದ್ದರಿಮದ ಈ ಸ್ಥಳದ ಸ್ವಚ್ಚತೆ ಬಗ್ಗೆ ಸಂಬಂಧಿಸಿದವರಿಗೆ ಹೆಚ್ಚಿನ ಕಾಳಜಿ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದನಗಳ ಸಂತೆ, ಕುರಿಗಳ ಸಂತೆ, ವಾರಕೊಮ್ಮೆ ನಡೆಯುವ ತರಕಾರಿ ಸಂತೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಹಂದಿಗಳ ಮಾರಾಟಕ್ಕಾಗಿ ಸಂತೆ ನಡೆಯುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. <br /> <br /> ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಸಮೀಪದ ಆಲೂರು ದುದ್ದನಹಳ್ಳಿ ಗೇಟ್ಬಳಿ ಪ್ರತಿ ಸೋಮವಾರ ಬೆಳಗಿನ ಜಾವ 3 ರಿಂದ ಬೆಳಿಗ್ಗೆ 9 ಗಂಟೆವರೆಗೆ ಹಂದಿಗಳ ಸಂತೆ ನಡೆಯುತ್ತದೆ. ಇಷ್ಟು ದೊಡ್ಡ ಹಂದಿ ಸಂತೆ ರಾಜ್ಯದ ಬೇರೆಲ್ಲೂ ಕಾಣಸಿಗದು.<br /> <br /> ಕಳೆದ ಹದಿನೈದು ವರ್ಷಗಳಿಂದ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಂಧ್ರದ ಹಿಂದೂಪುರ, ಕರ್ನೂಲು, ಅನಂತಪುರ, ಕಡಪ ಹಾಗೂ ರಾಜ್ಯದ ಕೊಪ್ಪಳ, ರಾಯಚೂರು, ಗಂಗಾವತಿ ಮತ್ತಿತರ ಕಡೆಗಳಿಂದ ಹಂದಿಗಳನ್ನು ಕೊಳ್ಳುವವರು ಮತ್ತು ಮಾರುವವರು ಸಂತೆಗೆ ಬರುತ್ತಾರೆ. <br /> <br /> ಬೇಸಾಯದ ಜತೆಗೆ ಸಣ್ಣ ಪ್ರಮಾಣದಲ್ಲಿ ಹಂದಿ ಸಾಕುವ ರೈತರು ತಮಗೆ ಹಣದ ಅಗತ್ಯ ಇದ್ದಾಗ ಇಲ್ಲಿಗೆ ಹಂದಿಗಳನ್ನು ತಂದು ಮಾರಾಟ ಮಾಡುತ್ತಾರೆ. ಐದಾರು ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ರೂ ವಹಿವಾಟು ನಡೆಯುತ್ತದೆ.<br /> <br /> ಪ್ರತಿ ವಾರ 12 ರಿಂದ 18 ಟನ್ಗಳಷ್ಟು ತೂಕದ ನಾಟಿ ಹಂದಿಗಳು ಮಾರಾಟವಾಗುತ್ತವೆ. ದೇವನಹಳ್ಳಿ ತಾಲ್ಲೂಕಿನಲ್ಲೇ 17 ಹಂದಿಮಾಂಸ ಮಾರಾಟ ಕೇಂದ್ರಗಳಿವೆ. ಒಂದೊಂದು ಕೇಂದ್ರದಲ್ಲಿ ದಿನಕ್ಕೆ ಸರಾಸರಿ ದ 30 ರಿಂದ 70ಕೆ.ಜಿ ಮಾಂಸ ಮಾರಾಟವಾಗುತ್ತದೆ ಎಂಬ ಅಂದಾಜಿದೆ.<br /> <br /> ಸಂತೆಯಲ್ಲೆ 10ರಿಂದ 25ಕೆ.ಜಿ ತೂಕದ ದೇಸಿ ಹಾಗೂ ಫಾರಂಗಳಲ್ಲಿ ಬೆಳೆಸಿದ ಹಂದಿಗಳು ಬಿಕರಿಯಾಗುತ್ತವೆ. ಬೆಂಗಳೂರು ನಗರದ ಹಂದಿ ಮಾಂಸ ಮಾರಾಟಗಾರರು ಇಲ್ಲಿ ಹಂದಿ ಖರೀದಿಸಿ ಒಯ್ಯುತ್ತಾರೆ. <br /> <br /> ಹಂದಿ ಸಂತೆ ನಡೆಯುವ ಜಾಗ ವ್ಯವಸ್ಥಿತವಾಗಿಲ್ಲ. ಈ ಸ್ಥಳವನ್ನು ಶುಚಿಯಾಗಿಡುವ ಕೆಲಸವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕಿದೆ. ಹಂದಿಗಳ ಸಂತೆಗೆ ಸಾರ್ವಜನಿಕರು ಹೆಚ್ಚಾಗಿ ಬರುವುದಿಲ್ಲವಾದ್ದರಿಮದ ಈ ಸ್ಥಳದ ಸ್ವಚ್ಚತೆ ಬಗ್ಗೆ ಸಂಬಂಧಿಸಿದವರಿಗೆ ಹೆಚ್ಚಿನ ಕಾಳಜಿ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>