<p><strong>ಹೊನ್ನಾಳಿ: </strong>ತೀವ್ರ ಮಳೆ ಕೊರತೆಯಿಂದ ಕಂಗಾಲಾದ ತಾಲ್ಲೂಕಿನ ಕುಳಗಟ್ಟೆ ಗ್ರಾಮದ ಜನರು ಆಷಾಢ ಮಾಸದ ಕೊನೇ ಶನಿವಾರ ಮಳೆಗಾಗಿ ವಿಶೇಷ ಆಚರಣೆ ನಡೆಸಿದರು. <br /> <br /> ಗ್ರಾಮದ ಆಂಜನೇಯ ಸಮೇತ ಕಲ್ಯಾಣ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಹ್ಯಾದ್ರಿ ತಪ್ಪಲಿನ ಹನುಮನಮಟ್ಟಿಗೆ ಪಾದಯಾತ್ರೆ ಮೂಲಕ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದೊಂದಿಗೆ ತೆರಳಲಾಯಿತು. ಅಲ್ಲಿರುವ ಹನುಮಂತ ದೇವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. <br /> <br /> ಭಕ್ತರು ಗ್ರಾಮದ 10-12 ವರ್ಷ ವಯಸ್ಸಿನ ಮೂವರು ಬಾಲಕರನ್ನು ವಿವಸ್ತ್ರರಾಗಿಸಿ, ನೀರು ಸುರಿದು ಮಳೆ ಮಲ್ಲಪ್ಪನ ಪೂಜೆ ನೆರವೇರಿಸಿದರು. ನಂತರ ಮಕ್ಕಳೊಂದಿಗೆ ಭಕ್ತಾದಿಗಳು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಳೆಗಾಗಿ ಪ್ರಾರ್ಥಿಸಿದರು. <br /> <br /> ಹನುಮನಮಟ್ಟಿಯಲ್ಲಿ ಗ್ರಾಮಸ್ಥರು ಅಡುಗೆ ಮಾಡಿ, ದೇವರಿಗೆ ನೈವೇದ್ಯ ನೆರವೇರಿಸಿದರು. ಬಳಿಕ ನೂರಾರು ಮಂದಿ ಸಾಮೂಹಿಕ ಭೋಜನ ಮಾಡಿದರು. ಭೋಜನದ ವೇಳೆ ತುಂತುರು ಹನಿ ಸುರಿದು ಭಕ್ತರಲ್ಲಿ ಸಂತಸ ಉಂಟುಮಾಡಿತು. <br /> <br /> <strong>ಮಳೆ ಮಲ್ಲಪ್ಪನ ಪೂಜೆ</strong><br /> ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಆಷಾಢ ಮಾಸದ ಕೊನೇ ಶನಿವಾರದ ಪ್ರಯುಕ್ತ ಗ್ರಾಮಸ್ಥರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. <br /> <br /> ಗ್ರಾಮದ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ವಿವಿಧ ಜಾನಪದ ಗೀತೆಗಳನ್ನು ಹಾಡುತ್ತಾ ಗ್ರಾಮದ ಬೀದಿಗಳಲ್ಲಿ ತೆರಳಿದರು. <br /> <br /> ಗ್ರಾಮದ ಶಾಂತಜ್ಜಿ ಹೇಳುವಂತೆ, ಈ ಹಿಂದೆ ಮಳೆ ಕೈಕೊಟ್ಟಾಗ ಎರಡು ಬಾರಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಗಿತ್ತು. ಆ ಮೇಲೆ ಮಳೆ ಸುರಿದಿತ್ತು. ಈಗ ಗ್ರಾಮದ ಎಲ್ಲರ ತೀರ್ಮಾನದಂತೆ ಮಳೆ ಮಲ್ಲಪ್ಪನ ಪೂಜೆ ಮಾಡುತ್ತಿದ್ದೇವೆ. ಮಳೆ ಬರುವುದೆಂಬ ಆಶಾಭಾವನೆ ಹೊಂದಿದ್ದೇವೆ ಎನ್ನುತ್ತಾರೆ. <br /> <br /> ಒಬ್ಬ ಬಾಲಕನ ತಲೆ ಮೇಲೆ ಮಣೆಯನ್ನಿಟ್ಟು ಪೂಜೆ ಮಾಡಿ, ಆತನನ್ನು ಗ್ರಾಮದ ಮನೆಗಳಿಗೆ ಕರೆದುಕೊಂಡು ಹೋಗಿ ಅವರು ನೀಡಿದ ಅಕ್ಕಿ, ಬೇಳೆ, ಬೆಲ್ಲ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದರು. <br /> <br /> ಗ್ರಾಮದ ದೇವಸ್ಥಾನದ ಎದುರು ರೊಟ್ಟಿ-ಪಲ್ಯ ಇತರ ಅಡುಗೆ ತಯಾರಿಸಿ ದೇವರಿಗೆ ಹೋಳಿಗೆ ಎಡೆ ಅರ್ಪಿಸಿ, ಮಳೆಗಾಗಿ ಪ್ರಾರ್ಥಿಸಲಾಯಿತು. ನಂತರ ಸಾಮೂಹಿಕ ಭೋಜನ ಸವಿದರು.<br /> <br /> <strong>ತಿಮ್ಮಪ್ಪನಿಗೆ ಮೊರೆ<br /> ಬಸವಾಪಟ್ಟಣ</strong>: ಮಳೆಗಾಗಿ ಪರಿತಪಿಸುತ್ತಿರುವ ಇಲ್ಲಿನ ರೈತರು ವಿವಿಧ ದೇವರುಗಳ ಪೂಜೆಯ ನಂತರ, ಗ್ರಾಮದ ಪಶ್ಚಿಮದ ಬೆಟ್ಟದಲ್ಲಿ ನೆಲೆಸಿರುವ ತಿಮ್ಮಪ್ಪನಿಗೆ ಮೊರೆ ಹೋಗಿದ್ದಾರೆ. <br /> <br /> ರೊಟ್ಟಿ ಬುತ್ತಿ ಮಾಡಿಕೊಂಡು ಬೆಟ್ಟದ ತುದಿಯಲ್ಲಿರುವ ತಿಮ್ಮಪ್ಪನ ಗುಡಿಗೆ, ಇಲ್ಲಿನ ಹಾಲಸ್ವಾಮಿಗಳ ಪಾದುಕೆಗಳೊಂದಿಗೆ ಐದು ಶನಿವಾರ ತೆರಳಿ ಪೂಜೆ ಸಲ್ಲಿಸಿ ಎಡೆ ಮಾಡಿದರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. <br /> <br /> ಈಗಾಗಲೇ ಎರಡು ಶನಿವಾರ ತೆರಳಿ ಪೂಜೆ ಸಲ್ಲಿಸಿದರೂ ತಿಮ್ಮಪ್ಪ ಇನ್ನೂ ಕಣ್ಣು ಬಿಟ್ಟಿಲ್ಲ. ಆದರೆ, ರೈತರು ಮಾತ್ರ ತಮ್ಮ ಶ್ರದ್ಧೆಯಲ್ಲಿ ಹಿಂದೆ ಬೀಳದೇ ತಂಡೋಪ ತಂಡವಾಗಿ ತಿಮ್ಮಪ್ಪನಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ: </strong>ತೀವ್ರ ಮಳೆ ಕೊರತೆಯಿಂದ ಕಂಗಾಲಾದ ತಾಲ್ಲೂಕಿನ ಕುಳಗಟ್ಟೆ ಗ್ರಾಮದ ಜನರು ಆಷಾಢ ಮಾಸದ ಕೊನೇ ಶನಿವಾರ ಮಳೆಗಾಗಿ ವಿಶೇಷ ಆಚರಣೆ ನಡೆಸಿದರು. <br /> <br /> ಗ್ರಾಮದ ಆಂಜನೇಯ ಸಮೇತ ಕಲ್ಯಾಣ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಹ್ಯಾದ್ರಿ ತಪ್ಪಲಿನ ಹನುಮನಮಟ್ಟಿಗೆ ಪಾದಯಾತ್ರೆ ಮೂಲಕ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದೊಂದಿಗೆ ತೆರಳಲಾಯಿತು. ಅಲ್ಲಿರುವ ಹನುಮಂತ ದೇವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. <br /> <br /> ಭಕ್ತರು ಗ್ರಾಮದ 10-12 ವರ್ಷ ವಯಸ್ಸಿನ ಮೂವರು ಬಾಲಕರನ್ನು ವಿವಸ್ತ್ರರಾಗಿಸಿ, ನೀರು ಸುರಿದು ಮಳೆ ಮಲ್ಲಪ್ಪನ ಪೂಜೆ ನೆರವೇರಿಸಿದರು. ನಂತರ ಮಕ್ಕಳೊಂದಿಗೆ ಭಕ್ತಾದಿಗಳು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಳೆಗಾಗಿ ಪ್ರಾರ್ಥಿಸಿದರು. <br /> <br /> ಹನುಮನಮಟ್ಟಿಯಲ್ಲಿ ಗ್ರಾಮಸ್ಥರು ಅಡುಗೆ ಮಾಡಿ, ದೇವರಿಗೆ ನೈವೇದ್ಯ ನೆರವೇರಿಸಿದರು. ಬಳಿಕ ನೂರಾರು ಮಂದಿ ಸಾಮೂಹಿಕ ಭೋಜನ ಮಾಡಿದರು. ಭೋಜನದ ವೇಳೆ ತುಂತುರು ಹನಿ ಸುರಿದು ಭಕ್ತರಲ್ಲಿ ಸಂತಸ ಉಂಟುಮಾಡಿತು. <br /> <br /> <strong>ಮಳೆ ಮಲ್ಲಪ್ಪನ ಪೂಜೆ</strong><br /> ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಆಷಾಢ ಮಾಸದ ಕೊನೇ ಶನಿವಾರದ ಪ್ರಯುಕ್ತ ಗ್ರಾಮಸ್ಥರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. <br /> <br /> ಗ್ರಾಮದ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ವಿವಿಧ ಜಾನಪದ ಗೀತೆಗಳನ್ನು ಹಾಡುತ್ತಾ ಗ್ರಾಮದ ಬೀದಿಗಳಲ್ಲಿ ತೆರಳಿದರು. <br /> <br /> ಗ್ರಾಮದ ಶಾಂತಜ್ಜಿ ಹೇಳುವಂತೆ, ಈ ಹಿಂದೆ ಮಳೆ ಕೈಕೊಟ್ಟಾಗ ಎರಡು ಬಾರಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಗಿತ್ತು. ಆ ಮೇಲೆ ಮಳೆ ಸುರಿದಿತ್ತು. ಈಗ ಗ್ರಾಮದ ಎಲ್ಲರ ತೀರ್ಮಾನದಂತೆ ಮಳೆ ಮಲ್ಲಪ್ಪನ ಪೂಜೆ ಮಾಡುತ್ತಿದ್ದೇವೆ. ಮಳೆ ಬರುವುದೆಂಬ ಆಶಾಭಾವನೆ ಹೊಂದಿದ್ದೇವೆ ಎನ್ನುತ್ತಾರೆ. <br /> <br /> ಒಬ್ಬ ಬಾಲಕನ ತಲೆ ಮೇಲೆ ಮಣೆಯನ್ನಿಟ್ಟು ಪೂಜೆ ಮಾಡಿ, ಆತನನ್ನು ಗ್ರಾಮದ ಮನೆಗಳಿಗೆ ಕರೆದುಕೊಂಡು ಹೋಗಿ ಅವರು ನೀಡಿದ ಅಕ್ಕಿ, ಬೇಳೆ, ಬೆಲ್ಲ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದರು. <br /> <br /> ಗ್ರಾಮದ ದೇವಸ್ಥಾನದ ಎದುರು ರೊಟ್ಟಿ-ಪಲ್ಯ ಇತರ ಅಡುಗೆ ತಯಾರಿಸಿ ದೇವರಿಗೆ ಹೋಳಿಗೆ ಎಡೆ ಅರ್ಪಿಸಿ, ಮಳೆಗಾಗಿ ಪ್ರಾರ್ಥಿಸಲಾಯಿತು. ನಂತರ ಸಾಮೂಹಿಕ ಭೋಜನ ಸವಿದರು.<br /> <br /> <strong>ತಿಮ್ಮಪ್ಪನಿಗೆ ಮೊರೆ<br /> ಬಸವಾಪಟ್ಟಣ</strong>: ಮಳೆಗಾಗಿ ಪರಿತಪಿಸುತ್ತಿರುವ ಇಲ್ಲಿನ ರೈತರು ವಿವಿಧ ದೇವರುಗಳ ಪೂಜೆಯ ನಂತರ, ಗ್ರಾಮದ ಪಶ್ಚಿಮದ ಬೆಟ್ಟದಲ್ಲಿ ನೆಲೆಸಿರುವ ತಿಮ್ಮಪ್ಪನಿಗೆ ಮೊರೆ ಹೋಗಿದ್ದಾರೆ. <br /> <br /> ರೊಟ್ಟಿ ಬುತ್ತಿ ಮಾಡಿಕೊಂಡು ಬೆಟ್ಟದ ತುದಿಯಲ್ಲಿರುವ ತಿಮ್ಮಪ್ಪನ ಗುಡಿಗೆ, ಇಲ್ಲಿನ ಹಾಲಸ್ವಾಮಿಗಳ ಪಾದುಕೆಗಳೊಂದಿಗೆ ಐದು ಶನಿವಾರ ತೆರಳಿ ಪೂಜೆ ಸಲ್ಲಿಸಿ ಎಡೆ ಮಾಡಿದರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. <br /> <br /> ಈಗಾಗಲೇ ಎರಡು ಶನಿವಾರ ತೆರಳಿ ಪೂಜೆ ಸಲ್ಲಿಸಿದರೂ ತಿಮ್ಮಪ್ಪ ಇನ್ನೂ ಕಣ್ಣು ಬಿಟ್ಟಿಲ್ಲ. ಆದರೆ, ರೈತರು ಮಾತ್ರ ತಮ್ಮ ಶ್ರದ್ಧೆಯಲ್ಲಿ ಹಿಂದೆ ಬೀಳದೇ ತಂಡೋಪ ತಂಡವಾಗಿ ತಿಮ್ಮಪ್ಪನಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>