<p><strong>ಮಹದೇವಪುರ:</strong> ಇಲ್ಲಿನ ಕಾಡುಗೋಡಿಯಲ್ಲಿರುವ ರೈಲು ನಿಲ್ದಾಣದ ಬಳಿ ಸಾರ್ವಜನಿಕರು ಓ ಫಾರಂ ಕಡೆಗೆ ಹೋಗಲು ನೆರವಾಗಲು ಹಳಿಗಳಿಗೆ ಅಡ್ಡಲಾಗಿ ನಿರ್ಮಾಣವಾಗಬೇಕಿದ್ದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.<br /> <br /> ಇದರಿಂದಾಗಿ ನಿತ್ಯವೂ ಜನರು ಸದಾ ಅಪಾಯದಲ್ಲೇ ಅತ್ತಿಂದಿತ್ತ ಹಳಿಗಳನ್ನು ದಾಟಿಕೊಂಡು ಓಡಾಡುವಂತಾಗಿದೆ.<br /> ಈ ರೈಲು ನಿಲ್ದಾಣದಲ್ಲಿ ಅಧಿಕ ಸಂಖ್ಯೆಯ ರೈಲುಗಳು ಸಂಚರಿಸುತ್ತಿವೆ. ಕಾಡುಗೋಡಿ, ಬೆಳತೂರು ಗ್ರಾಮದ ಜನತೆ ಓ ಫಾರಂ ಹಾಗೂ ಸರ್ಜಾಪುರ, ಬೆಂಗಳೂರು ನಗರದ ಕಡೆಗೆ ಹೋಗಬೇಕೆಂದರೆ ರೈಲು ಹಳಿಗಳನ್ನು ದಾಟಿಕೊಂಡು ಹೋಗಬೇಕು.<br /> <br /> ಕೆಲ ತಿಂಗಳುಗಳ ಹಿಂದೆ ಕಾಡುಗೋಡಿಯ ನಿವಾಸಿಗಳಿಬ್ಬರು ಹಳಿಗಳನ್ನು ದಾಟಿಕೊಂಡು ಹೋಗುವ ವೇಳೆ ರೈಲಿಗೆ ಸಿಲುಕಿ ಮೃತಪಟ್ಟರು. ಆ ಸಂದರ್ಭದಲ್ಲಿ ಸ್ಥಳೀಯರು ರೈಲು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆಗ ರೈಲ್ವೆ ಇಲಾಖೆಯು ಆದಷ್ಟು ಬೇಗನೆ ಮೇಲ್ಸೇತುವೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಮೇಲ್ಸೇತುವೆ ನಿರ್ಮಾಣಗೊಂಡಿಲ್ಲ.<br /> <br /> `ಕಾಡುಗೋಡಿ ಬಸ್ ನಿಲ್ದಾಣವೂ ರೈಲ್ವೆ ನಿಲ್ದಾಣದ ಪಕ್ಕದಲ್ಲಿದೆ. ಈ ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಜನರು ಹಳಿಗಳನ್ನು ದಾಟಿಕೊಂಡು ಸಾಗಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಹ ಹಳಿಗಳನ್ನು ದಾಟಿಕೊಂಡೇ ಹೋಗುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಹಳಿಗಳ ಅಕ್ಕಪಕ್ಕ ದೀಪದ ಕೊರತೆ ಇರುವುದರಿಂದ ಜನತೆಗೆ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಸ್ಥಳೀಯರು ಅಳಲು ತೋಡಿಕೊಂಡರು.<br /> <br /> `ಏಪ್ರಿಲ್ ತಿಂಗಳಿನಲ್ಲಿಯೇ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಜೂನ್ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿಲ್ಲ' ಎಂದು ಸ್ಥಳೀಯ ಜಾನಕಿರಾಮ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಬಸ್, ಲಾರಿಗಳು ಸೇರಿದಂತೆ ದೊಡ್ಡ ವಾಹನಗಳ ಓಡಾಟಕ್ಕೆ ಸುಮಾರು ಮುಕ್ಕಾಲು ಕಿ.ಮೀ. ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಆ ಸೇತುವೆಯ ಮೂಲಕ ಕಾಡುಗೋಡಿಯ ನಿವಾಸಿಗಳು ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಸುಮಾರು ಒಂದೂವರೆ ಕಿ.ಮೀ. ದೂರವನ್ನು ಕ್ರಮಿಸಬೇಕಾಗುತ್ತದೆ. ಹಳಿಗಳನ್ನು ದಾಟಿ ಹೋದರೆ ಬಸ್ ನಿಲ್ದಾಣಕ್ಕೆ 100 ಮೀಟರ್ ಮಾತ್ರ ದೂರ. ಹೀಗಾಗಿ ಸ್ಥಳೀಯರು ಹಳಿಗಳನ್ನು ದಾಟಿಕೊಂಡು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು' ಎಂದು ಸ್ಥಳೀಯರು ಒತ್ತಾಯಿಸಿದರು.<br /> <br /> `ವಿವಿಧ ಕಾರಣಗಳಿಂದಾಗಿ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು' ಎಂದು ರೈಲ್ವೆ ಇಲಾಖೆಯ ಅಧಿಕಾರಿ ಸಂದೀಪ್ ಮೆಹ್ರಾ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇವಪುರ:</strong> ಇಲ್ಲಿನ ಕಾಡುಗೋಡಿಯಲ್ಲಿರುವ ರೈಲು ನಿಲ್ದಾಣದ ಬಳಿ ಸಾರ್ವಜನಿಕರು ಓ ಫಾರಂ ಕಡೆಗೆ ಹೋಗಲು ನೆರವಾಗಲು ಹಳಿಗಳಿಗೆ ಅಡ್ಡಲಾಗಿ ನಿರ್ಮಾಣವಾಗಬೇಕಿದ್ದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.<br /> <br /> ಇದರಿಂದಾಗಿ ನಿತ್ಯವೂ ಜನರು ಸದಾ ಅಪಾಯದಲ್ಲೇ ಅತ್ತಿಂದಿತ್ತ ಹಳಿಗಳನ್ನು ದಾಟಿಕೊಂಡು ಓಡಾಡುವಂತಾಗಿದೆ.<br /> ಈ ರೈಲು ನಿಲ್ದಾಣದಲ್ಲಿ ಅಧಿಕ ಸಂಖ್ಯೆಯ ರೈಲುಗಳು ಸಂಚರಿಸುತ್ತಿವೆ. ಕಾಡುಗೋಡಿ, ಬೆಳತೂರು ಗ್ರಾಮದ ಜನತೆ ಓ ಫಾರಂ ಹಾಗೂ ಸರ್ಜಾಪುರ, ಬೆಂಗಳೂರು ನಗರದ ಕಡೆಗೆ ಹೋಗಬೇಕೆಂದರೆ ರೈಲು ಹಳಿಗಳನ್ನು ದಾಟಿಕೊಂಡು ಹೋಗಬೇಕು.<br /> <br /> ಕೆಲ ತಿಂಗಳುಗಳ ಹಿಂದೆ ಕಾಡುಗೋಡಿಯ ನಿವಾಸಿಗಳಿಬ್ಬರು ಹಳಿಗಳನ್ನು ದಾಟಿಕೊಂಡು ಹೋಗುವ ವೇಳೆ ರೈಲಿಗೆ ಸಿಲುಕಿ ಮೃತಪಟ್ಟರು. ಆ ಸಂದರ್ಭದಲ್ಲಿ ಸ್ಥಳೀಯರು ರೈಲು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆಗ ರೈಲ್ವೆ ಇಲಾಖೆಯು ಆದಷ್ಟು ಬೇಗನೆ ಮೇಲ್ಸೇತುವೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಮೇಲ್ಸೇತುವೆ ನಿರ್ಮಾಣಗೊಂಡಿಲ್ಲ.<br /> <br /> `ಕಾಡುಗೋಡಿ ಬಸ್ ನಿಲ್ದಾಣವೂ ರೈಲ್ವೆ ನಿಲ್ದಾಣದ ಪಕ್ಕದಲ್ಲಿದೆ. ಈ ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಜನರು ಹಳಿಗಳನ್ನು ದಾಟಿಕೊಂಡು ಸಾಗಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಹ ಹಳಿಗಳನ್ನು ದಾಟಿಕೊಂಡೇ ಹೋಗುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಹಳಿಗಳ ಅಕ್ಕಪಕ್ಕ ದೀಪದ ಕೊರತೆ ಇರುವುದರಿಂದ ಜನತೆಗೆ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಸ್ಥಳೀಯರು ಅಳಲು ತೋಡಿಕೊಂಡರು.<br /> <br /> `ಏಪ್ರಿಲ್ ತಿಂಗಳಿನಲ್ಲಿಯೇ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಜೂನ್ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿಲ್ಲ' ಎಂದು ಸ್ಥಳೀಯ ಜಾನಕಿರಾಮ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಬಸ್, ಲಾರಿಗಳು ಸೇರಿದಂತೆ ದೊಡ್ಡ ವಾಹನಗಳ ಓಡಾಟಕ್ಕೆ ಸುಮಾರು ಮುಕ್ಕಾಲು ಕಿ.ಮೀ. ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಆ ಸೇತುವೆಯ ಮೂಲಕ ಕಾಡುಗೋಡಿಯ ನಿವಾಸಿಗಳು ಬಸ್ ನಿಲ್ದಾಣವನ್ನು ತಲುಪಬೇಕೆಂದರೆ ಸುಮಾರು ಒಂದೂವರೆ ಕಿ.ಮೀ. ದೂರವನ್ನು ಕ್ರಮಿಸಬೇಕಾಗುತ್ತದೆ. ಹಳಿಗಳನ್ನು ದಾಟಿ ಹೋದರೆ ಬಸ್ ನಿಲ್ದಾಣಕ್ಕೆ 100 ಮೀಟರ್ ಮಾತ್ರ ದೂರ. ಹೀಗಾಗಿ ಸ್ಥಳೀಯರು ಹಳಿಗಳನ್ನು ದಾಟಿಕೊಂಡು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು' ಎಂದು ಸ್ಥಳೀಯರು ಒತ್ತಾಯಿಸಿದರು.<br /> <br /> `ವಿವಿಧ ಕಾರಣಗಳಿಂದಾಗಿ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು' ಎಂದು ರೈಲ್ವೆ ಇಲಾಖೆಯ ಅಧಿಕಾರಿ ಸಂದೀಪ್ ಮೆಹ್ರಾ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>