<p><strong>ಬಳ್ಳಾರಿ: </strong>ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆಯ ಬಸ್ ನಿಲ್ದಾಣದ ತುಂಬೆಲ್ಲ ನೀರು ನಿಂತಿದ್ದು, ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.<br /> <br /> ಬಸ್ಗಳನ್ನು ನಿಲುಗಡೆ ಮಾಡುವ ಪ್ರದೇಶದಲ್ಲಿ ನೀರು ನಿಂತು ಮಲಿನ ಗೊಂಡು ಈ ಪ್ರದೇಶದಲ್ಲಿ ದುರ್ನಾತ ಆವರಿಸಿದ್ದು, ಬಸ್ನಲ್ಲಿ ಪ್ರಯಾಣಿಕರು ಮೂಗು ಮುಚಿಕೊಂಡೇ ಕುಳಿತು ಕೊಳ್ಳುವುದು ಅನಿವಾರ್ಯವಾಗಿದೆ.<br /> <br /> ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯದಲ್ಲಿನ ತ್ಯಾಜ್ಯ, ಮೂತ್ರಿ ಈ ನೀರಿನಗುಂಟ ಹರಿದು ಬಂದಿದ್ದರಿಂದ ದುರ್ವಾಸನೆ ಹೆಚ್ಚಿದೆ. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ ದ್ದರಿಂದಲೇ ಈ ಸಮಸ್ಯೆ ತಲೆ ದೋರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಹೊಸಪೇಟೆ, ಕೊಪ್ಪಳ ಮಾತ್ರ ವಲ್ಲದೆ, ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳತ್ತ ತೆರಳುವ ಬಸ್ಗಳು ಈ ಸ್ಥಳದಲ್ಲೇ ನಿಲ್ಲುತ್ತವೆ. 10ರಿಂದ 15 ನಿಮಿಷಗಳ ಕಾಲ ಪ್ರಯಾಣಿಕರಿಗಾಗಿ ತಂಗುವ ಬಸ್ಗಳಲ್ಲಿ ಕಾದು ಕುಳಿತು ಕೊಳ್ಳುವ ಪ್ರಯಾಣಿಕರಿಗೆ ಮಲಿನ ನೀರಿ ನಿಂದ ಹೊರಹೊಮ್ಮುವ ದುರ್ನಾ ತದಿಂದ ತೀವ್ರ ಸಮಸ್ಯೆ ಯಾಗುತ್ತಿದೆ ಎಂಬುದು ಅವರ ಆರೋಪ.<br /> <br /> ಪ್ರತಿ ಬಾರಿ ಮಳೆ ಸುರಿದಾಗಲೂ ಈ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ ಕೆಲವು ದಿನಗಳವರೆಗೆ ಮಲಿನ ನೀರಿನಿಂದ ಹೊರಹೊಮ್ಮುವ ದುರ್ನಾತವನ್ನು ಸಹಿಸಿಕೊಂಡು ಸಾಕಾಗಿ ಹೋಗುತ್ತದೆ ಎಂದು ನಿತ್ಯವೂ ಕುರುಗೋಡು, ಕುಡುತಿನಿ, ತೋರಣಗಲ್ ಮತ್ತಿತರ ಭಾಗದಿಂದ ಆಗಮಿಸುವ ಅನೇಕ ಪ್ರಯಾಣಿಕರು ಅಳಲು ತೋಡಿ ಕೊಂಡರು.<br /> <br /> ಅವ್ಯವಸ್ಥೆಯ ಆಗರವಾಗಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕುಡುತಿನಯ ಶರಣಪ್ಪ, ಬಸವರಾಜ, ಸಿರುಗುಪ್ಪ ತಾಲ್ಲೂಕಿನ ಬಿ.ಜಿ. ದಿನ್ನಿ ಗ್ರಾಮದ ಆರ್. ಪಿ. ಮಂಜುನಾಥ ಮತ್ತಿತರರು ಕೋರಿದ್ದಾರೆ.<br /> ಈ ನೀರಿನಿಂದಾಗಿ ಶೌಚಾಲಯಕ್ಕೆ ತೆರಳಲೂ ದಾರಿ ಇಲ್ಲದ್ದರಿಂದ, ಬಳಸಿ ಕೊಂಡು ಹೋಗುವುದು ಅನಿವಾರ್ಯ.<br /> <br /> ಈ ಕಾರಣದಿಂದಲೇ ಅನೇಕರು ರಾತ್ರಿಯ ವೇಳೆ ನಿಂತ ನೀರಿನಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ನೀರು ಮತ್ತಷ್ಟು ದುರ್ನಾತ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆಯ ಬಸ್ ನಿಲ್ದಾಣದ ತುಂಬೆಲ್ಲ ನೀರು ನಿಂತಿದ್ದು, ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.<br /> <br /> ಬಸ್ಗಳನ್ನು ನಿಲುಗಡೆ ಮಾಡುವ ಪ್ರದೇಶದಲ್ಲಿ ನೀರು ನಿಂತು ಮಲಿನ ಗೊಂಡು ಈ ಪ್ರದೇಶದಲ್ಲಿ ದುರ್ನಾತ ಆವರಿಸಿದ್ದು, ಬಸ್ನಲ್ಲಿ ಪ್ರಯಾಣಿಕರು ಮೂಗು ಮುಚಿಕೊಂಡೇ ಕುಳಿತು ಕೊಳ್ಳುವುದು ಅನಿವಾರ್ಯವಾಗಿದೆ.<br /> <br /> ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯದಲ್ಲಿನ ತ್ಯಾಜ್ಯ, ಮೂತ್ರಿ ಈ ನೀರಿನಗುಂಟ ಹರಿದು ಬಂದಿದ್ದರಿಂದ ದುರ್ವಾಸನೆ ಹೆಚ್ಚಿದೆ. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ ದ್ದರಿಂದಲೇ ಈ ಸಮಸ್ಯೆ ತಲೆ ದೋರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಹೊಸಪೇಟೆ, ಕೊಪ್ಪಳ ಮಾತ್ರ ವಲ್ಲದೆ, ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳತ್ತ ತೆರಳುವ ಬಸ್ಗಳು ಈ ಸ್ಥಳದಲ್ಲೇ ನಿಲ್ಲುತ್ತವೆ. 10ರಿಂದ 15 ನಿಮಿಷಗಳ ಕಾಲ ಪ್ರಯಾಣಿಕರಿಗಾಗಿ ತಂಗುವ ಬಸ್ಗಳಲ್ಲಿ ಕಾದು ಕುಳಿತು ಕೊಳ್ಳುವ ಪ್ರಯಾಣಿಕರಿಗೆ ಮಲಿನ ನೀರಿ ನಿಂದ ಹೊರಹೊಮ್ಮುವ ದುರ್ನಾ ತದಿಂದ ತೀವ್ರ ಸಮಸ್ಯೆ ಯಾಗುತ್ತಿದೆ ಎಂಬುದು ಅವರ ಆರೋಪ.<br /> <br /> ಪ್ರತಿ ಬಾರಿ ಮಳೆ ಸುರಿದಾಗಲೂ ಈ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ ಕೆಲವು ದಿನಗಳವರೆಗೆ ಮಲಿನ ನೀರಿನಿಂದ ಹೊರಹೊಮ್ಮುವ ದುರ್ನಾತವನ್ನು ಸಹಿಸಿಕೊಂಡು ಸಾಕಾಗಿ ಹೋಗುತ್ತದೆ ಎಂದು ನಿತ್ಯವೂ ಕುರುಗೋಡು, ಕುಡುತಿನಿ, ತೋರಣಗಲ್ ಮತ್ತಿತರ ಭಾಗದಿಂದ ಆಗಮಿಸುವ ಅನೇಕ ಪ್ರಯಾಣಿಕರು ಅಳಲು ತೋಡಿ ಕೊಂಡರು.<br /> <br /> ಅವ್ಯವಸ್ಥೆಯ ಆಗರವಾಗಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕುಡುತಿನಯ ಶರಣಪ್ಪ, ಬಸವರಾಜ, ಸಿರುಗುಪ್ಪ ತಾಲ್ಲೂಕಿನ ಬಿ.ಜಿ. ದಿನ್ನಿ ಗ್ರಾಮದ ಆರ್. ಪಿ. ಮಂಜುನಾಥ ಮತ್ತಿತರರು ಕೋರಿದ್ದಾರೆ.<br /> ಈ ನೀರಿನಿಂದಾಗಿ ಶೌಚಾಲಯಕ್ಕೆ ತೆರಳಲೂ ದಾರಿ ಇಲ್ಲದ್ದರಿಂದ, ಬಳಸಿ ಕೊಂಡು ಹೋಗುವುದು ಅನಿವಾರ್ಯ.<br /> <br /> ಈ ಕಾರಣದಿಂದಲೇ ಅನೇಕರು ರಾತ್ರಿಯ ವೇಳೆ ನಿಂತ ನೀರಿನಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ನೀರು ಮತ್ತಷ್ಟು ದುರ್ನಾತ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>