<p>ರಾಮಾಪುರ: ಚಾಮರಾಜನಗರ ಜಿಲ್ಲೆಯ ಮಹಾತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾದ ಮಿನ್ನತ್ತಳ್ಳ ಕೆರೆ (ಯರಂಬಡಿ ಡ್ಯಾಂ) ಹಳ್ಳಹಿಡಿದಿದೆ.<br /> <br /> ಇದು ಯರಂಬಡಿ ಮತ್ತು ಹೂಗ್ಯಂ ಗ್ರಾಮಗಳ ವ್ಯಾಪ್ತಿಯಲ್ಲಿದ್ದು, ಮೂವತ್ತು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಗುಂಡುರಾವ್ ಹಾಗೂ ಶಾಸಕರಾಗಿದ್ದ ರಾಜುಗೌಡ ಪರಿಶ್ರಮ ದಿಂದ ಶಿಲಾನ್ಯಾಸ ನೆರವೇರಿಸ ಲಾಯಿತು. ಇದರ ಮೇಲ್ವಿಚಾರಣೆ ಯನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದೆ.<br /> <br /> ಜಲಾಶಯದ ನಿರ್ಮಾಣ ಕಾರ್ಯ ಮುಗಿದು ದಶಕಗಳೇ ಕಳೆದಿವೆ. 4 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಈ ಯೋಜನೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ಕಾಲುವೆ ಕಾಮಗಾರಿ ಪೂರ್ಣವಾಗಿಲ್ಲ. <br /> <br /> ಇದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ದುಸ್ಥಿತಿ. ಯೋಜನೆ ಯಶಸ್ವಿಯಾಗಿ ಜನರ ಜಮೀನುಗಳಿಗೆ ನೀರು ಹಾಯಿಸಬೇಕಾದರೆ ಮತ್ತೆ ಕೋಟಿ, ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಬಲದಂಡೆ ನಾಲೆ 6 ಕಿ.ಮೀ. ಮತ್ತು ಎಡದಂಡೆ ನಾಲೆ 12 ಕಿ.ಮೀ. ಉದ್ದ ಇದ್ದು ಉಪ ಯೋಗಲ್ಲದೆ ನೀರು ಪೋಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಜನರಿಗೆ ಆಗಿಲ್ಲ. <br /> <br /> ಮೀನುಗಾರಿಕೆಯನ್ನು ಮಾಡಲಾ ಗುತ್ತಿದೆ. ಆದರೆ ಅವರ್ಯಾರು ಈ ವಿಷಯ ಗೊತ್ತಿಲ್ಲವೆಂದು ಸ್ಥಳೀಕರು ಹೇಳುತ್ತಾರೆ.<br /> <br /> ಸ್ಥಳೀಯರಾದ ಗೋವಿಂದೇಗೌಡ, ನಿಂಗೇಗೌಡ, ನೆಲ್ಲೂರು, ಕೂಡ್ಲೂರು ಸುತ್ತಮುತ್ತಲಿನ ಗ್ರಾಮಸ್ಥರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುತ್ತಲಿನ ಪ್ರದೇಶದ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಹಾಗೂ ಜನರ ಕನಸನ್ನು ನನಸಾಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮಾಪುರ: ಚಾಮರಾಜನಗರ ಜಿಲ್ಲೆಯ ಮಹಾತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾದ ಮಿನ್ನತ್ತಳ್ಳ ಕೆರೆ (ಯರಂಬಡಿ ಡ್ಯಾಂ) ಹಳ್ಳಹಿಡಿದಿದೆ.<br /> <br /> ಇದು ಯರಂಬಡಿ ಮತ್ತು ಹೂಗ್ಯಂ ಗ್ರಾಮಗಳ ವ್ಯಾಪ್ತಿಯಲ್ಲಿದ್ದು, ಮೂವತ್ತು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಗುಂಡುರಾವ್ ಹಾಗೂ ಶಾಸಕರಾಗಿದ್ದ ರಾಜುಗೌಡ ಪರಿಶ್ರಮ ದಿಂದ ಶಿಲಾನ್ಯಾಸ ನೆರವೇರಿಸ ಲಾಯಿತು. ಇದರ ಮೇಲ್ವಿಚಾರಣೆ ಯನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದೆ.<br /> <br /> ಜಲಾಶಯದ ನಿರ್ಮಾಣ ಕಾರ್ಯ ಮುಗಿದು ದಶಕಗಳೇ ಕಳೆದಿವೆ. 4 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಈ ಯೋಜನೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ಕಾಲುವೆ ಕಾಮಗಾರಿ ಪೂರ್ಣವಾಗಿಲ್ಲ. <br /> <br /> ಇದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ದುಸ್ಥಿತಿ. ಯೋಜನೆ ಯಶಸ್ವಿಯಾಗಿ ಜನರ ಜಮೀನುಗಳಿಗೆ ನೀರು ಹಾಯಿಸಬೇಕಾದರೆ ಮತ್ತೆ ಕೋಟಿ, ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಬಲದಂಡೆ ನಾಲೆ 6 ಕಿ.ಮೀ. ಮತ್ತು ಎಡದಂಡೆ ನಾಲೆ 12 ಕಿ.ಮೀ. ಉದ್ದ ಇದ್ದು ಉಪ ಯೋಗಲ್ಲದೆ ನೀರು ಪೋಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಜನರಿಗೆ ಆಗಿಲ್ಲ. <br /> <br /> ಮೀನುಗಾರಿಕೆಯನ್ನು ಮಾಡಲಾ ಗುತ್ತಿದೆ. ಆದರೆ ಅವರ್ಯಾರು ಈ ವಿಷಯ ಗೊತ್ತಿಲ್ಲವೆಂದು ಸ್ಥಳೀಕರು ಹೇಳುತ್ತಾರೆ.<br /> <br /> ಸ್ಥಳೀಯರಾದ ಗೋವಿಂದೇಗೌಡ, ನಿಂಗೇಗೌಡ, ನೆಲ್ಲೂರು, ಕೂಡ್ಲೂರು ಸುತ್ತಮುತ್ತಲಿನ ಗ್ರಾಮಸ್ಥರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುತ್ತಲಿನ ಪ್ರದೇಶದ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಹಾಗೂ ಜನರ ಕನಸನ್ನು ನನಸಾಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>