<p>ಮೂಡುಬಿದಿರೆ: `ಹವಿಗನ್ನಡವು ಕೇವಲ ಹವ್ಯಕರಿಗೆ ಸೀಮಿತವಾದ ಭಾಷೆಯಾಗಿರದೇ ಕನ್ನಡದ ಒಂದು ಉಪಭಾಷೆಯಾಗಿದೆ. ಕನ್ನಡಕ್ಕೆ ತೀರಾ ಹತ್ತಿರದ ಸಂಬಂಧ ಹೊಂದಿದೆ~ ಎಂದು ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಹೇಳಿದರು.<br /> <br /> ಕಾಂತಾವರದಲ್ಲಿ ಭಾನುವಾರ ಕನ್ನಡ ಸಂಘದ `ತಿಂಗಳ ನುಡಿನಮನ~ ಕಾರ್ಯಕ್ರಮದಲ್ಲಿ ಅವರು `ಹವಿಗನ್ನಡ ನುಡಿಸಂಸ್ಕೃತಿ ವಿಷಯದ ಕುರಿತು ಉಪನ್ಯಾಸ ನೀಡಿದರು. <br /> <br /> ಶಿಷ್ಟ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲದ ಹಳೆಗನ್ನಡದ ಅನೇಕ ಶಬ್ದ ಸಂಪತ್ತು ಇಂದಿಗೂ ಹವಿಗನ್ನಡದಲ್ಲಿ ಉಳಿಕೊಂಡಿದೆ ಎಂದು ಅವರು ಹೇಳಿದರು.<br /> <br /> ಭಾಷೆಯ ಜತೆಗೆ ಸಂಸ್ಕೃತಿಯ ಆವರಣವೂ ಇರುವುದರಿಂದ ಭಾಷೆ ಬೆಳೆದಂತೆ ಸಂಸ್ಕೃತಿಯೂ ಬೆಳೆಯುತ್ತದೆ. ಇದಕ್ಕಾಗಿ ಸಾಹಿತ್ಯ ರಚನೆಯೂ ಅನಿವಾರ್ಯ. ಈ ನೆಲಯಲ್ಲೆ ಮಹಾಕಾವ್ಯದ ಸಹಿತ ಸಾಹಿತ್ಯದ ಎಲ್ಲಾ ಪ್ರಕಾರಗಳ ರಚನೆಗಳೂ ಹವಿಗನ್ನಡದಲ್ಲಿ ಪ್ರಕಟಣೆಗೊಂಡಿವೆ ಎಂದರು.<br /> <br /> ಕನ್ನಡದ ವಿಭಿನ್ನ ಉಪಭಾಷೆ ಸಂಸ್ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಯಬೇಕಾಗಿದ್ದು ಇವೆಲ್ಲವೂ ಉಗ್ಗೂಡಿದಾಗ ಕನ್ನಡ ಭಾಷೆ, ಸಂಸ್ಕೃತಿ ಶ್ರಿಮಂತಗೊಳ್ಳುತ್ತದೆ ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಉಪಸ್ಥಿತಿಯಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿಠಲ ಬೇಲಾಡಿ, ರಾಮಚಂದ್ರ ಆಚಾರ್ಯ, ಮಂಜುನಾಥ್ ಶೆಟ್ಟಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡುಬಿದಿರೆ: `ಹವಿಗನ್ನಡವು ಕೇವಲ ಹವ್ಯಕರಿಗೆ ಸೀಮಿತವಾದ ಭಾಷೆಯಾಗಿರದೇ ಕನ್ನಡದ ಒಂದು ಉಪಭಾಷೆಯಾಗಿದೆ. ಕನ್ನಡಕ್ಕೆ ತೀರಾ ಹತ್ತಿರದ ಸಂಬಂಧ ಹೊಂದಿದೆ~ ಎಂದು ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಹೇಳಿದರು.<br /> <br /> ಕಾಂತಾವರದಲ್ಲಿ ಭಾನುವಾರ ಕನ್ನಡ ಸಂಘದ `ತಿಂಗಳ ನುಡಿನಮನ~ ಕಾರ್ಯಕ್ರಮದಲ್ಲಿ ಅವರು `ಹವಿಗನ್ನಡ ನುಡಿಸಂಸ್ಕೃತಿ ವಿಷಯದ ಕುರಿತು ಉಪನ್ಯಾಸ ನೀಡಿದರು. <br /> <br /> ಶಿಷ್ಟ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲದ ಹಳೆಗನ್ನಡದ ಅನೇಕ ಶಬ್ದ ಸಂಪತ್ತು ಇಂದಿಗೂ ಹವಿಗನ್ನಡದಲ್ಲಿ ಉಳಿಕೊಂಡಿದೆ ಎಂದು ಅವರು ಹೇಳಿದರು.<br /> <br /> ಭಾಷೆಯ ಜತೆಗೆ ಸಂಸ್ಕೃತಿಯ ಆವರಣವೂ ಇರುವುದರಿಂದ ಭಾಷೆ ಬೆಳೆದಂತೆ ಸಂಸ್ಕೃತಿಯೂ ಬೆಳೆಯುತ್ತದೆ. ಇದಕ್ಕಾಗಿ ಸಾಹಿತ್ಯ ರಚನೆಯೂ ಅನಿವಾರ್ಯ. ಈ ನೆಲಯಲ್ಲೆ ಮಹಾಕಾವ್ಯದ ಸಹಿತ ಸಾಹಿತ್ಯದ ಎಲ್ಲಾ ಪ್ರಕಾರಗಳ ರಚನೆಗಳೂ ಹವಿಗನ್ನಡದಲ್ಲಿ ಪ್ರಕಟಣೆಗೊಂಡಿವೆ ಎಂದರು.<br /> <br /> ಕನ್ನಡದ ವಿಭಿನ್ನ ಉಪಭಾಷೆ ಸಂಸ್ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಯಬೇಕಾಗಿದ್ದು ಇವೆಲ್ಲವೂ ಉಗ್ಗೂಡಿದಾಗ ಕನ್ನಡ ಭಾಷೆ, ಸಂಸ್ಕೃತಿ ಶ್ರಿಮಂತಗೊಳ್ಳುತ್ತದೆ ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಉಪಸ್ಥಿತಿಯಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿಠಲ ಬೇಲಾಡಿ, ರಾಮಚಂದ್ರ ಆಚಾರ್ಯ, ಮಂಜುನಾಥ್ ಶೆಟ್ಟಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>