<p><strong>ಯಾದಗಿರಿ: </strong> ನಗರದಲ್ಲಿ ಉದ್ಯಾನಗಳ ಕೊರತೆ ಕಾಡುವ ಕಾಲವೊಂದಿತ್ತು. ಇದೀಗ ನಗರದ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದ್ದು, ನಗರದಲ್ಲಿ ಉದ್ಯಾನಗಳ ನಿರ್ಮಾಣ ಭರದಿಂದ ನಡೆದಿದೆ.<br /> <br /> ಸಣ್ಣ ಕೆರೆಯಲ್ಲಿನ ಉದ್ಯಾನ ಸಂಪೂರ್ಣ ಸಿದ್ಧವಾಗಿದ್ದು, ಉದ್ಘಾಟನೆಗಾಗಿ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ, ನಗರದ ಜಿಲ್ಲಾ ನ್ಯಾಯಾಲಯ ಸಂಕೀ ರ್ಣದ ಎದುರಿನ ರಸ್ತೆ ವಿಭಜಕದಲ್ಲಿ ಚಿಕ್ಕದಾದ ಮತ್ತೊಂದು ಉದ್ಯಾನ ನಿರ್ಮಾಣವಾಗುತ್ತಿದೆ.<br /> <br /> ರಸ್ತೆ ವಿಸ್ತಾರದ ಸಂದರ್ಭದಲ್ಲಿ ದೊಡ್ಡದಾದ ಬೇವಿನ ಮರಗಳನ್ನು ಕಾಯ್ದುಕೊಳ್ಳಲಾಗಿತ್ತು. ಮರಗಳ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಗಿಡಗಳನ್ನು ಒಳಗಿಟ್ಟು, ರಸ್ತೆ ವಿಭಜಕವನ್ನು ನಿರ್ಮಿಸಲಾಗಿದೆ. ವಿಸ್ತಾರವಾಗಿರುವ ಈ ರಸ್ತೆ ವಿಭಜಕದಲ್ಲಿ ಇದೀಗ ಸುಂದರ ಉದ್ಯಾನ ಮೈದಳೆಯುತ್ತಿದೆ.<br /> <br /> ಉದ್ಯಾನದ ನಿರ್ಮಾಣದ ಕಾಮ ಗಾರಿ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಜಿಲ್ಲಾ ಪಂಚಾ ಯಿತಿ ಕಚೇರಿವರೆಗಿನ ಈ ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನದಲ್ಲಿ ಹುಲ್ಲು ಹಾಸನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹುಲ್ಲು ಹಾಸನ್ನು ತರಿಸಲಾಗಿದ್ದು, ಉದ್ಯಾನದಲ್ಲಿ ನೆಡುವ ಕಾರ್ಯ ಪೂರ್ಣಗೊಂಡಿದೆ.<br /> <br /> ಉದ್ಯಾನಕ್ಕೆ ನೀರು ಪೂರೈಸಲು ಸ್ಪ್ರಿಂಕ್ಲರ್ಗಳನ್ನು ಅಳವಡಿಸಲಾಗಿದ್ದು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನೀರು ಹರಿಸಲಾಗುತ್ತಿದೆ. ಅಲ್ಲದೇ ಹಸಿರು ಹುಲ್ಲಿನ ಮಧ್ಯದಲ್ಲಿ ಸುಂದರ ಹೂವಿನ ಗಿಡಗಳನ್ನು ನೆಡುವ ಕಾರ್ಯವೂ ಆರಂಭವಾಗಿದೆ.<br /> <br /> ಈ ರಸ್ತೆ ವಿಭಜಕಕ್ಕೆ ಬ್ಯಾರಿಕೇಡ್ ಹಾಕಲಾಗಿದ್ದು, ಬಿಡಾಡಿ ದನಗಳು, ಪ್ರಾಣಿಗಳಿಂದ ರಕ್ಷಣೆ ಒದಗಿಸಲಾಗಿದೆ. ದೊಡ್ಡದಾದ ಬೇವಿನ ಮರಗಳ ಕೆಳಗೆ, ಸುಂದರ ಹುಲ್ಲು ಹಾಸಿನ ಉದ್ಯಾನವು ಈಗಿನಿಂದಲೇ ಜನರ ಗಮನ ಸೆಳೆಯುತ್ತಿದೆ.<br /> <br /> ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಜಿಲ್ಲಾ ನ್ಯಾಯಾಲಯಸಂಕೀರ್ಣ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ವಿವಿಧ ಬ್ಯಾಂಕ್ ಶಾಖೆಗಳು ಇರುವ ಈ ಪ್ರದೇಶದಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಜನರಿಗೆ ಕುಳಿತುಕೊಳ್ಳುವುದಕ್ಕೆ ಫುಟ್ಪಾತೇ ಗತಿ ಎನ್ನುವಂತಾಗಿತ್ತು. ಇದೀಗ ಈ ಉದ್ಯಾನ ನಿರ್ಮಾಣದಿಂದ ಜನರ ಸಮಸ್ಯೆ ನಿವಾರಣೆ ಆಗಲಿದೆ ಎಂಬುದು ನಾಗರಿಕರ ಆಶಯ.<br /> <br /> ನಗರದಲ್ಲಿ ಈಗಾಗಲೇ ಮಹಾತ್ಮಗಾಂಧಿ ಉದ್ಯಾನ, ಸಣ್ಣ ಕೆರೆಯ ಉದ್ಯಾನಗಳು ಪೂರ್ಣಗೊಂಡಿವೆ. ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನವೊಂದು ಇವುಗಳ ಸಾಲಿಗೆ ಸೇರಿದೆ. ಇದರಿಂದಾಗಿ ಬಿಸಿಲು ನಾಡಿನಲ್ಲಿ ಹಸಿರು ಕಂಗೊಳಿಸುತ್ತಿದೆ. ನಗರದ ನಾಗರಿಕರನ್ನು ಆಕರ್ಷಿಸುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong> ನಗರದಲ್ಲಿ ಉದ್ಯಾನಗಳ ಕೊರತೆ ಕಾಡುವ ಕಾಲವೊಂದಿತ್ತು. ಇದೀಗ ನಗರದ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದ್ದು, ನಗರದಲ್ಲಿ ಉದ್ಯಾನಗಳ ನಿರ್ಮಾಣ ಭರದಿಂದ ನಡೆದಿದೆ.<br /> <br /> ಸಣ್ಣ ಕೆರೆಯಲ್ಲಿನ ಉದ್ಯಾನ ಸಂಪೂರ್ಣ ಸಿದ್ಧವಾಗಿದ್ದು, ಉದ್ಘಾಟನೆಗಾಗಿ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ, ನಗರದ ಜಿಲ್ಲಾ ನ್ಯಾಯಾಲಯ ಸಂಕೀ ರ್ಣದ ಎದುರಿನ ರಸ್ತೆ ವಿಭಜಕದಲ್ಲಿ ಚಿಕ್ಕದಾದ ಮತ್ತೊಂದು ಉದ್ಯಾನ ನಿರ್ಮಾಣವಾಗುತ್ತಿದೆ.<br /> <br /> ರಸ್ತೆ ವಿಸ್ತಾರದ ಸಂದರ್ಭದಲ್ಲಿ ದೊಡ್ಡದಾದ ಬೇವಿನ ಮರಗಳನ್ನು ಕಾಯ್ದುಕೊಳ್ಳಲಾಗಿತ್ತು. ಮರಗಳ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಗಿಡಗಳನ್ನು ಒಳಗಿಟ್ಟು, ರಸ್ತೆ ವಿಭಜಕವನ್ನು ನಿರ್ಮಿಸಲಾಗಿದೆ. ವಿಸ್ತಾರವಾಗಿರುವ ಈ ರಸ್ತೆ ವಿಭಜಕದಲ್ಲಿ ಇದೀಗ ಸುಂದರ ಉದ್ಯಾನ ಮೈದಳೆಯುತ್ತಿದೆ.<br /> <br /> ಉದ್ಯಾನದ ನಿರ್ಮಾಣದ ಕಾಮ ಗಾರಿ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಜಿಲ್ಲಾ ಪಂಚಾ ಯಿತಿ ಕಚೇರಿವರೆಗಿನ ಈ ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನದಲ್ಲಿ ಹುಲ್ಲು ಹಾಸನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹುಲ್ಲು ಹಾಸನ್ನು ತರಿಸಲಾಗಿದ್ದು, ಉದ್ಯಾನದಲ್ಲಿ ನೆಡುವ ಕಾರ್ಯ ಪೂರ್ಣಗೊಂಡಿದೆ.<br /> <br /> ಉದ್ಯಾನಕ್ಕೆ ನೀರು ಪೂರೈಸಲು ಸ್ಪ್ರಿಂಕ್ಲರ್ಗಳನ್ನು ಅಳವಡಿಸಲಾಗಿದ್ದು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನೀರು ಹರಿಸಲಾಗುತ್ತಿದೆ. ಅಲ್ಲದೇ ಹಸಿರು ಹುಲ್ಲಿನ ಮಧ್ಯದಲ್ಲಿ ಸುಂದರ ಹೂವಿನ ಗಿಡಗಳನ್ನು ನೆಡುವ ಕಾರ್ಯವೂ ಆರಂಭವಾಗಿದೆ.<br /> <br /> ಈ ರಸ್ತೆ ವಿಭಜಕಕ್ಕೆ ಬ್ಯಾರಿಕೇಡ್ ಹಾಕಲಾಗಿದ್ದು, ಬಿಡಾಡಿ ದನಗಳು, ಪ್ರಾಣಿಗಳಿಂದ ರಕ್ಷಣೆ ಒದಗಿಸಲಾಗಿದೆ. ದೊಡ್ಡದಾದ ಬೇವಿನ ಮರಗಳ ಕೆಳಗೆ, ಸುಂದರ ಹುಲ್ಲು ಹಾಸಿನ ಉದ್ಯಾನವು ಈಗಿನಿಂದಲೇ ಜನರ ಗಮನ ಸೆಳೆಯುತ್ತಿದೆ.<br /> <br /> ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಜಿಲ್ಲಾ ನ್ಯಾಯಾಲಯಸಂಕೀರ್ಣ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ವಿವಿಧ ಬ್ಯಾಂಕ್ ಶಾಖೆಗಳು ಇರುವ ಈ ಪ್ರದೇಶದಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಜನರಿಗೆ ಕುಳಿತುಕೊಳ್ಳುವುದಕ್ಕೆ ಫುಟ್ಪಾತೇ ಗತಿ ಎನ್ನುವಂತಾಗಿತ್ತು. ಇದೀಗ ಈ ಉದ್ಯಾನ ನಿರ್ಮಾಣದಿಂದ ಜನರ ಸಮಸ್ಯೆ ನಿವಾರಣೆ ಆಗಲಿದೆ ಎಂಬುದು ನಾಗರಿಕರ ಆಶಯ.<br /> <br /> ನಗರದಲ್ಲಿ ಈಗಾಗಲೇ ಮಹಾತ್ಮಗಾಂಧಿ ಉದ್ಯಾನ, ಸಣ್ಣ ಕೆರೆಯ ಉದ್ಯಾನಗಳು ಪೂರ್ಣಗೊಂಡಿವೆ. ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನವೊಂದು ಇವುಗಳ ಸಾಲಿಗೆ ಸೇರಿದೆ. ಇದರಿಂದಾಗಿ ಬಿಸಿಲು ನಾಡಿನಲ್ಲಿ ಹಸಿರು ಕಂಗೊಳಿಸುತ್ತಿದೆ. ನಗರದ ನಾಗರಿಕರನ್ನು ಆಕರ್ಷಿಸುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>