<p>ಹಿರಿಯ ನಾಗರಿಕರು ಸಾರಿಗೆ ಸಂಸ್ಥೆಗಳಲ್ಲಿ ರಿಯಾಯ್ತಿ ಪಡೆಯಲು ವಯಸ್ಸು 65 ತುಂಬಿರಬೇಕು. ಇತರ ಕೆಲವೆಡೆ ವಯಸ್ಸು 60 ವರ್ಷ ತುಂಬಿದರೆ ಸಾಕಾಗುತ್ತದೆ. <br /> ರಿಯಾಯ್ತಿ ವಯಸ್ಸು ಇಳಿಸಲು ಇವಕ್ಕೆ ಕಷ್ಟ. ಯಾಕೆಂದರೆ ವರ್ಷಕ್ಕೆ ಕೋಟಿಗಟ್ಟಲೆ ಲಾಭ ಗಳಿಸಿದರೂ ಇವು (ಕೆಎಸ್ಆರ್ಟಿಸಿ, ಬಿಎಂಟಿಸಿ) ಬಡ ಸಂಸ್ಥೆಗಳು. ಅಲ್ಲವೇ?<br /> <br /> ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸಲು ಸರ್ಕಾರದ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಉಪಯೋಗವಾಗುವುದಿಲ್ಲ. <br /> <br /> ಸಂಸ್ಥೆಯವರು ನೀಡುವ ಗುರುತಿನ ಚೀಟಿಗಳೇ ಆಗಬೇಕು. ಈ ಚೀಟಿಗಳನ್ನು ಪಡೆಯಲು ಹಿರಿಯ ನಾಗರಿಕರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಸಂಸ್ಥೆಯ ಕೌಂಟರ್ಗೆ ತೆರಳಬೇಕು, ನಗರದ ಇತರ ದೊಡ್ಡ ಬಸ್ ನಿಲ್ದಾಣಗಳಲ್ಲಿ (ಉದಾ: ಶಿವಾಜಿನಗರ, ಯಶವಂತಪುರ) ಕೂಡ ಈ ಸೌಲಭ್ಯ ಇರುವುದಿಲ್ಲ. <br /> <br /> ಹಿರಿಯ ನಾಗರಿಕರು ಪಡುವ `ಬವಣೆ~ ಸಾರಿಗೆ ಸಂಸ್ಥೆಯವರಿಗೆ ಅರ್ಥವಾಗುವುದಿಲ್ಲ. ಹಾಗೆಯೇ ಹಿರಿಯ ನಾಗರಿಕರ ಇಲಾಖೆಗೂ.ಇದಕ್ಕೆ ಪರಿಹಾರ ಎಂದರೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಗುರುತಿನ ಚೀಟಿಗಳನ್ನು ಮಾನ್ಯ ಮಾಡಲಿ ಅಥವಾ ಎಲ್ಲಾ ಬಡಾವಣೆಗಳಲ್ಲಿನ ದೊಡ್ಡ ಬಸ್ ನಿಲ್ದಾಣಗಳಲ್ಲಿ <br /> <br /> (ಉದಾ: ಜಯನಗರ, ಶಿವಾಜಿನಗರ, ಗಂಗಾನಗರ) ಈ ಗುರುತಿನ ಚೀಟಿಗಳನ್ನು ನೀಡಲಿ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗಿ ಬರುವ `ಬವಣೆ~ ಯನ್ನು ತಪ್ಪಿಸಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯ ನಾಗರಿಕರು ಸಾರಿಗೆ ಸಂಸ್ಥೆಗಳಲ್ಲಿ ರಿಯಾಯ್ತಿ ಪಡೆಯಲು ವಯಸ್ಸು 65 ತುಂಬಿರಬೇಕು. ಇತರ ಕೆಲವೆಡೆ ವಯಸ್ಸು 60 ವರ್ಷ ತುಂಬಿದರೆ ಸಾಕಾಗುತ್ತದೆ. <br /> ರಿಯಾಯ್ತಿ ವಯಸ್ಸು ಇಳಿಸಲು ಇವಕ್ಕೆ ಕಷ್ಟ. ಯಾಕೆಂದರೆ ವರ್ಷಕ್ಕೆ ಕೋಟಿಗಟ್ಟಲೆ ಲಾಭ ಗಳಿಸಿದರೂ ಇವು (ಕೆಎಸ್ಆರ್ಟಿಸಿ, ಬಿಎಂಟಿಸಿ) ಬಡ ಸಂಸ್ಥೆಗಳು. ಅಲ್ಲವೇ?<br /> <br /> ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸಲು ಸರ್ಕಾರದ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಉಪಯೋಗವಾಗುವುದಿಲ್ಲ. <br /> <br /> ಸಂಸ್ಥೆಯವರು ನೀಡುವ ಗುರುತಿನ ಚೀಟಿಗಳೇ ಆಗಬೇಕು. ಈ ಚೀಟಿಗಳನ್ನು ಪಡೆಯಲು ಹಿರಿಯ ನಾಗರಿಕರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಸಂಸ್ಥೆಯ ಕೌಂಟರ್ಗೆ ತೆರಳಬೇಕು, ನಗರದ ಇತರ ದೊಡ್ಡ ಬಸ್ ನಿಲ್ದಾಣಗಳಲ್ಲಿ (ಉದಾ: ಶಿವಾಜಿನಗರ, ಯಶವಂತಪುರ) ಕೂಡ ಈ ಸೌಲಭ್ಯ ಇರುವುದಿಲ್ಲ. <br /> <br /> ಹಿರಿಯ ನಾಗರಿಕರು ಪಡುವ `ಬವಣೆ~ ಸಾರಿಗೆ ಸಂಸ್ಥೆಯವರಿಗೆ ಅರ್ಥವಾಗುವುದಿಲ್ಲ. ಹಾಗೆಯೇ ಹಿರಿಯ ನಾಗರಿಕರ ಇಲಾಖೆಗೂ.ಇದಕ್ಕೆ ಪರಿಹಾರ ಎಂದರೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಗುರುತಿನ ಚೀಟಿಗಳನ್ನು ಮಾನ್ಯ ಮಾಡಲಿ ಅಥವಾ ಎಲ್ಲಾ ಬಡಾವಣೆಗಳಲ್ಲಿನ ದೊಡ್ಡ ಬಸ್ ನಿಲ್ದಾಣಗಳಲ್ಲಿ <br /> <br /> (ಉದಾ: ಜಯನಗರ, ಶಿವಾಜಿನಗರ, ಗಂಗಾನಗರ) ಈ ಗುರುತಿನ ಚೀಟಿಗಳನ್ನು ನೀಡಲಿ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗಿ ಬರುವ `ಬವಣೆ~ ಯನ್ನು ತಪ್ಪಿಸಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>