<p><strong>ಶಿವಮೊಗ್ಗ:</strong> ಅಧಿಕಾರಿಯೊಬ್ಬರು ಅಂಗನವಾಡಿ ಹುದ್ದೆ ಆಕಾಂಕ್ಷಿ ಯುವತಿಯರಿಗೆ ರಾತ್ರಿ ವೇಳೆ ಮೊಬೈಲ್ಗೆ ಕರೆ ಮಾಡುವುದು ಹಾಗೂ ಅಂಗನವಾಡಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ವಿಷಯಗಳು ಚರ್ಚೆಗೆ ಗ್ರಾಸವಾದವು. <br /> <br /> ನಗರದ ತಾಲ್ಲೂಕು ಪಂಚಾಯ್ತಿ ಕಚೇರಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಸಮಸ್ಯೆ ಬಗ್ಗೆ ತೀವ್ರ ಚರ್ಚೆಗಳಾದವು.<br /> <br /> ಸದಸ್ಯ ನಾಗರಾಜ್ ವಿಷಯ ಪ್ರಸ್ತಾಪಿಸಿ, ಅಂಗನವಾಡಿ ಹುದ್ದೆಗೆ ಅರ್ಜಿ ಹಾಕುವ ಯುವತಿಯರು ಹಾಗೂ ಮಹಿಳೆಯರಿಗೆ ಶಿವಮೊಗ್ಗ ನಗರದ ಸಿಡಿಪಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವಿಷಯ ನಿರ್ವಾಹಕರೊಬ್ಬರು ರಾತ್ರಿ ವೇಳೆ ಕರೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.<br /> <br /> ರಾತ್ರಿ 9.30ರ ನಂತರ ಮಹಿಳೆಯರಿಗೆ ಫೋನ್ ಮಾಡಿ ಮಾತನಾಡುತ್ತಾರೆ. ಇದರ ಅರ್ಥವೇನು? ಕಾರ್ಯ ನಿರ್ವಹಣಾಧಿಕಾರಿ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ‘ಅಧಿಕಾರಿ ರಾತ್ರಿ ವೇಳೆ ಅಂಗನವಾಡಿ ಹುದ್ದೆ ಆಕಾಂಕ್ಷಿ ಮಹಿಳೆಯರಿಗೆ ಫೋನ್ ಮಾಡುವುದು ಗಂಭೀರವಾದ ವಿಷಯ. ಈ ಕುರಿತಂತೆ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ಸಭೆಯಲ್ಲಿದ್ದ ಸಿಡಿಪಿಒಗೆ ಸೂಚಿಸಿದರು.<br /> <br /> ಸಿಡಿಪಿಒ ಮಾತನಾಡಿ, ಆ ಅಧಿಕಾರಿಯ ವಿರುದ್ಧ ಈ ಹಿಂದಿನಿಂದಲೂ ಸಾಕಷ್ಟು ದೂರುಗಳಿವೆ. ಆ ಅಧಿಕಾರಿಯನ್ನು ಆ ಹುದ್ದೆಯಿಂದ ಬೇರೆ ಹುದ್ದೆಗೆ ವರ್ಗ ಮಾಡಲು ತಾವೇ ಕ್ರಮ ಕೈಗೊಳ್ಳಬೇಕು ಎಂದು ಇ.ಒ ಅವರಿಗೆ ಮನವಿ ಮಾಡಿದರು.<br /> <br /> ಅಂತಿಮವಾಗಿ ಆ ಅಧಿಕಾರಿಯನ್ನು ಬೇರೆ ಹುದ್ದೆಗೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.<br /> <br /> <strong>ಖಾರದ ಪುಡಿ ಪ್ಯಾಕೆಟ್ ತಂದ ಸದಸ್ಯೆ</strong><br /> ಸದಸ್ಯೆ ಶಾರದಾ ಅವರು, ಅಂಗನವಾಡಿಗಳಿಗೆ ಸರಬರಾಜಾದ ಖಾರದ ಪುಡಿ ಪ್ಯಾಕೆಟ್ ಹಾಗೂ ಕಳಪೆ ಗುಣಮಟ್ಟದ ಆಹಾರ ಧಾನ್ಯ ಸಭೆಯಲ್ಲಿ ಪ್ರದರ್ಶಿಸಿದರು.<br /> <br /> ತಾಲ್ಲೂಕಿನ ಅಂಗನವಾಡಿಗಳಿಗೆ ಖಾಸಗಿ ಸಂಸ್ಥೆಯೊಂದು ಖಾರದ ಪುಡಿ ಪ್ಯಾಕೆಟ್ ಪೂರೈಕೆ ಮಾಡುತ್ತಿದೆ. ಆದರೆ ಈ ಖಾರದ ಪುಡಿ ಪ್ಯಾಕೆಟ್ ಮೇಲೆ ತಯಾರದ ದಿನಾಂಕ, ಯಾವ ದಿನಾಂಕಕ್ಕೆ ಮುನ್ನ ಉಪಯೋಗಿಸಬೇಕು, ತಯಾರಾಗಿದ್ದು ಎಲ್ಲಿ, ಅವರ ವಿಳಾಸ ಸೇರಿದಂತೆ ಯಾವೊಂದು ವಿವರಗಳು ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.<br /> ಅಂಗನವಾಡಿಗಳಲ್ಲಿ ರವೆಗೆ ಗೋಧಿ ಹಿಟ್ಟು ಮಿಶ್ರಣ ಮಾಡಿ ಪಾಯಸ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ದೂರಿದರು.<br /> <br /> ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಖಾರದ ಪುಡಿ ಪ್ಯಾಕೆಟ್ ಮೇಲೆ ಉತ್ಪಾದನೆಗೆ ಸಂಬಂಧಿಸಿದ ವಿವರವನ್ನು ಕಡ್ಡಾಯವಾಗಿ ಅಚ್ಚು ಹಾಕಿಸಲು ಹಾಗೂ ರವೆಗೆ ಮಾಡಲಾಗುತ್ತಿರುವ ಹಿಟ್ಟು ಮಿಶ್ರಣದ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಶಿಶು ಅಭಿವೃದ್ಧಿಗೆ ಅಧಿಕಾರಿಗೆ ನಿರ್ದೇಶಿಸಿದರು.<br /> <br /> ಸಭೆಯಲ್ಲಿ ಆಸ್ಪತ್ರೆಯಲ್ಲಿನ ಔಷಧ ಕೊರತೆ, ಅಂಗನವಾಡಿ ಕಟ್ಟಡಗಳ ಕಳಪೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತಂತೆ ವಿವರವಾದ ಚರ್ಚೆಗಳು ನಡೆದವು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಉಣ್ಣಾಮಲೈ ದೇಸಿಂಗ್ ವಹಿಸಿದ್ದರು. ಉಪಾಧ್ಯಕ್ಷೆ ಅತೀಯಾ ಬೇಗಂ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಅಧಿಕಾರಿಯೊಬ್ಬರು ಅಂಗನವಾಡಿ ಹುದ್ದೆ ಆಕಾಂಕ್ಷಿ ಯುವತಿಯರಿಗೆ ರಾತ್ರಿ ವೇಳೆ ಮೊಬೈಲ್ಗೆ ಕರೆ ಮಾಡುವುದು ಹಾಗೂ ಅಂಗನವಾಡಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ವಿಷಯಗಳು ಚರ್ಚೆಗೆ ಗ್ರಾಸವಾದವು. <br /> <br /> ನಗರದ ತಾಲ್ಲೂಕು ಪಂಚಾಯ್ತಿ ಕಚೇರಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಸಮಸ್ಯೆ ಬಗ್ಗೆ ತೀವ್ರ ಚರ್ಚೆಗಳಾದವು.<br /> <br /> ಸದಸ್ಯ ನಾಗರಾಜ್ ವಿಷಯ ಪ್ರಸ್ತಾಪಿಸಿ, ಅಂಗನವಾಡಿ ಹುದ್ದೆಗೆ ಅರ್ಜಿ ಹಾಕುವ ಯುವತಿಯರು ಹಾಗೂ ಮಹಿಳೆಯರಿಗೆ ಶಿವಮೊಗ್ಗ ನಗರದ ಸಿಡಿಪಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವಿಷಯ ನಿರ್ವಾಹಕರೊಬ್ಬರು ರಾತ್ರಿ ವೇಳೆ ಕರೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.<br /> <br /> ರಾತ್ರಿ 9.30ರ ನಂತರ ಮಹಿಳೆಯರಿಗೆ ಫೋನ್ ಮಾಡಿ ಮಾತನಾಡುತ್ತಾರೆ. ಇದರ ಅರ್ಥವೇನು? ಕಾರ್ಯ ನಿರ್ವಹಣಾಧಿಕಾರಿ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ‘ಅಧಿಕಾರಿ ರಾತ್ರಿ ವೇಳೆ ಅಂಗನವಾಡಿ ಹುದ್ದೆ ಆಕಾಂಕ್ಷಿ ಮಹಿಳೆಯರಿಗೆ ಫೋನ್ ಮಾಡುವುದು ಗಂಭೀರವಾದ ವಿಷಯ. ಈ ಕುರಿತಂತೆ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ಸಭೆಯಲ್ಲಿದ್ದ ಸಿಡಿಪಿಒಗೆ ಸೂಚಿಸಿದರು.<br /> <br /> ಸಿಡಿಪಿಒ ಮಾತನಾಡಿ, ಆ ಅಧಿಕಾರಿಯ ವಿರುದ್ಧ ಈ ಹಿಂದಿನಿಂದಲೂ ಸಾಕಷ್ಟು ದೂರುಗಳಿವೆ. ಆ ಅಧಿಕಾರಿಯನ್ನು ಆ ಹುದ್ದೆಯಿಂದ ಬೇರೆ ಹುದ್ದೆಗೆ ವರ್ಗ ಮಾಡಲು ತಾವೇ ಕ್ರಮ ಕೈಗೊಳ್ಳಬೇಕು ಎಂದು ಇ.ಒ ಅವರಿಗೆ ಮನವಿ ಮಾಡಿದರು.<br /> <br /> ಅಂತಿಮವಾಗಿ ಆ ಅಧಿಕಾರಿಯನ್ನು ಬೇರೆ ಹುದ್ದೆಗೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.<br /> <br /> <strong>ಖಾರದ ಪುಡಿ ಪ್ಯಾಕೆಟ್ ತಂದ ಸದಸ್ಯೆ</strong><br /> ಸದಸ್ಯೆ ಶಾರದಾ ಅವರು, ಅಂಗನವಾಡಿಗಳಿಗೆ ಸರಬರಾಜಾದ ಖಾರದ ಪುಡಿ ಪ್ಯಾಕೆಟ್ ಹಾಗೂ ಕಳಪೆ ಗುಣಮಟ್ಟದ ಆಹಾರ ಧಾನ್ಯ ಸಭೆಯಲ್ಲಿ ಪ್ರದರ್ಶಿಸಿದರು.<br /> <br /> ತಾಲ್ಲೂಕಿನ ಅಂಗನವಾಡಿಗಳಿಗೆ ಖಾಸಗಿ ಸಂಸ್ಥೆಯೊಂದು ಖಾರದ ಪುಡಿ ಪ್ಯಾಕೆಟ್ ಪೂರೈಕೆ ಮಾಡುತ್ತಿದೆ. ಆದರೆ ಈ ಖಾರದ ಪುಡಿ ಪ್ಯಾಕೆಟ್ ಮೇಲೆ ತಯಾರದ ದಿನಾಂಕ, ಯಾವ ದಿನಾಂಕಕ್ಕೆ ಮುನ್ನ ಉಪಯೋಗಿಸಬೇಕು, ತಯಾರಾಗಿದ್ದು ಎಲ್ಲಿ, ಅವರ ವಿಳಾಸ ಸೇರಿದಂತೆ ಯಾವೊಂದು ವಿವರಗಳು ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.<br /> ಅಂಗನವಾಡಿಗಳಲ್ಲಿ ರವೆಗೆ ಗೋಧಿ ಹಿಟ್ಟು ಮಿಶ್ರಣ ಮಾಡಿ ಪಾಯಸ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ದೂರಿದರು.<br /> <br /> ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಖಾರದ ಪುಡಿ ಪ್ಯಾಕೆಟ್ ಮೇಲೆ ಉತ್ಪಾದನೆಗೆ ಸಂಬಂಧಿಸಿದ ವಿವರವನ್ನು ಕಡ್ಡಾಯವಾಗಿ ಅಚ್ಚು ಹಾಕಿಸಲು ಹಾಗೂ ರವೆಗೆ ಮಾಡಲಾಗುತ್ತಿರುವ ಹಿಟ್ಟು ಮಿಶ್ರಣದ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಶಿಶು ಅಭಿವೃದ್ಧಿಗೆ ಅಧಿಕಾರಿಗೆ ನಿರ್ದೇಶಿಸಿದರು.<br /> <br /> ಸಭೆಯಲ್ಲಿ ಆಸ್ಪತ್ರೆಯಲ್ಲಿನ ಔಷಧ ಕೊರತೆ, ಅಂಗನವಾಡಿ ಕಟ್ಟಡಗಳ ಕಳಪೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತಂತೆ ವಿವರವಾದ ಚರ್ಚೆಗಳು ನಡೆದವು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಉಣ್ಣಾಮಲೈ ದೇಸಿಂಗ್ ವಹಿಸಿದ್ದರು. ಉಪಾಧ್ಯಕ್ಷೆ ಅತೀಯಾ ಬೇಗಂ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>