<p><strong>ಬೆಂಗಳೂರು:</strong> ‘ಕೆಲವರು ಹೆಣ್ಣನ್ನು ಮತ್ಸರ ಹಾಗೂ ಸೌಂದರ್ಯದ ಸಂಕೇತದಂತೆ ಕಂಡರು. ಆದರೆ, ನಿಜ ಅರ್ಥದಲ್ಲಿ ಹೆಣ್ಣು ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಕಲಾವಿಮರ್ಶಕಿ ಡಾ.ಚೂಡಾಮಣಿ ನಂದಗೋಪಾಲ್ ಅಭಿಪ್ರಾಯಪಟ್ಟರು.<br /> <br /> ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಐವತ್ತು ಕಲಾವಿದೆಯರ ಚಿತ್ರಕಲಾ ಪ್ರದರ್ಶನ ‘ಆಕಾಂಕ್ಷ’ ದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ‘ಹೆಣ್ತನವೆನ್ನುವುದು ಸಕಾರಾತ್ಮಕ ಚೈತನ್ಯ. ಸಕಾರಾತ್ಮಕವಾಗಿ ಅಭಿವ್ಯಕ್ತಗೊಳ್ಳುವುದೇ ಮಹಿಳಾ ದಿನಾಚರಣೆ. ಕಲೆಯ ಮೂಲಕ ವ್ಯಕ್ತಗೊಳ್ಳುವ ಹೆಣ್ಣಿನ ಶ್ರದ್ಧೆ ಸದಾ ಗೌರವಕ್ಕೆ ಪಾತ್ರವಾಗುತ್ತದೆ’ ಎಂದರು.<br /> <br /> ‘ಅನಿವಾರ್ಯದ ಸಂದರ್ಭದಲ್ಲಿ ಹೆಣ್ಣು ಚೈತನ್ಯ ಮೂರ್ತಿಯಾಗುತ್ತಾಳೆ. ಇದನ್ನೆ ಪುರಾಣದಲ್ಲಿ ಅವತಾರ ಎನ್ನಲಾಗಿದೆ. ಸಮಾಜವನ್ನು ಉಳಿಸಿ, ಬೆಳೆಸುವ ಬದ್ಧತೆಯೇ ‘ಮಹಿಷಾಸುರ ಮರ್ಧಿನಿ’ ಪರಿಕಲ್ಪನೆ’ ಎಂದರು.<br /> <br /> ಪ್ರಸೂತಿ ತಜ್ಞೆ ಡಾ.ಜಯಾ ನರೇಂದ್ರ, ‘ಕಲೆಗೆ ಚಿಕಿತ್ಸಕ ಗುಣವಿದ್ದು, ಇದು ಹೆಣ್ಣಿನ ಆತ್ಮಬಲವನ್ನು ಹೆಚ್ಚಿಸುತ್ತದೆ’ ಎಂದರು. ಇದೇ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಪಾಲ್ಗೊಂಡ 50 ಕಲಾವಿದೆಯರನ್ನು ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕೆಲವರು ಹೆಣ್ಣನ್ನು ಮತ್ಸರ ಹಾಗೂ ಸೌಂದರ್ಯದ ಸಂಕೇತದಂತೆ ಕಂಡರು. ಆದರೆ, ನಿಜ ಅರ್ಥದಲ್ಲಿ ಹೆಣ್ಣು ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಕಲಾವಿಮರ್ಶಕಿ ಡಾ.ಚೂಡಾಮಣಿ ನಂದಗೋಪಾಲ್ ಅಭಿಪ್ರಾಯಪಟ್ಟರು.<br /> <br /> ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಐವತ್ತು ಕಲಾವಿದೆಯರ ಚಿತ್ರಕಲಾ ಪ್ರದರ್ಶನ ‘ಆಕಾಂಕ್ಷ’ ದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ‘ಹೆಣ್ತನವೆನ್ನುವುದು ಸಕಾರಾತ್ಮಕ ಚೈತನ್ಯ. ಸಕಾರಾತ್ಮಕವಾಗಿ ಅಭಿವ್ಯಕ್ತಗೊಳ್ಳುವುದೇ ಮಹಿಳಾ ದಿನಾಚರಣೆ. ಕಲೆಯ ಮೂಲಕ ವ್ಯಕ್ತಗೊಳ್ಳುವ ಹೆಣ್ಣಿನ ಶ್ರದ್ಧೆ ಸದಾ ಗೌರವಕ್ಕೆ ಪಾತ್ರವಾಗುತ್ತದೆ’ ಎಂದರು.<br /> <br /> ‘ಅನಿವಾರ್ಯದ ಸಂದರ್ಭದಲ್ಲಿ ಹೆಣ್ಣು ಚೈತನ್ಯ ಮೂರ್ತಿಯಾಗುತ್ತಾಳೆ. ಇದನ್ನೆ ಪುರಾಣದಲ್ಲಿ ಅವತಾರ ಎನ್ನಲಾಗಿದೆ. ಸಮಾಜವನ್ನು ಉಳಿಸಿ, ಬೆಳೆಸುವ ಬದ್ಧತೆಯೇ ‘ಮಹಿಷಾಸುರ ಮರ್ಧಿನಿ’ ಪರಿಕಲ್ಪನೆ’ ಎಂದರು.<br /> <br /> ಪ್ರಸೂತಿ ತಜ್ಞೆ ಡಾ.ಜಯಾ ನರೇಂದ್ರ, ‘ಕಲೆಗೆ ಚಿಕಿತ್ಸಕ ಗುಣವಿದ್ದು, ಇದು ಹೆಣ್ಣಿನ ಆತ್ಮಬಲವನ್ನು ಹೆಚ್ಚಿಸುತ್ತದೆ’ ಎಂದರು. ಇದೇ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಪಾಲ್ಗೊಂಡ 50 ಕಲಾವಿದೆಯರನ್ನು ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>