<p><strong>ನವದೆಹಲಿ (ಪಿಟಿಐ): </strong>`ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ವಿರೂಪಗೊಳಿಸಿವೆ~ ಎಂದು ಗೃಹ ಸಚಿವ ಪಿ. ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.<br /> <br /> ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ ಉತ್ತರವನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದ್ದು ಇದು ಅವರಿಗೆ ಆಘಾತ ನೀಡಿದೆ~ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.<br /> <br /> `ಗೃಹ ಸಚಿವರು ವಾಸ್ತವ ಅಂಶಗಳನ್ನೇ ಹೇಳಿದ್ದು ಯಾರನ್ನೂ ಅಪಹಾಸ್ಯ ಮಾಡುವ ಉದ್ದೇಶ ಅವರಿಗಿರಲಿಲ್ಲ. ನೀವು ಅವರ ಸಂವಾದ ಕಾರ್ಯಕ್ರಮವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ~ ಎಂದು ಹೇಳಿಕೆ ತಿಳಿಸಿದೆ.<br /> ರೂ 20 ಕೊಟ್ಟು ಕೋನ್ ಐಸ್ಕ್ರೀಂ ಖರೀದಿಸುವ ಜನರು ಅಕ್ಕಿ ಅಥವಾ ಗೋಧಿ ಬೆಲೆ ಒಂದು ರೂಪಾಯಿಯಷ್ಟು ಜಾಸ್ತಿಯಾದರೆ ಪ್ರತಿಭಟನೆ ನಡೆಸುವುದೇಕೆ? ಎಂದು ಚಿದಂಬರಂ ಸಂವಾದದಲ್ಲಿ ಹೇಳಿದ್ದರು ಎಂಬ ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೇಳಿಕೆ ನೀಡಿದೆ.<br /> <br /> `ಆದರೆ ಚಿದಂಬರಂ ಅವರು ಹೇಳಿಕೆಯ ವೇಳೆ `ನಾವು~ ಎಂಬ ಪದವನ್ನು ಬಳಸಿದ್ದರೇ ಹೊರತು `ಅವರು~ ಏಕೆ ಪ್ರತಿಭಟನೆ ನಡೆಸುತ್ತಾರೆ ಎಂದು ಕೇಳಲಿಲ್ಲ. ಕೋನ್ ಐಸ್ಕ್ರೀಂಗೆ 20 ರೂ ಕೊಡಲು ಮುಂದಾಗುವ ನಾವು ಅಕ್ಕಿ ಅಥವಾ ಗೋಧಿಗೆ ಕಿಲೋ ಗ್ರಾಂ ಒಂದಕ್ಕೆ ಒಂದು ರೂ ಕೂಡ ಹೆಚ್ಚು ನೀಡುವುದಿಲ್ಲ~ ಎಂದು ಅವರು ಹೇಳಿರುವುದಾಗಿ ಸ್ಪಷ್ಟಪಡಿಸಿದೆ. <br /> <br /> <strong>ಜೆಡಿಯು ಟೀಕೆ:</strong> ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುವವರ ಬಾಯಿಂದ `ಆಕಸ್ಮಿಕ~ವಾಗಿ ಸತ್ಯ ಹೊರಬಂತು~ ಎಂದು ಗೃಹ ಸಚಿವ ಚಿದಂಬರಂ ಅವರ ವಿವಾದಾತ್ಮಕ ಹೇಳಿಕೆಗೆ ಜೆಡಿಯು ಕಟು ಟೀಕೆ ವ್ಯಕ್ತಪಡಿಸಿದೆ.<br /> `ಚಿದಂಬರಂ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಅವರು ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುತ್ತಿರುವುದರಿಂದ ಐಸ್ಕ್ರೀಂನ ಉದಾಹರಣೆಯನ್ನು ನೀಡಿದ್ದಾರೆ. <br /> <br /> ನಮ್ಮ ದೇಶದಲ್ಲಿ ಎಷ್ಟು ಮಂದಿ ಬಡವರು ಐಸ್ಕ್ರೀಂ ತಿನ್ನುತ್ತಾರೆ? ಮಾರುಕಟ್ಟೆ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವ ವೇಳೆ ಸಣ್ಣ ಸತ್ಯವೊಂದು ಆಕಸ್ಮಿಕವಾಗಿ ಅವರ ಬಾಯಿಂದ ಹೊರಬಿತ್ತು~ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಪ್ರತಿಕ್ರಿಯಿಸಿದರು.<br /> <br /> <strong>ಎನ್ಸಿಪಿ ತರಾಟೆ: </strong>ಅಕ್ಕಿ ಮತ್ತು ಗೋಧಿ ಬೆಲೆ ಏರಿಕೆ ವಿರುದ್ಧ ದೇಶದ ಮಧ್ಯಮ ವರ್ಗದ ಜನ ನಡೆಸುತ್ತಿರುವ ಪ್ರತಿಭಟನೆಗೆ ಟೀಕೆ ವ್ಯಕ್ತಪಡಿಸಿದ ಗೃಹ ಸಚಿವ ಪಿ. ಚಿದಂಬರಂ ಅವರ ಹೇಳಿಕೆಗೆ ಎನ್ಸಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> ವಿದ್ಯಾವಂತ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಯನ್ನು ನೀಡಿರುವುದು ಅನಿರೀಕ್ಷಿತ ಮಾತ್ರವಲ್ಲ, ವಿರೋಧಾಭಾಸದಿಂದ ಕೂಡಿದೆ. ದೇಶದ ಸಾಮಾನ್ಯ ಪ್ರಜೆ ಕೂಡ ಚಿದಂಬರಂ ಅವರಷ್ಟೇ ಪ್ರಜ್ಞಾವಂತ ಎಂದು ನನಗನಿಸುತ್ತದೆ~ ಎಂದು ಎನ್ಸಿಪಿ ನಾಯಕ ಹಾಗೂ ವಕ್ತಾರ ಡಿ. ಪಿ. ತ್ರಿಪಾಠಿ ಎಂದು ಕುಟುಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>`ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ವಿರೂಪಗೊಳಿಸಿವೆ~ ಎಂದು ಗೃಹ ಸಚಿವ ಪಿ. ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.<br /> <br /> ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ ಉತ್ತರವನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದ್ದು ಇದು ಅವರಿಗೆ ಆಘಾತ ನೀಡಿದೆ~ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.<br /> <br /> `ಗೃಹ ಸಚಿವರು ವಾಸ್ತವ ಅಂಶಗಳನ್ನೇ ಹೇಳಿದ್ದು ಯಾರನ್ನೂ ಅಪಹಾಸ್ಯ ಮಾಡುವ ಉದ್ದೇಶ ಅವರಿಗಿರಲಿಲ್ಲ. ನೀವು ಅವರ ಸಂವಾದ ಕಾರ್ಯಕ್ರಮವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ~ ಎಂದು ಹೇಳಿಕೆ ತಿಳಿಸಿದೆ.<br /> ರೂ 20 ಕೊಟ್ಟು ಕೋನ್ ಐಸ್ಕ್ರೀಂ ಖರೀದಿಸುವ ಜನರು ಅಕ್ಕಿ ಅಥವಾ ಗೋಧಿ ಬೆಲೆ ಒಂದು ರೂಪಾಯಿಯಷ್ಟು ಜಾಸ್ತಿಯಾದರೆ ಪ್ರತಿಭಟನೆ ನಡೆಸುವುದೇಕೆ? ಎಂದು ಚಿದಂಬರಂ ಸಂವಾದದಲ್ಲಿ ಹೇಳಿದ್ದರು ಎಂಬ ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೇಳಿಕೆ ನೀಡಿದೆ.<br /> <br /> `ಆದರೆ ಚಿದಂಬರಂ ಅವರು ಹೇಳಿಕೆಯ ವೇಳೆ `ನಾವು~ ಎಂಬ ಪದವನ್ನು ಬಳಸಿದ್ದರೇ ಹೊರತು `ಅವರು~ ಏಕೆ ಪ್ರತಿಭಟನೆ ನಡೆಸುತ್ತಾರೆ ಎಂದು ಕೇಳಲಿಲ್ಲ. ಕೋನ್ ಐಸ್ಕ್ರೀಂಗೆ 20 ರೂ ಕೊಡಲು ಮುಂದಾಗುವ ನಾವು ಅಕ್ಕಿ ಅಥವಾ ಗೋಧಿಗೆ ಕಿಲೋ ಗ್ರಾಂ ಒಂದಕ್ಕೆ ಒಂದು ರೂ ಕೂಡ ಹೆಚ್ಚು ನೀಡುವುದಿಲ್ಲ~ ಎಂದು ಅವರು ಹೇಳಿರುವುದಾಗಿ ಸ್ಪಷ್ಟಪಡಿಸಿದೆ. <br /> <br /> <strong>ಜೆಡಿಯು ಟೀಕೆ:</strong> ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುವವರ ಬಾಯಿಂದ `ಆಕಸ್ಮಿಕ~ವಾಗಿ ಸತ್ಯ ಹೊರಬಂತು~ ಎಂದು ಗೃಹ ಸಚಿವ ಚಿದಂಬರಂ ಅವರ ವಿವಾದಾತ್ಮಕ ಹೇಳಿಕೆಗೆ ಜೆಡಿಯು ಕಟು ಟೀಕೆ ವ್ಯಕ್ತಪಡಿಸಿದೆ.<br /> `ಚಿದಂಬರಂ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಅವರು ಮಾರುಕಟ್ಟೆ ಶಕ್ತಿಗಳನ್ನು ಬೆಂಬಲಿಸುತ್ತಿರುವುದರಿಂದ ಐಸ್ಕ್ರೀಂನ ಉದಾಹರಣೆಯನ್ನು ನೀಡಿದ್ದಾರೆ. <br /> <br /> ನಮ್ಮ ದೇಶದಲ್ಲಿ ಎಷ್ಟು ಮಂದಿ ಬಡವರು ಐಸ್ಕ್ರೀಂ ತಿನ್ನುತ್ತಾರೆ? ಮಾರುಕಟ್ಟೆ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವ ವೇಳೆ ಸಣ್ಣ ಸತ್ಯವೊಂದು ಆಕಸ್ಮಿಕವಾಗಿ ಅವರ ಬಾಯಿಂದ ಹೊರಬಿತ್ತು~ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಪ್ರತಿಕ್ರಿಯಿಸಿದರು.<br /> <br /> <strong>ಎನ್ಸಿಪಿ ತರಾಟೆ: </strong>ಅಕ್ಕಿ ಮತ್ತು ಗೋಧಿ ಬೆಲೆ ಏರಿಕೆ ವಿರುದ್ಧ ದೇಶದ ಮಧ್ಯಮ ವರ್ಗದ ಜನ ನಡೆಸುತ್ತಿರುವ ಪ್ರತಿಭಟನೆಗೆ ಟೀಕೆ ವ್ಯಕ್ತಪಡಿಸಿದ ಗೃಹ ಸಚಿವ ಪಿ. ಚಿದಂಬರಂ ಅವರ ಹೇಳಿಕೆಗೆ ಎನ್ಸಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> ವಿದ್ಯಾವಂತ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಯನ್ನು ನೀಡಿರುವುದು ಅನಿರೀಕ್ಷಿತ ಮಾತ್ರವಲ್ಲ, ವಿರೋಧಾಭಾಸದಿಂದ ಕೂಡಿದೆ. ದೇಶದ ಸಾಮಾನ್ಯ ಪ್ರಜೆ ಕೂಡ ಚಿದಂಬರಂ ಅವರಷ್ಟೇ ಪ್ರಜ್ಞಾವಂತ ಎಂದು ನನಗನಿಸುತ್ತದೆ~ ಎಂದು ಎನ್ಸಿಪಿ ನಾಯಕ ಹಾಗೂ ವಕ್ತಾರ ಡಿ. ಪಿ. ತ್ರಿಪಾಠಿ ಎಂದು ಕುಟುಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>