<p>ಚಿತ್ರನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಕ್ಷೇತ್ರದ ಗಣ್ಯರಾದ ಅಂಬರೀಷ್ ಅವರು `ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ-ಹೆಂಡತಿಗೆ ಹೊಡೆಯುವುದು, ಮಗ-ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ. <br /> <br /> ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ~ ಎಂದು ಗಂಡು-ಹೆಣ್ಣನ್ನು ಹೊಡೆಯುವುದು ಪೌರುಷದ ಸಂಕೇತವೆಂಬಂತೆ ಫರ್ಮಾನು ಹೊರಡಿಸಿದ್ದಾರೆ! <br /> <br /> ಹಾಗಿದ್ದರೆ ಹೆಂಡತಿ-ಗಂಡನಿಗೆ ಹೊಡೆಯುವುದು, ಮಗಳು-ಅಪ್ಪನಿಗೆ ಹೊಡೆಯುವುದನ್ನೂ ಅಂಬರೀಷ್ ಅವರು ಸರಿಯೆಂದು, ಶೌರ್ಯದ ಸಂಕೇತವೆಂದು ಒಪ್ಪಿಕೊಳ್ಳುತ್ತಾರೆಯೇ? <br /> <br /> ದರ್ಶನ್ ಅವರ ಅಮಾನವೀಯ ಕ್ರೌರ್ಯವನ್ನು ಒಪ್ಪಿ, ಪ್ರತಿಪಾದಿಸುತ್ತಿರುವ ಅವರ ನಡವಳಿಕೆ ಹಾಗೂ ಹೇಳಿಕೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾದುದು ಎಂಬ ಅರಿವು ಅವರಿಗಿದೆಯೇ? ಹೆಣ್ಣೆಂದರೆ ಹೊಡೆಸಿ-ಬಡಿಸಿಕೊಳ್ಳಲು ಇರುವವಳೆಂಬ ಅವರ ಅನಾಗರಿಕ ತಿಳಿವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದು ನಾವು ಭಾವಿಸುತ್ತೇವೆ.<br /> -<strong> ರೂಪ ಹಾಸನ (ಹಾಸನ), ಸ. ಉಷಾ (ಶಿವಮೊಗ್ಗ), ಶಾರದಾ ಗೋಪಾಲ(ಧಾರವಾಡ), ಡಿ. ನಾಗಲಕ್ಷ್ಮಿ (ಬಳ್ಳಾರಿ), ಪಿ. ಹೇಮಲತ (ಮೈಸೂರು), ಜಿ. ಅನ್ನಪೂರ್ಣ (ಬೆಂಗಳೂರು) </strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಕ್ಷೇತ್ರದ ಗಣ್ಯರಾದ ಅಂಬರೀಷ್ ಅವರು `ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ-ಹೆಂಡತಿಗೆ ಹೊಡೆಯುವುದು, ಮಗ-ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ. <br /> <br /> ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ~ ಎಂದು ಗಂಡು-ಹೆಣ್ಣನ್ನು ಹೊಡೆಯುವುದು ಪೌರುಷದ ಸಂಕೇತವೆಂಬಂತೆ ಫರ್ಮಾನು ಹೊರಡಿಸಿದ್ದಾರೆ! <br /> <br /> ಹಾಗಿದ್ದರೆ ಹೆಂಡತಿ-ಗಂಡನಿಗೆ ಹೊಡೆಯುವುದು, ಮಗಳು-ಅಪ್ಪನಿಗೆ ಹೊಡೆಯುವುದನ್ನೂ ಅಂಬರೀಷ್ ಅವರು ಸರಿಯೆಂದು, ಶೌರ್ಯದ ಸಂಕೇತವೆಂದು ಒಪ್ಪಿಕೊಳ್ಳುತ್ತಾರೆಯೇ? <br /> <br /> ದರ್ಶನ್ ಅವರ ಅಮಾನವೀಯ ಕ್ರೌರ್ಯವನ್ನು ಒಪ್ಪಿ, ಪ್ರತಿಪಾದಿಸುತ್ತಿರುವ ಅವರ ನಡವಳಿಕೆ ಹಾಗೂ ಹೇಳಿಕೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾದುದು ಎಂಬ ಅರಿವು ಅವರಿಗಿದೆಯೇ? ಹೆಣ್ಣೆಂದರೆ ಹೊಡೆಸಿ-ಬಡಿಸಿಕೊಳ್ಳಲು ಇರುವವಳೆಂಬ ಅವರ ಅನಾಗರಿಕ ತಿಳಿವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದು ನಾವು ಭಾವಿಸುತ್ತೇವೆ.<br /> -<strong> ರೂಪ ಹಾಸನ (ಹಾಸನ), ಸ. ಉಷಾ (ಶಿವಮೊಗ್ಗ), ಶಾರದಾ ಗೋಪಾಲ(ಧಾರವಾಡ), ಡಿ. ನಾಗಲಕ್ಷ್ಮಿ (ಬಳ್ಳಾರಿ), ಪಿ. ಹೇಮಲತ (ಮೈಸೂರು), ಜಿ. ಅನ್ನಪೂರ್ಣ (ಬೆಂಗಳೂರು) </strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>