<p>ತುಮರಿ: ಮುಳುಗಡೆಯ ಜನರು ತಮ್ಮ ದ್ವೀಪದ ಸ್ಥಿತಿಯನ್ನು ಕಂಡು ಮರುಕಗೊಳ್ಳುವ ಮನಸ್ಥಿತಿಯಿಂದ ಹೊರಬಂದು ಬದಲಾದ ವರ್ತಮಾನದ ಜತೆ ಅನುಸಂಧಾನ ನಡೆಸುವ ಹೊಸದಾರಿಗಳ ಕಡೆ ಮುಖ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾರ್ಮಿಕವಾಗಿ ನುಡಿದರು.<br /> <br /> ಗೋಪಾಲಗೌಡ ರಂಗಮಂದಿರದಲ್ಲಿ ಹಿನ್ನೀರ ದನಿ ಸಾಮಾಜಿಕ ಸಂಘಟನೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ `ಹಿನ್ನೀರ ಹಬ್ಬ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಕಾಲದ ಜತೆಗೆ ಕ್ರಮಿಸುವುದು ನಮ್ಮ ನಿತ್ಯದ ತುರ್ತಾಗಿದೆ, ಯಾವ ದ್ವೀಪವು ನಿಮ್ಮ ಪಾಲಿಗೆ ಸಂಕಷ್ಟ ಸರಪಳಿಯನ್ನು ಸುತ್ತಿದಿಯೋ ಅದೇ ಪ್ರದೇಶ ಪಟ್ಟಣದ ಮಂದಿಗೆ ಆಕರ್ಷಣೆಯನ್ನು ಹುಟ್ಟಿಸುತ್ತಿದೆ. ಅದನ್ನು ಬಿಡಿಸಿಕೊಳ್ಳುವ ಸವಾಲು ಮಾತ್ರ ನಮ್ಮ ಮುಂದಿದೆ ಎಂದರು.<br /> <br /> ವಿದ್ಯಾವಂತ ಯುವ ಜನತೆ ಹಳ್ಳಿಯಿಂದ ಡೆಲ್ಲಿಯೆಡೆ ಧಾವಿಸುತ್ತಿರುವ ಹೊತ್ತಿನಲ್ಲೇ ನಗರದ ಏಕತಾನತೆಯ ಬಂಜೆತನಕ್ಕೆ ಮದ್ದು, ಎಂಬಂತೆ ಹಳ್ಳಿಗಳು ಪಟ್ಟಣಿಗರನ್ನು ಸೆಳೆಯುತ್ತಿದೆ. ಅದನ್ನು ಪ್ರವಾಸಿತಾಣದಂತ ಆರ್ಥಿಕತೆಗೆ ಪೂರಕ ನೆಲವನ್ನಾಗಿ ನಾವು ಬದಲಾಯಿಸಿ ಕೊಳ್ಳಬೇಕು ಎಂದು ವಿವರಿಸಿದರು.<br /> <br /> ಕೆ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. `ಹಿನ್ನೀರ ದನಿ~ ಅಧ್ಯಕ್ಷ ಪಟೇಲ್ ಸುಭ್ರಾವ್ ದ್ವೀಪದ ಕುಂದುಕೊರತೆ ಬಗ್ಗೆ ಮನವಿ ಸಲ್ಲಿಸಿದರು.<br /> <br /> ನಂತರ, ನಡೆದ ಹುಟ್ಟೂರ ನೆನಪು ಕಾರ್ಯಕ್ರಮದಲ್ಲಿ ಕಿಡುದುಂಬೆ ರಾಮಚಂದ್ರಪ್ಪ, ಡಾ.ಜಯಪ್ರಕಾಶ ಮಾವಿನಕುಳಿ, ಡಾ.ತಿರುಮಲ ಮಾವಿನಕುಳಿ ಮುಂತಾದವರು ಮುಳುಗಡೆಯ ನೆನಪನ್ನು ಹಂಚಿಕೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮರಿ: ಮುಳುಗಡೆಯ ಜನರು ತಮ್ಮ ದ್ವೀಪದ ಸ್ಥಿತಿಯನ್ನು ಕಂಡು ಮರುಕಗೊಳ್ಳುವ ಮನಸ್ಥಿತಿಯಿಂದ ಹೊರಬಂದು ಬದಲಾದ ವರ್ತಮಾನದ ಜತೆ ಅನುಸಂಧಾನ ನಡೆಸುವ ಹೊಸದಾರಿಗಳ ಕಡೆ ಮುಖ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾರ್ಮಿಕವಾಗಿ ನುಡಿದರು.<br /> <br /> ಗೋಪಾಲಗೌಡ ರಂಗಮಂದಿರದಲ್ಲಿ ಹಿನ್ನೀರ ದನಿ ಸಾಮಾಜಿಕ ಸಂಘಟನೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ `ಹಿನ್ನೀರ ಹಬ್ಬ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಕಾಲದ ಜತೆಗೆ ಕ್ರಮಿಸುವುದು ನಮ್ಮ ನಿತ್ಯದ ತುರ್ತಾಗಿದೆ, ಯಾವ ದ್ವೀಪವು ನಿಮ್ಮ ಪಾಲಿಗೆ ಸಂಕಷ್ಟ ಸರಪಳಿಯನ್ನು ಸುತ್ತಿದಿಯೋ ಅದೇ ಪ್ರದೇಶ ಪಟ್ಟಣದ ಮಂದಿಗೆ ಆಕರ್ಷಣೆಯನ್ನು ಹುಟ್ಟಿಸುತ್ತಿದೆ. ಅದನ್ನು ಬಿಡಿಸಿಕೊಳ್ಳುವ ಸವಾಲು ಮಾತ್ರ ನಮ್ಮ ಮುಂದಿದೆ ಎಂದರು.<br /> <br /> ವಿದ್ಯಾವಂತ ಯುವ ಜನತೆ ಹಳ್ಳಿಯಿಂದ ಡೆಲ್ಲಿಯೆಡೆ ಧಾವಿಸುತ್ತಿರುವ ಹೊತ್ತಿನಲ್ಲೇ ನಗರದ ಏಕತಾನತೆಯ ಬಂಜೆತನಕ್ಕೆ ಮದ್ದು, ಎಂಬಂತೆ ಹಳ್ಳಿಗಳು ಪಟ್ಟಣಿಗರನ್ನು ಸೆಳೆಯುತ್ತಿದೆ. ಅದನ್ನು ಪ್ರವಾಸಿತಾಣದಂತ ಆರ್ಥಿಕತೆಗೆ ಪೂರಕ ನೆಲವನ್ನಾಗಿ ನಾವು ಬದಲಾಯಿಸಿ ಕೊಳ್ಳಬೇಕು ಎಂದು ವಿವರಿಸಿದರು.<br /> <br /> ಕೆ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. `ಹಿನ್ನೀರ ದನಿ~ ಅಧ್ಯಕ್ಷ ಪಟೇಲ್ ಸುಭ್ರಾವ್ ದ್ವೀಪದ ಕುಂದುಕೊರತೆ ಬಗ್ಗೆ ಮನವಿ ಸಲ್ಲಿಸಿದರು.<br /> <br /> ನಂತರ, ನಡೆದ ಹುಟ್ಟೂರ ನೆನಪು ಕಾರ್ಯಕ್ರಮದಲ್ಲಿ ಕಿಡುದುಂಬೆ ರಾಮಚಂದ್ರಪ್ಪ, ಡಾ.ಜಯಪ್ರಕಾಶ ಮಾವಿನಕುಳಿ, ಡಾ.ತಿರುಮಲ ಮಾವಿನಕುಳಿ ಮುಂತಾದವರು ಮುಳುಗಡೆಯ ನೆನಪನ್ನು ಹಂಚಿಕೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>