<p><strong>ಮಂಡ್ಯ:</strong> ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆರೋಗ್ಯ ವೃದ್ಧಿಗಾಗಿ ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ ಏರ್ಪಡಿಸಿರುವ `ಮೃತ್ಯುಂಜಯ ಹೋಮ~ ಪ್ರಯುಕ್ತ ಕಲಾತಂಡಗಳು, ಉತ್ಸವಮೂರ್ತಿಗಳ ಮೆರವಣಿಗೆಯನ್ನು ಸೋಮವಾರ ನಗರದಲ್ಲಿ ನಡೆಸಲಾಯಿತು.<br /> <br /> ಕಾಳಿಕಾಂಭ ದೇವಸ್ಥಾನದಿಂದ ಸರ್ಕಾರಿ ಮಹಾ ವಿದ್ಯಾಲಯದವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು. ಎತ್ತಿನಗಾಡಿಗಳಲ್ಲಿ ಕಾವೇರಿ ಮಾತೆ, ನಾಲ್ವಡಿ ಕೃಷ್ಣರಾಜ ಒಡೆಯರ್,ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಹಲವರ ಭಾವಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. <br /> <br /> ವಿವಿಧ ಜಾನಪದ ಕಲಾತಂಡಗಳು, ದೇವರ ಉತ್ಸವಮುರ್ತಿಗಳು, ಚಿಕ್ಕರಸಿನಕೆರೆ ಬಸವ, ಅಡ್ಡ ಪಲ್ಲಕ್ಕಿ ಇತ್ಯಾದಿಗಳ ಮೆರವಣಿಗೆಗೆ ಮಂಗಳವಾದ್ಯಗಳ ಹಿಮ್ಮೇಳವೂ ಇತ್ತು.<br /> <br /> ಅಚ್ಚುಕಟ್ಟು ಸಿದ್ಧತೆ: ನಗರದ ಸರ್ಕಾರಿ ಮಹಾ ವಿದ್ಯಾಲಯ ಆವರಣದಲ್ಲಿ `ಮೃತ್ಯುಂಜಯ ಹೋಮ~ಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಕುಡಿಯವ ನೀರು, ಊಟಕ್ಕೆ ಪ್ರತ್ಯೇಕ ಕೌಂಟರ್ ತೆರಯಲಾಗಿದೆ.<br /> <br /> ಬೆಳಿಗ್ಗೆ 6.5ರಿಂದ ಮಧ್ಯಾಹ್ನ 12.25ರ ವರೆಗೆ ಹೋಮ ನಡೆಯಲಿದೆ. ನಂತರ ಗುರುವಂದನಾ ಕಾರ್ಯಕ್ರಮ ಜರುಗಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆರೋಗ್ಯ ವೃದ್ಧಿಗಾಗಿ ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ ಏರ್ಪಡಿಸಿರುವ `ಮೃತ್ಯುಂಜಯ ಹೋಮ~ ಪ್ರಯುಕ್ತ ಕಲಾತಂಡಗಳು, ಉತ್ಸವಮೂರ್ತಿಗಳ ಮೆರವಣಿಗೆಯನ್ನು ಸೋಮವಾರ ನಗರದಲ್ಲಿ ನಡೆಸಲಾಯಿತು.<br /> <br /> ಕಾಳಿಕಾಂಭ ದೇವಸ್ಥಾನದಿಂದ ಸರ್ಕಾರಿ ಮಹಾ ವಿದ್ಯಾಲಯದವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು. ಎತ್ತಿನಗಾಡಿಗಳಲ್ಲಿ ಕಾವೇರಿ ಮಾತೆ, ನಾಲ್ವಡಿ ಕೃಷ್ಣರಾಜ ಒಡೆಯರ್,ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಹಲವರ ಭಾವಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. <br /> <br /> ವಿವಿಧ ಜಾನಪದ ಕಲಾತಂಡಗಳು, ದೇವರ ಉತ್ಸವಮುರ್ತಿಗಳು, ಚಿಕ್ಕರಸಿನಕೆರೆ ಬಸವ, ಅಡ್ಡ ಪಲ್ಲಕ್ಕಿ ಇತ್ಯಾದಿಗಳ ಮೆರವಣಿಗೆಗೆ ಮಂಗಳವಾದ್ಯಗಳ ಹಿಮ್ಮೇಳವೂ ಇತ್ತು.<br /> <br /> ಅಚ್ಚುಕಟ್ಟು ಸಿದ್ಧತೆ: ನಗರದ ಸರ್ಕಾರಿ ಮಹಾ ವಿದ್ಯಾಲಯ ಆವರಣದಲ್ಲಿ `ಮೃತ್ಯುಂಜಯ ಹೋಮ~ಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಕುಡಿಯವ ನೀರು, ಊಟಕ್ಕೆ ಪ್ರತ್ಯೇಕ ಕೌಂಟರ್ ತೆರಯಲಾಗಿದೆ.<br /> <br /> ಬೆಳಿಗ್ಗೆ 6.5ರಿಂದ ಮಧ್ಯಾಹ್ನ 12.25ರ ವರೆಗೆ ಹೋಮ ನಡೆಯಲಿದೆ. ನಂತರ ಗುರುವಂದನಾ ಕಾರ್ಯಕ್ರಮ ಜರುಗಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>