<p><strong>ಕಲಘಟಗಿ: </strong>ಅಂಗವಿಕಲತೆ, ಬಡತನದ ನಡುವೆಯೂ ತಾಲ್ಲೂಕಿನ ದಾಸ್ತಿಕೊಪ್ಪದ ಶೇಖರಗೌಡ ಪಾಟೀಲರ ಮಗ ಬಸನಗೌಡ ಪಾಟೀಲ ಕ್ರೀಡೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.<br /> <br /> ಜನತಾ ಇಂಗ್ಲಿಷ್ ವಿದ್ಯಾಲಯದಲ್ಲಿ ಆರನೇ ತರಗತಿ ಓದುತ್ತಿರುವ ಬಸವನಗೌಡ, ಸತತ ಎರಡನೇ ವರ್ಷ ಜಿಲ್ಲಾಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಬಾಲಕರ ಉದ್ದ ಜಿಗಿತ, ಭಲ್ಲೆ, ಮತ್ತು ಗುಂಡು ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟಕ್ಕೆ ಸಜ್ಜಾಗಿ ನಿಂತಿದ್ದಾನೆ.<br /> <br /> ಎರಡು ಕೋಣೆಗಳ ಪುಟ್ಟ ಮನೆಯಲ್ಲಿ ಕುಟುಂಬದ ಜೊತೆ ಬಸವನಗೌಡ ವಾಸವಾಗಿದ್ದಾರೆ. ಆತನ ಅಣ್ಣ ರವಿ ಮಿದುಳು ಜ್ವರದಿಂದ ಬಳಲುತ್ತಿದ್ದು, ತಂದೆ ಶೇಖರಗೌಡ ಪಾಟೀಲ ಬಲತೋಳಿನ ಚೈತನ್ಯ ಕಳೆದುಕೊಂಡಿದ್ದಾರೆ. ಬಟ್ಟೆ ಹಾಕಿಕೊಳ್ಳಲೂ ಪತ್ನಿಯ ನೆರವನ್ನು ಬೇಡುವ ಸ್ಥಿತಿ ಅವರಿಗೆ ಬಂದಿದೆ.<br /> <br /> ಕಿತ್ತು ತಿನ್ನುವ ಬಡತನವಿದ್ದರೂ ಬಸನಗೌಡನ ಸಹೋದರಿಯರು ಕಲಿಕೆ ನಿಲ್ಲಿಸಿಲ್ಲ. ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸಿದೇ ಬಸನಗೌಡ ಶ್ರದ್ಧೆಯಿಂದ ಓದು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.<br /> <br /> ದೈಹಿಕ ಶಿಕ್ಷಣ ಶಿಕ್ಷಕ ಡಿ.ಜಿ.ಪಾಟೀಲ ಮತ್ತು ಇತರ ಶಿಕ್ಷಕ ನೆರವನ್ನು ಸ್ಮರಿಸುವ ಬಸನಗೌಡ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಾನ ಗಿಟ್ಟಿಸುವ ಹಂಬಲ ಹೊಂದಿದ್ದಾನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ: </strong>ಅಂಗವಿಕಲತೆ, ಬಡತನದ ನಡುವೆಯೂ ತಾಲ್ಲೂಕಿನ ದಾಸ್ತಿಕೊಪ್ಪದ ಶೇಖರಗೌಡ ಪಾಟೀಲರ ಮಗ ಬಸನಗೌಡ ಪಾಟೀಲ ಕ್ರೀಡೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.<br /> <br /> ಜನತಾ ಇಂಗ್ಲಿಷ್ ವಿದ್ಯಾಲಯದಲ್ಲಿ ಆರನೇ ತರಗತಿ ಓದುತ್ತಿರುವ ಬಸವನಗೌಡ, ಸತತ ಎರಡನೇ ವರ್ಷ ಜಿಲ್ಲಾಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಬಾಲಕರ ಉದ್ದ ಜಿಗಿತ, ಭಲ್ಲೆ, ಮತ್ತು ಗುಂಡು ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟಕ್ಕೆ ಸಜ್ಜಾಗಿ ನಿಂತಿದ್ದಾನೆ.<br /> <br /> ಎರಡು ಕೋಣೆಗಳ ಪುಟ್ಟ ಮನೆಯಲ್ಲಿ ಕುಟುಂಬದ ಜೊತೆ ಬಸವನಗೌಡ ವಾಸವಾಗಿದ್ದಾರೆ. ಆತನ ಅಣ್ಣ ರವಿ ಮಿದುಳು ಜ್ವರದಿಂದ ಬಳಲುತ್ತಿದ್ದು, ತಂದೆ ಶೇಖರಗೌಡ ಪಾಟೀಲ ಬಲತೋಳಿನ ಚೈತನ್ಯ ಕಳೆದುಕೊಂಡಿದ್ದಾರೆ. ಬಟ್ಟೆ ಹಾಕಿಕೊಳ್ಳಲೂ ಪತ್ನಿಯ ನೆರವನ್ನು ಬೇಡುವ ಸ್ಥಿತಿ ಅವರಿಗೆ ಬಂದಿದೆ.<br /> <br /> ಕಿತ್ತು ತಿನ್ನುವ ಬಡತನವಿದ್ದರೂ ಬಸನಗೌಡನ ಸಹೋದರಿಯರು ಕಲಿಕೆ ನಿಲ್ಲಿಸಿಲ್ಲ. ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸಿದೇ ಬಸನಗೌಡ ಶ್ರದ್ಧೆಯಿಂದ ಓದು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.<br /> <br /> ದೈಹಿಕ ಶಿಕ್ಷಣ ಶಿಕ್ಷಕ ಡಿ.ಜಿ.ಪಾಟೀಲ ಮತ್ತು ಇತರ ಶಿಕ್ಷಕ ನೆರವನ್ನು ಸ್ಮರಿಸುವ ಬಸನಗೌಡ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಾನ ಗಿಟ್ಟಿಸುವ ಹಂಬಲ ಹೊಂದಿದ್ದಾನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>