<p>ಉಡುಪಿ: ‘ಸಾಂಸ್ಕೃತಿಕ ಮತ್ತು ಐತಿ ಹಾಸಿಕ ಮರು ಅಧ್ಯಯನ ಮಾಡುವ ಜವಾಬ್ದಾರಿ ಯುವ ಸಂಶೋಧಕರ ಮೇಲಿದೆ’ ಎಂದು ಪ್ಯಾರಿಸ್ನ ಸಮಾಜ ಮತ್ತು ಮನಶಾಸ್ತ್ರಜ್ಞ ಪ್ರೊ.ಗ್ಯಾಲಿ ಜೀನ್ ಕ್ಲಾಡೆ ಹೇಳಿದರು.<br /> <br /> ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶಿರ್ವದ ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಕುಂದಾಪುರದ ಕರ್ಕುಂಜೆ ಗ್ರಾಮದ ಬುದ್ಧನಜಡ್ಡುವಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರ’ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.<br /> <br /> ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರವು ಈಗಾಗಲೇ ಅನೇಕ ಐತಿಹಾಸಿಕ ವಿಷಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಕೆಲಸ ನಡೆಸಿದೆ. ಈ ಶತಮಾನದ ಅಥವಾ ಪ್ರಪ್ರಾಚೀನ ವಸ್ತುಗಳು, ಐತಿಹಾಸಿಕ ನೆಲೆಗಳು ನಮ್ಮ ಸುತ್ತಮುತ್ತ ಬಹಳಷ್ಟಿವೆ. ನಮ್ಮದೇ ಬುತ್ತಿ ನಮ್ಮದೇ ದುಡ್ಡು ಎನ್ನುವ ತತ್ವ–ಸಿದ್ಧಾಂತದ ಮೇಲೆ ಬಳಗದ ಸದಸ್ಯರುಗಳು ಕಾರ್ಯ ನಡೆಸುತ್ತಾ ಬಂದಿದ್ದಾರೆ ಎಂದರು.<br /> <br /> ಗ್ರೇಟ್ ಟೀಮ್ ಇಂಡಿಯಾನ ಸ್ಥಾಪಕ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಮಾತನಾಡಿ, ಮರು-ಅಧ್ಯಯನ ಮೂ ಲಕ ಸಮರ್ಥವಾಗಿ ದಾಖಲೆ ಗಳನ್ನು ರುಜುವಾತು ಮಾಡಬಹುದು, ಅನ್ವ ಯಿಕ ಶಾಸ್ತ್ರಗಳನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಮರು ಅಧ್ಯಯನ, ದತ್ತ ಜೋಡಣೆ, ಸಂರಕ್ಷಣೆ ಆಗಬೇಕು ಎಂದರು.<br /> <br /> ಕ್ಷೇತ್ರಕಾರ್ಯ ಶೋಧಕರಾದ ಶ್ರೀಧರ ಭಟ್- ಕಡಿಯಾಳಿ, ಸಂಶೋಧಕ ಶೇಜೇ ಶ್ವರ ನಾಯಕ್ ಹಾಗೂ ಪ್ರೊ.ಟಿ. ಮುರುಗೇಶಿ, ಪ್ರಶಾಂತ ಶೆಟ್ಟಿ, ಸ್ಥಳೀಯ ಸಂಘಟಕರಾದ ನಾಗೇಶ ಪೂಜಾರಿ ಮತ್ತು ಮಂಜು ಪೂಜಾರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ‘ಸಾಂಸ್ಕೃತಿಕ ಮತ್ತು ಐತಿ ಹಾಸಿಕ ಮರು ಅಧ್ಯಯನ ಮಾಡುವ ಜವಾಬ್ದಾರಿ ಯುವ ಸಂಶೋಧಕರ ಮೇಲಿದೆ’ ಎಂದು ಪ್ಯಾರಿಸ್ನ ಸಮಾಜ ಮತ್ತು ಮನಶಾಸ್ತ್ರಜ್ಞ ಪ್ರೊ.ಗ್ಯಾಲಿ ಜೀನ್ ಕ್ಲಾಡೆ ಹೇಳಿದರು.<br /> <br /> ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶಿರ್ವದ ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಕುಂದಾಪುರದ ಕರ್ಕುಂಜೆ ಗ್ರಾಮದ ಬುದ್ಧನಜಡ್ಡುವಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರ’ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.<br /> <br /> ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರವು ಈಗಾಗಲೇ ಅನೇಕ ಐತಿಹಾಸಿಕ ವಿಷಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಕೆಲಸ ನಡೆಸಿದೆ. ಈ ಶತಮಾನದ ಅಥವಾ ಪ್ರಪ್ರಾಚೀನ ವಸ್ತುಗಳು, ಐತಿಹಾಸಿಕ ನೆಲೆಗಳು ನಮ್ಮ ಸುತ್ತಮುತ್ತ ಬಹಳಷ್ಟಿವೆ. ನಮ್ಮದೇ ಬುತ್ತಿ ನಮ್ಮದೇ ದುಡ್ಡು ಎನ್ನುವ ತತ್ವ–ಸಿದ್ಧಾಂತದ ಮೇಲೆ ಬಳಗದ ಸದಸ್ಯರುಗಳು ಕಾರ್ಯ ನಡೆಸುತ್ತಾ ಬಂದಿದ್ದಾರೆ ಎಂದರು.<br /> <br /> ಗ್ರೇಟ್ ಟೀಮ್ ಇಂಡಿಯಾನ ಸ್ಥಾಪಕ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಮಾತನಾಡಿ, ಮರು-ಅಧ್ಯಯನ ಮೂ ಲಕ ಸಮರ್ಥವಾಗಿ ದಾಖಲೆ ಗಳನ್ನು ರುಜುವಾತು ಮಾಡಬಹುದು, ಅನ್ವ ಯಿಕ ಶಾಸ್ತ್ರಗಳನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಮರು ಅಧ್ಯಯನ, ದತ್ತ ಜೋಡಣೆ, ಸಂರಕ್ಷಣೆ ಆಗಬೇಕು ಎಂದರು.<br /> <br /> ಕ್ಷೇತ್ರಕಾರ್ಯ ಶೋಧಕರಾದ ಶ್ರೀಧರ ಭಟ್- ಕಡಿಯಾಳಿ, ಸಂಶೋಧಕ ಶೇಜೇ ಶ್ವರ ನಾಯಕ್ ಹಾಗೂ ಪ್ರೊ.ಟಿ. ಮುರುಗೇಶಿ, ಪ್ರಶಾಂತ ಶೆಟ್ಟಿ, ಸ್ಥಳೀಯ ಸಂಘಟಕರಾದ ನಾಗೇಶ ಪೂಜಾರಿ ಮತ್ತು ಮಂಜು ಪೂಜಾರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>