<p><strong>ಮುಜಫ್ಫರ್ಪುರ (ಪಿಟಿಐ): </strong>ಕಾಂಗ್ರೆಸ್ ಹಿತಾಸಕ್ತಿ ಕಾಯಲು ತೃತೀಯ ರಂಗ ರಚನೆಯಾಗಿದೆಯೇ ಹೊರತು ಅದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದರು.<br /> <br /> ಇಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ‘ವಾಸ್ತವವಾಗಿ ತೃತೀಯ ರಂಗ ರಚನೆಯಾಗಿದ್ದೇ ಕಾಂಗ್ರೆಸ್ ಹಿತಾಸಕ್ತಿ ಕಾಯಲು’ ಎಂದರು.<br /> <br /> ‘ಒಂದು ವರ್ಷ ಇಲ್ಲವೆ ಆರು ತಿಂಗಳ ಹಿಂದೆ ನೀವೇನಾದರೂ ತೃತೀಯ ರಂಗದ ಹೆಸರು ಕೇಳಿದ್ದೀರಾ ?, ಚುನಾವಣೆ ಸಮಯದಲ್ಲೇ ಇದು ಅಸ್ತಿತ್ವದಲ್ಲಿ ಬಂದಿದೆ. ಚುನಾವಣೆ ವ್ಯವಸ್ಥೆಯನ್ನು ಇದು ಹಾಳು ಮಾಡಬಹುದೇ ವಿನಾ ಇದರಿಂದ ದೇಶಕ್ಕೇನೂ ಉಪಯೋಗ ಇಲ್ಲ’ ಎಂದರು.<br /> <br /> ಈಚೆಗೆ ಎನ್ಡಿಎ ಜತೆ ಗುರುತಿಸಿಕೊಂಡ ಎಲ್ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹಾಗೂ ರಾಷ್ಟ್ರೀಯ ಲೋಕಸಮತಾ ಪಕ್ಷದ ಉಪೇಂದ್ರ ಕುಶ್ವಾಲಾ ಅವರೂ ಮೋದಿ ಜತೆಗೆ ವೇದಿಕೆಯಲ್ಲಿದ್ದರು.<br /> <br /> <strong>ಎನ್ಡಿಎ ತೆಕ್ಕೆಗೆ ಮತ್ತಷ್ಟು ಪಕ್ಷಗಳು:</strong> ಮತ್ತಷ್ಟು ರಾಜಕೀಯ ಪಕ್ಷಗಳು ಬಿಜೆಪಿ ನೇತೃತ್ವದ ಎನ್ಡಿಎ ಸೇರಲಿವೆ ಎಂದು ನರೇಂದ್ರ ಮೋದಿ ಸುಳಿವು ನೀಡಿದರು.<br /> <br /> ‘ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಕ್ಕೆ ಬಂದ ಮೇಲೆ ಮತ್ತಷ್ಟು ಪಕ್ಷಗಳು ನಮ್ಮನ್ನು ಸೇರಲು ಉತ್ಸುಕವಾಗಿವೆ. ಎನ್ಡಿಎ ವಿಸ್ತರಣೆಯಾಗುತ್ತಿದೆ’ ಎಂದರು.<br /> <br /> ‘ಮತಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಿಹಾರದ ನಿತಿಶ್ಕುಮಾರ್ ಸರ್ಕಾರ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಮೃದು ಧೋರಣೆ ತಾಳಿದೆ ಎಂದರು.<br /> <br /> <strong>ಮಾನನಷ್ಟ ಅರ್ಜಿ ವಜಾ<br /> ನವದೆಹಲಿ (ಐಎಎನ್ಎಸ್):</strong> ನರೇಂದ್ರ ಮೋದಿ ವಿರುದ್ಧ ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.</p>.<p>ಈ ಪ್ರಕರಣದ ವಿಚಾರಣೆಗೆ ಇದುವರೆಗೆ ಶ್ರೀಕುಮಾರ್ ಅವರು ಹಾಜರಾಗದ್ದನ್ನು ಗಮನಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಈ ಮೊಕದ್ದಮೆಯನ್ನು ವಜಾಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಫ್ಫರ್ಪುರ (ಪಿಟಿಐ): </strong>ಕಾಂಗ್ರೆಸ್ ಹಿತಾಸಕ್ತಿ ಕಾಯಲು ತೃತೀಯ ರಂಗ ರಚನೆಯಾಗಿದೆಯೇ ಹೊರತು ಅದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದರು.<br /> <br /> ಇಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ‘ವಾಸ್ತವವಾಗಿ ತೃತೀಯ ರಂಗ ರಚನೆಯಾಗಿದ್ದೇ ಕಾಂಗ್ರೆಸ್ ಹಿತಾಸಕ್ತಿ ಕಾಯಲು’ ಎಂದರು.<br /> <br /> ‘ಒಂದು ವರ್ಷ ಇಲ್ಲವೆ ಆರು ತಿಂಗಳ ಹಿಂದೆ ನೀವೇನಾದರೂ ತೃತೀಯ ರಂಗದ ಹೆಸರು ಕೇಳಿದ್ದೀರಾ ?, ಚುನಾವಣೆ ಸಮಯದಲ್ಲೇ ಇದು ಅಸ್ತಿತ್ವದಲ್ಲಿ ಬಂದಿದೆ. ಚುನಾವಣೆ ವ್ಯವಸ್ಥೆಯನ್ನು ಇದು ಹಾಳು ಮಾಡಬಹುದೇ ವಿನಾ ಇದರಿಂದ ದೇಶಕ್ಕೇನೂ ಉಪಯೋಗ ಇಲ್ಲ’ ಎಂದರು.<br /> <br /> ಈಚೆಗೆ ಎನ್ಡಿಎ ಜತೆ ಗುರುತಿಸಿಕೊಂಡ ಎಲ್ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹಾಗೂ ರಾಷ್ಟ್ರೀಯ ಲೋಕಸಮತಾ ಪಕ್ಷದ ಉಪೇಂದ್ರ ಕುಶ್ವಾಲಾ ಅವರೂ ಮೋದಿ ಜತೆಗೆ ವೇದಿಕೆಯಲ್ಲಿದ್ದರು.<br /> <br /> <strong>ಎನ್ಡಿಎ ತೆಕ್ಕೆಗೆ ಮತ್ತಷ್ಟು ಪಕ್ಷಗಳು:</strong> ಮತ್ತಷ್ಟು ರಾಜಕೀಯ ಪಕ್ಷಗಳು ಬಿಜೆಪಿ ನೇತೃತ್ವದ ಎನ್ಡಿಎ ಸೇರಲಿವೆ ಎಂದು ನರೇಂದ್ರ ಮೋದಿ ಸುಳಿವು ನೀಡಿದರು.<br /> <br /> ‘ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಕ್ಕೆ ಬಂದ ಮೇಲೆ ಮತ್ತಷ್ಟು ಪಕ್ಷಗಳು ನಮ್ಮನ್ನು ಸೇರಲು ಉತ್ಸುಕವಾಗಿವೆ. ಎನ್ಡಿಎ ವಿಸ್ತರಣೆಯಾಗುತ್ತಿದೆ’ ಎಂದರು.<br /> <br /> ‘ಮತಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಿಹಾರದ ನಿತಿಶ್ಕುಮಾರ್ ಸರ್ಕಾರ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಮೃದು ಧೋರಣೆ ತಾಳಿದೆ ಎಂದರು.<br /> <br /> <strong>ಮಾನನಷ್ಟ ಅರ್ಜಿ ವಜಾ<br /> ನವದೆಹಲಿ (ಐಎಎನ್ಎಸ್):</strong> ನರೇಂದ್ರ ಮೋದಿ ವಿರುದ್ಧ ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.</p>.<p>ಈ ಪ್ರಕರಣದ ವಿಚಾರಣೆಗೆ ಇದುವರೆಗೆ ಶ್ರೀಕುಮಾರ್ ಅವರು ಹಾಜರಾಗದ್ದನ್ನು ಗಮನಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಈ ಮೊಕದ್ದಮೆಯನ್ನು ವಜಾಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>