<p>ಕೂಡ್ಲಿಗಿ: ಕತೆ, ಕವನ, ಸಾಹಿತ್ಯಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಆದರೆ, ಕೃಷಿ ಸಂಬಂಧಿತ ಬರಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿ ಪ್ರಧಾನ ಬರಹಗಳನ್ನು ದಾಖಲೀಕರಿಸುವುದು ಅಗತ್ಯವಾಗಿದೆ ಎಂದು ಕೃಷಿ ತಜ್ಞ, ಹಾಸನ ಆಕಾಶವಾಣಿ ಅಧಿಕಾರಿ ಡಾ.ವಿಜಯ್ ಅಂಗಡಿ ತಿಳಿಸಿದರು.<br /> <br /> ತಾಲ್ಲೂಕಿನ ಕಾನಮಡುಗು ದಾಸೋಹ ಮಠದಲ್ಲಿ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಬಯಲುಸೀಮೆ ರೈತರ ಯಶೋಗಾಥೆಗಳು ಪುಸ್ತಕ ಬಿಡುಗಡೆ ಮತ್ತು ಜಾನಪದ ಸಿಂಚನ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.<br /> <br /> ಪುಸ್ತಕದಲ್ಲಿ ದಾಖಲಿಸಿದ ಸಂಗತಿಗಳು ಜೀವಂತವಿರುತ್ತವೆ. ಕೃಷಿ, ಪರಿಸರ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡಿ ರೈತರು, ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪರಿಸರ ಮತ್ತು ಕೃಷಿ ಕುರಿತು ಹೆಚ್ಚಾಗಿ ಜಾಗೃತಿ ಮೂಡಬೇಕಿದೆ ಎಂದರು.<br /> <br /> ಪರಿಸರ ಪ್ರೇಮಿ ಸಾವಜ್ಜಿ ರಾಜೇಂದ್ರ ಪ್ರಸಾದ್ ಪುಸ್ತಕ ಬಿಡುಗಡೆಗೊಳಿಸಿದರು. ಕಾನಮಡುಗು ದಾ.ಮ.ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಎಂ. ಶಶಿಧರ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಾಜಿ ಅಧ್ಯಕ್ಷ ಎನ್.ಎಂ. ರವಿಕುಮಾರ್, ಕಿರುತೆರೆ ನಿರ್ದೇಶಕ ವೆಂಕಟೇಶ್ ಕೊಟ್ಟೂರು ಮಾತನಾಡಿದರು.<br /> <br /> ಪ್ರಗತಿ ಪರ ಕೃಷಿಕರಾದ ಎಚ್. ಚಿದಾನಂದಪ್ಪ, ಗುಡೇಕೋಟೆ ಬೇಕರಿ ಸುರೇಶ್, ದೂಪದಹಳ್ಳಿ ತಳವಾರ ನಾಗರಾಜ, ಎ.ಚನ್ನಬಸಪ್ಪ, ಬಸವರಾಜ ಮಾಕನಡುಕು ಹುಲಿಕೆರೆ ಎಚ್.ವಿ. ಸಜ್ಜನ್, ಸುಲೋಚನಾ ಸಜ್ಜನ್, ನಾಗರಕಟ್ಟೆ ರಾಜೇಂದ್ರಪ್ರಸಾದ್, ಹರಾಳು ಕೆ.ನಾಗರಾಜ್, ವೆಂಕಟೇಶ್ ಕೊಟ್ಟೂರು, ರಾರಾವಿ ಚಿದಾನಂದ ಗವಾಯಿ ಅವರನ್ನು ಸನ್ಮಾನಿಸಲಾಯಿತು.<br /> <br /> ಕಂಪ್ಲಿ ಪ್ರಶಾಂತ್ ಕುಮಾರ್, ಗೊಂದಲಿಗರ ಹನುಮಂತಪ್ಪ, ಹರಾಳು ಗೋಣೆಪ್ಪ, ಗುರುಶಂಕ್ರಪ್ಪ ಜಾನಪದ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಭೀಮಸಮುದ್ರ ಪೂಜಾ ಪ್ರಾರ್ಥಿಸಿದರು. ಟಿ.ಶರಣಪ್ಪ ಸ್ವಾಗತಿಸಿದರು. ಪಿ. ಶಿವರಾಜ ನಿರೂಪಿಸಿದರು. ಭೀಮಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೂಡ್ಲಿಗಿ: ಕತೆ, ಕವನ, ಸಾಹಿತ್ಯಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಆದರೆ, ಕೃಷಿ ಸಂಬಂಧಿತ ಬರಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿ ಪ್ರಧಾನ ಬರಹಗಳನ್ನು ದಾಖಲೀಕರಿಸುವುದು ಅಗತ್ಯವಾಗಿದೆ ಎಂದು ಕೃಷಿ ತಜ್ಞ, ಹಾಸನ ಆಕಾಶವಾಣಿ ಅಧಿಕಾರಿ ಡಾ.ವಿಜಯ್ ಅಂಗಡಿ ತಿಳಿಸಿದರು.<br /> <br /> ತಾಲ್ಲೂಕಿನ ಕಾನಮಡುಗು ದಾಸೋಹ ಮಠದಲ್ಲಿ ಪತ್ರಕರ್ತ ಭೀಮಣ್ಣ ಗಜಾಪುರ ಅವರ ಬಯಲುಸೀಮೆ ರೈತರ ಯಶೋಗಾಥೆಗಳು ಪುಸ್ತಕ ಬಿಡುಗಡೆ ಮತ್ತು ಜಾನಪದ ಸಿಂಚನ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.<br /> <br /> ಪುಸ್ತಕದಲ್ಲಿ ದಾಖಲಿಸಿದ ಸಂಗತಿಗಳು ಜೀವಂತವಿರುತ್ತವೆ. ಕೃಷಿ, ಪರಿಸರ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡಿ ರೈತರು, ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪರಿಸರ ಮತ್ತು ಕೃಷಿ ಕುರಿತು ಹೆಚ್ಚಾಗಿ ಜಾಗೃತಿ ಮೂಡಬೇಕಿದೆ ಎಂದರು.<br /> <br /> ಪರಿಸರ ಪ್ರೇಮಿ ಸಾವಜ್ಜಿ ರಾಜೇಂದ್ರ ಪ್ರಸಾದ್ ಪುಸ್ತಕ ಬಿಡುಗಡೆಗೊಳಿಸಿದರು. ಕಾನಮಡುಗು ದಾ.ಮ.ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಎಂ. ಶಶಿಧರ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಾಜಿ ಅಧ್ಯಕ್ಷ ಎನ್.ಎಂ. ರವಿಕುಮಾರ್, ಕಿರುತೆರೆ ನಿರ್ದೇಶಕ ವೆಂಕಟೇಶ್ ಕೊಟ್ಟೂರು ಮಾತನಾಡಿದರು.<br /> <br /> ಪ್ರಗತಿ ಪರ ಕೃಷಿಕರಾದ ಎಚ್. ಚಿದಾನಂದಪ್ಪ, ಗುಡೇಕೋಟೆ ಬೇಕರಿ ಸುರೇಶ್, ದೂಪದಹಳ್ಳಿ ತಳವಾರ ನಾಗರಾಜ, ಎ.ಚನ್ನಬಸಪ್ಪ, ಬಸವರಾಜ ಮಾಕನಡುಕು ಹುಲಿಕೆರೆ ಎಚ್.ವಿ. ಸಜ್ಜನ್, ಸುಲೋಚನಾ ಸಜ್ಜನ್, ನಾಗರಕಟ್ಟೆ ರಾಜೇಂದ್ರಪ್ರಸಾದ್, ಹರಾಳು ಕೆ.ನಾಗರಾಜ್, ವೆಂಕಟೇಶ್ ಕೊಟ್ಟೂರು, ರಾರಾವಿ ಚಿದಾನಂದ ಗವಾಯಿ ಅವರನ್ನು ಸನ್ಮಾನಿಸಲಾಯಿತು.<br /> <br /> ಕಂಪ್ಲಿ ಪ್ರಶಾಂತ್ ಕುಮಾರ್, ಗೊಂದಲಿಗರ ಹನುಮಂತಪ್ಪ, ಹರಾಳು ಗೋಣೆಪ್ಪ, ಗುರುಶಂಕ್ರಪ್ಪ ಜಾನಪದ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಭೀಮಸಮುದ್ರ ಪೂಜಾ ಪ್ರಾರ್ಥಿಸಿದರು. ಟಿ.ಶರಣಪ್ಪ ಸ್ವಾಗತಿಸಿದರು. ಪಿ. ಶಿವರಾಜ ನಿರೂಪಿಸಿದರು. ಭೀಮಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>