<p><strong>ಹೈದರಾಬಾದ್: </strong>ಮತದಾನದ ಮಹತ್ವ ಸಾರಲು ಟಾಲಿವುಡ್ನಲ್ಲಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಹೋಲುವ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ.<br /> <br /> ತೆಲುಗು ಹಾಸ್ಯ ನಟ ಎಂ.ಎಸ್. ನಾರಾಯಣ ಅವರು ಕೇಜ್ರಿವಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ವಿಡಂಬನಾತ್ಮಕ ಚಿತ್ರದ ಹೆಸರು ‘ಕ್ರೇಜಿವಾಲಾ’. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಉದ್ದೇಶಿಸಲಾಗಿದ್ದು, ಈ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.<br /> ನಾರಾಯಣ ಅವರು ಮೊಹಮ್ಮದ್ ಗಡಾಫಿ ಸೇರಿ ಹಲವು ರಾಜಕೀಯ ವ್ಯಕ್ತಿಗಳ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ರೇಜಿವಾಲಾ’ ಚಿತ್ರದಲ್ಲಿ ಅವರು ಕೇಜ್ರಿವಾಲ್ ಅನುಕರಣೆ ಮಾಡಲಿದ್ದಾರೆ.<br /> <br /> ‘ಕ್ರೇಜಿವಾಲಾ’ ಚಿತ್ರ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಕುರಿತಾಗಿ ಇಲ್ಲ. ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿಸಲು ಮಾಡುತ್ತಿರುವ ಸಣ್ಣ ಪ್ರಯತ್ನ ಎಂದು ಚಿತ್ರ ನಿರ್ದೇಶಕ ಮೊಹನಾ ಪ್ರಸಾದ್ ತಿಳಿಸಿದ್ದಾರೆ.<br /> <br /> ‘ಎಎಪಿ ಅನುಮತಿ ಪಡೆದ ಬಳಿಕವಷ್ಟೇ ಚಿತ್ರೀಕರಣ ಆರಂಭಿಸಲಾಗಿದೆ. ಅಗತ್ಯಬಿದ್ದಲ್ಲಿ ಅವರಿಗೆ ಚಿತ್ರ ತೋರಿಸುತ್ತೇವೆ’ ಎಂದು ಪ್ರಸಾದ್ ಹೇಳಿದ್ದಾರೆ.<br /> ‘ಚಿತ್ರದ ಪೋಸ್ಟರ್ಗಳಲ್ಲಿ ನಾರಾಯಣ ಅವರು ಕೇಜ್ರಿವಾಲ್ನಂತೆ ಕಾಣಿಸಿಕೊಂಡಿದ್ದಾರೆ. ಆದರೆ, ನಮ್ಮ ಉದ್ದೇಶ ಎಎಪಿ ಮುಖಂಡನ ಕುರಿತು ಚಿತ್ರ ಮಾಡುವುದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ‘ನಿಮ್ಮ ಹಣೆಬರಹ ನಿಮ್ಮ ಕೈಯಲ್ಲೇ ಇದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಫಿಲ್ಮ್ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.<br /> <br /> ‘ನಾವು ಕೇವಲ ಕೇಜ್ರಿವಾಲ್ ಅವರ ವೇಷವನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಜನರ ಕುತೂಹಲ ಸೆಳೆಯಲು ಮತ್ತು ಆ ಪಕ್ಷದ ಕೆಲ ಉತ್ತಮ ವಿಚಾರಧಾರೆಗಳನ್ನು ಪ್ರಸ್ತಾಪಿಸಿದ್ದೇವೆ. ಆದರೆ, ನಮ್ಮ ಅಂತಿಮ ಉದ್ದೇಶ ಮತದಾನದ ಮಹತ್ವ ಸಾರುವುದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ಮತದಾನದ ಮಹತ್ವ ಸಾರಲು ಟಾಲಿವುಡ್ನಲ್ಲಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಹೋಲುವ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ.<br /> <br /> ತೆಲುಗು ಹಾಸ್ಯ ನಟ ಎಂ.ಎಸ್. ನಾರಾಯಣ ಅವರು ಕೇಜ್ರಿವಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ವಿಡಂಬನಾತ್ಮಕ ಚಿತ್ರದ ಹೆಸರು ‘ಕ್ರೇಜಿವಾಲಾ’. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಉದ್ದೇಶಿಸಲಾಗಿದ್ದು, ಈ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.<br /> ನಾರಾಯಣ ಅವರು ಮೊಹಮ್ಮದ್ ಗಡಾಫಿ ಸೇರಿ ಹಲವು ರಾಜಕೀಯ ವ್ಯಕ್ತಿಗಳ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ರೇಜಿವಾಲಾ’ ಚಿತ್ರದಲ್ಲಿ ಅವರು ಕೇಜ್ರಿವಾಲ್ ಅನುಕರಣೆ ಮಾಡಲಿದ್ದಾರೆ.<br /> <br /> ‘ಕ್ರೇಜಿವಾಲಾ’ ಚಿತ್ರ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಕುರಿತಾಗಿ ಇಲ್ಲ. ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿಸಲು ಮಾಡುತ್ತಿರುವ ಸಣ್ಣ ಪ್ರಯತ್ನ ಎಂದು ಚಿತ್ರ ನಿರ್ದೇಶಕ ಮೊಹನಾ ಪ್ರಸಾದ್ ತಿಳಿಸಿದ್ದಾರೆ.<br /> <br /> ‘ಎಎಪಿ ಅನುಮತಿ ಪಡೆದ ಬಳಿಕವಷ್ಟೇ ಚಿತ್ರೀಕರಣ ಆರಂಭಿಸಲಾಗಿದೆ. ಅಗತ್ಯಬಿದ್ದಲ್ಲಿ ಅವರಿಗೆ ಚಿತ್ರ ತೋರಿಸುತ್ತೇವೆ’ ಎಂದು ಪ್ರಸಾದ್ ಹೇಳಿದ್ದಾರೆ.<br /> ‘ಚಿತ್ರದ ಪೋಸ್ಟರ್ಗಳಲ್ಲಿ ನಾರಾಯಣ ಅವರು ಕೇಜ್ರಿವಾಲ್ನಂತೆ ಕಾಣಿಸಿಕೊಂಡಿದ್ದಾರೆ. ಆದರೆ, ನಮ್ಮ ಉದ್ದೇಶ ಎಎಪಿ ಮುಖಂಡನ ಕುರಿತು ಚಿತ್ರ ಮಾಡುವುದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ‘ನಿಮ್ಮ ಹಣೆಬರಹ ನಿಮ್ಮ ಕೈಯಲ್ಲೇ ಇದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಫಿಲ್ಮ್ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.<br /> <br /> ‘ನಾವು ಕೇವಲ ಕೇಜ್ರಿವಾಲ್ ಅವರ ವೇಷವನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಜನರ ಕುತೂಹಲ ಸೆಳೆಯಲು ಮತ್ತು ಆ ಪಕ್ಷದ ಕೆಲ ಉತ್ತಮ ವಿಚಾರಧಾರೆಗಳನ್ನು ಪ್ರಸ್ತಾಪಿಸಿದ್ದೇವೆ. ಆದರೆ, ನಮ್ಮ ಅಂತಿಮ ಉದ್ದೇಶ ಮತದಾನದ ಮಹತ್ವ ಸಾರುವುದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>